ಸವಾರರಿಗೆ ಯಮ ಸ್ವರೂಪಿಯಾದ ರಸ್ತೆ ಗುಂಡಿ
ಲೋಕದರ್ಶನ ವರದಿ
ಕೊಪ್ಪಳ 23: ಕೊಪ್ಪಳದ ಕಿನ್ನಾಳ್ ಮಾರ್ಗದಿಂದ ಕುಷ್ಟಗಿಗೆ ಹೋಗುವ ರಸ್ತೆಯಲ್ಲಿ ಸಮೂಹ ಆಫೀಸ್ ಹತ್ತಿರ ಬ್ರಿಡ್ಜ್ನ ಸಿಮೆಂಟ್ ಸಂಪೂರ್ಣ ಕಿತ್ತುಹೋಗಿ ಕೇವಲ ಸರಳು ಕಾಣುತ್ತಿವೆ. ಯಾವ ಸಂದರ್ಭದಲ್ಲಿ ಅನಾಹುತ ಸಂಭವಿಸುವುದೋ ಎಂಬ ಭೀತಿ ಈ ಮಾರ್ಗದಲ್ಲಿ ಸಂಚರಿಸುವ ಸವಾರರನ್ನು ಕಾಡುತ್ತಿದೆ.
ಕಾಮಗಾರಿ ಕಳಪೆಯಾಗಿರುವುದರಿಂದ ಬ್ರಿಡ್ಜ್ ಮೇಲಿನ ಕಾಂಕ್ರೀಟ್ ಕಿತ್ತುಹೋಗಿ ಸರಳುಗಳು ತೆರೆದುಕೊಂಡಿವೆ. ಆಕಸ್ಮಾತ್ ಓವರ್ ಲೋಡ್ ವಾಹನಗಳೇನಾದರೂ ಈ ಸರಳುಗಳ ಮೇಳೆ ಸಂಚರಿಸಿದರೆ ಕುಸಿಯುವ ಭೀತಿ ಇದೆ. ಸುಮಾರು ಒಂದೂವರೆ ಮೀಟರ್ ಉದ್ದ ಹಾಗೂ ಒಂದು ಮೀಟರ್ ಅಗಲದ ಸಿಮೆಂಟ್ ಕಿತ್ತುಹೋಗಿ ಸರಳು ಕಾಣುತ್ತಿವೆ. ಅಕಸ್ಮಾತ್ ಈ ಸರಳುಗಳಿಗೆ ಹಾನಿಯಾದರೆ ವಾಹನಗಳು ಬ್ರಡ್ಜ್ ಒಳಗೆ ಸಿಲುಕಿಕೊಳ್ಳುವ ಅಪಾಯ ಇದೆ.
ದ್ವಿಚಕ್ರವಾಹನ ಸವಾರರಿಗಂತೂ ಈ ರಸ್ತೆ ಯಮ ಸ್ವರೂಪಿಯಾಗಿದೆ. ರಸ್ತೆ ಗೊತ್ತಿಲ್ಲದ ಬೇರೆ ಊರನವರು ರಾತ್ರಿ ವೇಳೆ ಈ ಮಾರ್ಗವಾಗಿ ಬಂದರೆ ಅಪಘಾತ ಆಗುವುದು ಖಚಿತ ಎಂಬಂತಿದೆ. ಇದೇ ರೀತಿ ಹಲವು ಬಾರಿ ಅಪಘಾತಗಳು ಸಂಭವಿಸಿ ಪ್ರಾಣಹಾನಿ ಸಂಭವಿಸಿದೆ. ಅಲ್ಲದೆ ವಾಹನಗಳ ಚಕ್ರಗಳು ಪಂಕ್ಚರ್ ಆಗಿ ಚಾಲಕರು ಪರದಾಡುವ ಅನಿವಾರ್ಯತೆ ಎದುರಾಗಿದೆ.
ಭಾರಿ ಅನಾಹುತ ಸಂಭವಿಸುವುದಕ್ಕೂ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಹಾಗೂ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಐಡಿವೈಓ ಜಿಲ್ಲಾ ಸಮಿತಿ ಹಾಗೂ ಸಂಘಟನಕಾರ ರಾಯಣ್ಣ ಗಡ್ಡಿ ಆಗ್ರಹಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 