ಜನಮನಗೆದ್ದ ಕುಸ್ತಿ ಪಂದ್ಯ
ಗುಳೇದಗುಡ್ಡ09: ಸಮೀಪದ ಕೋಟೆಕಲ್ ಗ್ರಾಮದ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಸ್ವಾಮಿಗಳ ಜಾತ್ರಾ ಮಹೋತ್ಸವ ನಿಮಿತ್ಯ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯ ಜನಮನ ರಂಜಿಸಿತು. ಅಂತಿಮ ಕುಸ್ತಿಯಲ್ಲಿ ಅಥಣಿಯ ಧರಿಯಪ್ಪ ಪ್ರಥಮ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.
ಪಂದ್ಯ ಗೆಲ್ಲಲು ಕುಸ್ತಿ ಪಟುಗಳು ನಾನಾ ತರಹದ ಕಸರತ್ತು ಹಾಗೂ ಪಟ್ಟುಗಳನ್ನು ಪ್ರದಶರ್ಿಸಿದರು. ಕಮತಗಿ, ಬೇವಿನಮಟ್ಟಿ, ಶಿರೂರ, ಬೆಳಗಾವಿ, ಅಥಣಿ, ಮುಧೋಳ, ಬೇವೂರ, ಮುದ್ದೇಬಿಹಾಳ, ತುಳಸಿಗೇರಿ ಸೇರಿದಂತೆ ನಾನಾ ಕಡೆಗಳಿಂದ ಸುಮಾರು 63ಕ್ಕೂ ಹೆಚ್ಚು ಕುಸ್ತಿಪಟುಗಳು ಸ್ಪಧರ್ೆಯಲ್ಲಿ ಭಾಗವಹಿಸಿದ್ದರು. ಧರಿಯಪ್ಪ ಮತ್ತು ಅಯ್ಯಪ್ಪನ್ನವರ್ ಇವರಿಬ್ಬರ ಮಧ್ಯ ನಡೆದ ಅಂತಿಮ ಕಾಳಗ ಬಹಳ ರೋಚಕವಾಗಿತ್ತು. ಅಥಣಿಯ ಧರಿಯಪ್ಪ ಪ್ರಥಮ ಸ್ಥಾನ ಪಡೆದರೆ, ಮುಧೋಳದ ಅಯ್ಯಪ್ಪ ದ್ವಿತೀಯ ಸ್ಥಾನ ಪಡೆದು ತೃಪ್ತಿ ಪಟ್ಟುಕೊಳ್ಳುವಂತಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಶ್ರೀಮಂತ ಭುಜಂಗರಾವ್ ದೇಸಾಯಿ, ಶಶಿಧರ ದೇಸಾಯಿ, ಸಂಗಪ್ಪ ಆಲೂರ, ಸಿದ್ದಪ್ಪ ಮಾವಿನಮರದ, ಶೇಖಪ್ಪ ಕಡಪಟ್ಟಿ, ಮಲ್ಲಪ್ಪ ತಳವಾರ, ಕರಿಯಪ್ಪ ಸೀತಿಮನಿ, ಮಹಾಗುಂಡಪ್ಪ ಕಮತರ, ಪರಸುರಾಮ, ನಾಗಪ್ಪ ವಾಲೀಕಾರ, ಹುಚ್ಚಪ್ಪ ಮೇಟಿ ಮತ್ತು ಯಲ್ಲಪ್ಪ ತಳವಾರ ಸೇರಿದಂತೆ ಇತರರು ಇದ್ದರು.
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು 