ಹೂವಿನಹಡಗಲಿ: ಜಾನಪದ ಕಲೆಗಳಿಗೆ ಪ್ರೋತ್ಸಾಹ ಅಗತ್ಯ: ಡಾ.ಅಂಜನಾ
ಲೋಕದರ್ಶನ ವರದಿ
ಹೂವಿನಹಡಗಲಿ 09: ಎಲ್ಲಾ ಸಾಹಿತ್ಯಕ್ಕೆ ಜಾನಪದ ಸಾಹಿತ್ಯ ತಾಯಿ ಬೇರು. ಜಾನಪದ ಕಲೆಗಳು ಗ್ರಾಮೀಣ ಭಾಗದಲ್ಲಿ ಹೆಚ್ಚು ಹೆಚ್ಚು ಇರುವುದರಿಂದ ಆಭಾಗದ ಕಲಾವಿದರಿಗೆ ಪ್ರೋತ್ಸಾಹಿಸಿದರೆ ಕಲೆ ಜೀವಂತ ಉಳಿಯಲು ಸಾದ್ಯ ವೆಂದು ಹಿರಿಯ ಸಾಹಿತಿ ಡಾ.ಅಂಜನಾ ಕೃಷ್ಣಪ್ಪ ಹೆಳಿದರು.
ಹಡಗಲಿಯ ಗವಿಮಠದಲ್ಲಿ ಮಲ್ಲಿಗೆ ಯುವಕ ಸಂಘ ಹಾಗೂ ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಪ್ರಾಯೋಜನ ಅಡಿಯಲ್ಲಿ ಜಾನಪದ ಸಂಭ್ರಮ ಉದ್ಘಾಟಿಸಿ ಮಾತನಾಡಿದ ಅವರು ಡಿಜಿ ಯುಗದಲ್ಲಿ ಜಾನಪದ ಸಾಹಿತ್ಯ ಕಲೆಗಳು ನಶಿಸಿ ಹೊರಟಿವೆ ಇಂದಿನ ಯುವ ಪೀಳಿಗೆ ಅವುಗಳನ್ನು ಉಳಿಸಿ ಬೆಳಸಲು ಮುಂದಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗವಿಶ್ರೀ ಅಕ್ಕನ ಬಳಗದ ಮಹಿಳಾ ಟ್ರಷ್ಟಿನ ಕಾರ್ಯದಶರ್ಿ ಜಿ. ಗಂಗಮ್ಮ ವಹಿಸಿದ್ದರು. ಅತಿಥಿಗಳಾಗಿ ಕಲಾಪೋಷಕ ನಾವಡೆ ಮಂಜುನಾಥ ಶ್ರೀಮತಿ ಶಕುಂತಲ ನಿವೃತ್ತ ಎ.ಎಸ್.ಐ. ಕೆ.ವೀರಣ್ಣ ಉಪಸ್ಥಿತರಿದ್ದರು ನಂತರ ಜನಪದ ಸಂಭ್ರಮವನ್ನು ಜಾನಪದ ಕಲಾವಿದ ಕೆ.ಸಿ.ಪರಶುರಾಮ ಅಂಗೂರು, ಕೆ.ಅಶೋಕ, ತಬಲಾ ಸಾತ್ ಟಿ.ರಾಮಪ್ಪ, ಕ್ಯಾಸಿಯೋ ಟಿ.ತಿಮ್ಮಣ್ಣ ಸಾದರ ಪಡಿಸಿದರು. ಆರಂಭದಲ್ಲಿ ಬಿ.ಎಂ. ಪರಶುರಾಮ ಸ್ವಾಗತಿಸಿದರು ಕೊನೆಯಲ್ಲಿ ಕೆ.ದುರುಗೇಶ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 