ಜುಲೈ 16ರಂದು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಮುಷ್ಕರ
ಬಳ್ಳಾರಿ03: ಭವಿಷ್ಯ ನಿಧಿ ವಿಚಾರಣೆಗೆ ಹಾಜರಾಗಬೇಕು. ಈ ಕುರಿತು ಹೈಕೊಟರ್್ ನಲ್ಲಿ ಸಲ್ಲಿಸಿರುವ ರಿಟ್ ಅಜರ್ಿಯನ್ನು ಹಿಂಪಡೆಯಬೇಕು. ಸೇರಿದಂತೆ ಹಲವು ಬೇಡಿಕೆಗಳ ಈಡೆರಿಕೆಗೆ ಈ ತಿಂಗಳು 16ರಂದು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ನೌಕರರಿಂದ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟ ಇದಕ್ಕೆ ಕರೆ ನೀಡಿದೆ ಎಂದು ಒಕ್ಕೂಟದ ಗೌರವಧ್ಯಕ್ಷ ಎಂ.ರಾಮ್ರಾವ್ ತಿಳಿಸಿದರು. ಈ ಕುರಿತು ಪತ್ರಿಕಾಭವನದಲ್ಲಿ ಸೋಮುವಾರ ಪತ್ರಿಕಾ ಗೋಷ್ಟಿನಡೆಸಿದ ಅವರು ಬ್ಯಾಂಕಿನ ಕ್ಯಾಜಿವಲ್ ನೌಕರರಿಗೆ ನೀಡಬೇಕಾಗಿದ್ದ ಭವಿಷ್ಯ ನಿಧಿ ವಿಚಾರದಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಇಲಾಖೆ ವಿಚಾರಣೆ ಎದುರಿಸದೇ ವಿಚಾರಣೆ ವಿರುದ್ದ ಸಲ್ಲಿಸಿರುವ ರಿಟ್ ಹಿಂಪಡೆಯಬೇಕು. ಬ್ಯಾಂಕ್ ಲಾಭದಾಯಕವಾಗಿದ್ದರೂ ನೌಕರರ ಹಿತ ಕಾಯದೇ ಬ್ಯಾಂಕಿನ ಉನ್ನತ ಅಧಿಕಾರಿಗಳು ವಂಚನೆ ಮಾಡುತ್ತಿದ್ದಾರೆ. ಹೈಕೊಟರ್್ ಆದೇಶದಂತೆ ನಿವೃತ್ತಿ ವೇತನವನ್ನು ನೀಡದೇ ಬ್ಯಾಂಕ್ ನೌಕರರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು. ಟೆಂಪರ್ವರಿ ಸಬ್ಸ್ಟಾಫ್ ನೌಕರರನ್ನು ಖಾಯಂ ಗೊಳಿಸಬೇಕು. ದೇಶದ ಪ್ರತಿ ರಾಜ್ಯದಲ್ಲಿ ಒಂದೇ ಗ್ರಾಮೀಣ ಬ್ಯಾಂಕ್ ಮಾಡುವ ಪ್ರಕ್ರೀಯೆ ಆರಂಭಗೊಂಡಿದ್ದು ರಾಜ್ಯದ ಎಲ್ಲಾ ಗ್ರಾಮೀಣ ಬ್ಯಾಂಕಗಳನ್ನು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ನಲ್ಲಿ ವಿಲಿನಗೊಳಿಸಲು ಒಪ್ಪಿಗೆ ಸೂಚಿಸಬೇಕು. ಎಂದು ಆಗ್ರಹಿಸಿ ಜು.16ರಂದು ಬ್ಯಾಂಕಿನ ಪ್ರಧಾನ ಕಛೇರಿಯ ಮುಂದೆ ಮುಷ್ಕರ ನಡೆಸಲಿವೆ.
ಇದಕ್ಕೆ ಬ್ಯಾಂಕಿನ ಇತರ ನೌಕರರ ಸಂಘಟನೆಗಳ ಬೆಂಬಲ ಕೋರಿದೆ ಎಂದರು. ನಮ್ಮ ಬೇಡಿಕೆಗಳ ಬಗ್ಗೆ ಈ ಹಿಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದಾಗ ಬ್ಯಾಂಕಿನ ಜಿ.ಎಂ ಈ ವಿಷಯ ನನಗೆ ಗೊತ್ತಿಲ್ಲ. ಅಧ್ಯಕ್ಷರಿಗೆ ಕೇಳಿ ಎಂದು ನಿರ್ಲಕ್ಷತನದಿಂದ ವತರ್ಿಸಿರುವುದನ್ನು ಒಕ್ಕೂಟ ಖಂಡಿಸುತ್ತದೆ ಎಂದರು. ಈ ಸುದ್ದಿಗೋಷ್ಟಿಯಲ್ಲಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟದ ಅಧ್ಯಕ್ಷ ಹೆಚ್. ತಿಪ್ಪೆಸ್ವಾವಿ, ಪ್ರಧಾನ ಕಾರ್ಯದಶರ್ಿ ಎನ್.ಆಂಜೀನ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ 