ಚಡಚಣ: ಕೆಸರು ಗದ್ದೆಯಾದ ರಸ್ತೆ ಗಮನ ಹರಿಸದ ಅಧಿಕಾರಿಗಳು
ಲೋಕದರ್ಶನ ವರದಿ
ಚಡಚಣ 12: ಸಮೀಪದ ನಿವರಗಿಯಿಂದ ಭಂಢರಕವಟೆ ಮಾರ್ಗ ಮಧ್ಯದ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿ ಹಿನ್ನಲೆ ರೈತರು, ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ರೈತರು, ವಿದ್ಯಾರ್ಥಿಗಳು ಹಾಗೂ ವೃದ್ಧರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ತೀವ್ರ ತೊಂದರೆ ಅನುಭವಿಸುತ್ತಿದ್ದು. ಕಾರಣ ರಸ್ತೆ ಬದುಗಳಲ್ಲಿರುವ ಕೇಲವರು ರಸ್ತೆ ಒತ್ತುವರಿ ಮಾಡಿರುವುದರಿಂದ ರಸ್ತೆಯು ಚಿಕ್ಕದಾಗಿದ್ದು. ಅಲ್ಲದೇ ರೈತರ ಜಮೀನುಗಳಲ್ಲಿನ ನೀರು ಕೂಡಾ ರಸ್ತೆ ಮೇಲೆ ನಿಂತು ರಸ್ತೆ ಕೆಸರುಮಯವಾಗುತ್ತಿರುವುದ್ದಲ್ಲದೆ. ಮಳೆಗಾಲದಲ್ಲಂತು ಈ ರಸ್ತೆಯ ಮೇಲೆ ತಿರುಗಾಡುವುದು ದುಸ್ಥರವಾಗುತ್ತಿದ್ದು. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ. ರಸ್ತೆ ವತ್ತುವರಿಯನ್ನು ತೆರವುಗೊಳಿಸಿ. ರಸ್ತೆಯನ್ನು ದುರಸ್ಥಿಗೊಳಿಸಬೇಕಾಗಿದೆ ಎಂದು ರೈತರು ಆಗ್ರಹಿಸುತ್ತಿದ್ದಾರೆ.
ರಸ್ತೆ ತುಂಬ ಗುಂಡು ಕಲ್ಲುಗಳು ತುಂಬಿದ್ದು. ಗಾಡಿಗಳ ಓಡಾಟದಿಂದ ಧೂಳು ಏಳ್ಳುತ್ತಿದ್ದು, ಬೈಕ್ ಸವಾರರು ಈ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ. ಸ್ವಲ್ಪ ಯಾಮಾರಿದರೆ ಜೀವ ಹೋಗುವುದು ಗ್ಯಾರಂಟಿ.
ಈ ಹಿಂದೆ ಇದರ ಕುರಿತು ಚಡಚಣದ ತಹಶೀಲದಾರರ ಕಾರ್ಯಾಲಯಕ್ಕು ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಎಂದು ರೈತರಾದ ಜಯತೀರ್ಥ ಕಮಲಾಕರ, ರಾಘವೇಂದ್ರ ಕಾಂಬಳೆ, ಚಂದ್ರಶೇಖರ ಹಳದಕಿ, ಗಂಗಾಬಾಯಿ ಕರಜಗಿ, ಚನ್ನವ್ವ ದೇವರಾಯ, ರಾಜಶ್ರೀ ಕಾಂಬಳೆ ಸೇರಿದಂತೆ ಇತರರು ಆರೋಪಿಸುತ್ತಿದ್ದಾರೆ.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 