ಜಾನಪದ ಸಂಸ್ಕೃತಿಯು ಶ್ರೀಮಂತ ಮತ್ತು ಜೀವಂತವಾಗಿರುವುದಕ್ಕೆ ಮಹಿಳೆಯರು ಕಾರಣ : ಡಾ. ಜೀವನಸಾಬ್ ವಾಲಿಕಾರ

Women are the reason why folk culture is rich and alive: Dr. Jeevansaab Walikara

ಜಾನಪದ ಸಂಸ್ಕೃತಿಯು ಶ್ರೀಮಂತ ಮತ್ತು ಜೀವಂತವಾಗಿರುವುದಕ್ಕೆ ಮಹಿಳೆಯರು ಕಾರಣ : ಡಾ. ಜೀವನಸಾಬ್ ವಾಲಿಕಾರ

ಕೊಪ್ಪಳ 06: ಜಾನಪದ ಸಂಸ್ಕೃತಿ ಶ್ರೀಮಂತ ಮತ್ತು  ಜೀವಂತವಾಗಿರುವುದಕ್ಕೆ ಮಹಿಳೆಯರು ಕಾರಣವೆಂದು ಕರ್ನಾಟಕ ಜಾನಪದ ಆಕಾಡೆಮಿ ಸದಸ್ಯ ಡಾ. ಜೀವನ ಸಾಬ್ ವಾಲಿಕಾರ ಭಿನ್ನಾಳ ಹೇಳಿದರು. ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರದಂದು ಕಾಲೇಜಿನ ಐಕ್ಯೂಎಸಿ ಮತ್ತು ಸಾಂಸ್ಕೃತಿಕ ಘಟಕದ ಸಹಯೋಗದಲ್ಲಿ ನಮ್ಮ ಸಂಸ್ಕೃತಿ - ನಮ್ಮ ಹೆಮ್ಮೆ ಪರಿಕಲ್ಪನೆಯ ಜಾನಪದ ಉತ್ಸವ -2025 ನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.ಅವರು ಮುಂದುವರೆದು ಮಾತನಾಡುತ್ತ ಜಾನಪದ, ಒಗಟುಗಳು, ಕಲೆ, ಸಂಸ್ಕೃತಿ, ಹಾಸ್ಯ, ಗೀಗಿ ಪದಗಳು ಮತ್ತು ಲಾವಣಿಗಳು ಇವೆಲ್ಲವು ನಮ್ಮೆಲ್ಲರೂ ವೈಚಾರಿಕತೆಯನ್ನು ಹೆಚ್ಚಿಸುತ್ತವೆ. ಜಾನಪದ ಎಂದರೆ ಅದೊಂದು ಜ್ಞಾನ ಮತ್ತು ಜೀವನ.  ಗ್ರಾಮೀಣ ಪ್ರತಿಭೆಯೇ ಜಾನಪದ ಉತ್ಸವ. ಜಾನಪದ ಸೊಗಡು ಬಹಳ ಶ್ರೇಷ್ಠವಾದದದ್ದು.  ಕಲೆ ಮತ್ತು ಸಂಸ್ಕೃತಿಯನ್ನು ಜನರ ಮಧ್ಯೆ ತೆಗೆದುಕೊಂಡು ಹೋಗಬೇಕು. ಜಾನಪದದಲ್ಲಿ ತತ್ವ, ನೀತಿ ಮತ್ತು ಆದರ್ಶ ಇದೆ.  ಜಾನಪದ ಎನ್ನುವುದು ರಂಜನಿಯವಲ್ಲ. ಅದು ಜೀವನ,  ಸಂಸ್ಕೃತಿ ಮತ್ತು  ಪರಂಪರೆಯಾಗಿದೆ. ಜಾನಪದ ಮೂಲಕ ನಾವು ಸಮೃದ್ಧಿ ಜೀವನ ನಡೆಸಬೇಕು. ಮನುಷ್ಯ ನ ಬದುಕಿಗೆ ಬೇಕಾದ ತತ್ವಗಳನ್ನು ಮತ್ತು ನೀತಿಗಳನೂ ನಮ್ಮ ಜಾನಪದ ಕಲಿಸಿಕೊಟ್ಟಿದೆ. ಜಾನಪದಕ್ಕೆ ಜಾತಿ, ಧರ್ಮ ಭೇದ ಭಾವ ಇಲ್ಲ. ಇದು ಎಲ್ಲರನ್ನು ಒಳಗೊಳ್ಳುತ್ತದೆ ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಂಸ್ಕೃತಿ ಘಟಕದ ಸಂಚಾಲಕಿ ಡಾ. ಹುಲಿಗೆಮ್ಮ  ಅವರು ಮಾತನಾಡುತ್ತ ನಮ್ಮ ಜಾನಪದ ಸಂಸ್ಕೃತಿಯನ್ನು ರಕ್ಷಣೆ ಮಾಡಬೇಕು. ನಾವು ವೈಜ್ಞಾನಿಕವಾದ ಜೀವನ ಪದ್ಧತಿಯನ್ನು ಅಳವಡಿಸಿಕೊಳ್ಳುವುದರ ಜೊತೆಗೆ ನಮ್ಮ ಸಂಪ್ರದಾಯವನ್ನು ಕಾಪಾಡಿಕೊಂಡು ಅದನ್ನು ಉಳಿಸಿ ಬೆಳಸಬೇಕು. ಗ್ರಾಮೀಣ ಪ್ರದೇಶದ ಕಲೆ ಮತ್ತು ಕ್ರೀಡೆ ಗಳನ್ನು ನಾವು ಆಡುವುದರ ಮೂಲಕ ಅವುಗಳನ್ನು ಉಳಿಸಿ ಬೆಳಸಿಬೇಕು. ನಮ್ಮ ಭಾಷೆ, ಉಡುಗೆ ತೋಡುಗೆಗಳನ್ನು ಕಾಪಾಡಿಕೊಳ್ಳಬೇಕು. ನಮ್ಮ ಸಂಸ್ಕೃತಿಯಲ್ಲಿ ವೈಜ್ಞಾನಿಕ ಅಂಶಗಳು ಇವೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಗಣಪತಿ ಲಮಾಣಿಯವರು ಮಾತನಾಡುತ್ತ ಪ್ರಾಚೀನ ಕಾಲದಲ್ಲಿ ಜನರು ತಮ್ಮ ಅನುಭವಗಳನ್ನು ಜಾನಪದ ಮೂಲಕ ವ್ಯಕ್ತಪಡಿಸುತ್ತಿದ್ದರು. ನಮ್ಮ ಜನರು ಕೈಗಾರಿಕೆ ಕ್ರಾಂತಿ ನಂತರ ಗ್ರಾಮೀಣ ಪ್ರದೇಶ ದಿಂದ ನಗರಕ್ಕೆ ವಲಸೆ ಬಂದರು. ಇದರಿಂದ ನಮ್ಮ ಸಂಸ್ಕೃತಿಯು ಮತ್ತು  ಸಾಮಾಜಿಕ ಜೀವನ ಅನಿವಾರ್ಯವಾಗಿ ಸ್ವಲ್ಪ ಬದಲಾವಣೆ ಆಯಿತು.ಜಾನಪದ ಕಲಾವಿದರು ಅನಕ್ಷರಸ್ತರಾದರೂ ಅವರು ಕಥೆ, ನಾಟಕ ಮತ್ತು ಹಾಡುಗಳನ್ನು ಹಾಡುತ್ತಾರೆ. ನಾವೆಲ್ಲರೂ ಜಾನಪದ ಸಂಸ್ಕೃತಿ ಮತ್ತು ಸಾಹಿತ್ಯ ವನ್ನು ಉಳಿಸೋಣ ಎಂದರು.ಡಾ. ಜೀವನ ಸಾಬ್ ವಾಲಿಕಾರ ಭಿನ್ನಳ್ ಅವರ ಕುರಿತು ಭೂಮಿಕಾ ವ್ಯಕ್ತಿ ಪರಿಚಯ ಮಾಡಿದರು. ಕಾರ್ಯಕ್ರಮದಲ್ಲಿ ಕೊಪ್ಪಳದ ಜಾನಪದ ಕಲಾವಿದರಾದ ಈರಮ್ಮ ಮುಧೋಳ್ ಮತ್ತು ಶಾಂತಮ್ಮ ಅವರಿಂದ ಜಾನಪದ ಗೀತೆಗಳನ್ನು ಹಾಡಲಾಯಿತು. ಈರಮ್ಮ ಮುಧೋಳ್ ಅವರ ಕುರಿತು ರೂಬಿನ್ ವ್ಯಕ್ತಿ ಪರಿಚಯ ಮಾಡಿದರು.. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಜನವರಿ - ಫೆಬ್ರವರಿ ತಿಂಗಳದ ಮಹಿಳಾ ಟೈಮ್ಸ್‌ ಪತ್ರಿಕೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ನಾಗರತ್ನ ತಮ್ಮಿನಾಳ,  ಡಾ. ಗವಿಸಿದ್ದಪ್ಪ ಮುತ್ತಾಳ, ಡಾ. ಮಲ್ಲಿಕಾರ್ಜುನ, ಡಾ. ನರಸಿಂಹ, ಸುಮಿತ್ರಾ, ಶುಭ, ಸೌಮ್ಯ ಹಿರೇಮಠ, ಹನುಮಂತಪ್ಪ ಮೇಟಿ, ಶಿವಪ್ರಸಾದ್ ಹಾದಿಮನಿ, ಶ್ರೀಕಾಂತ್ ಸಿಂಗಾಪುರ, ಮಹೇಶ್ ಪೂಜಾರ್, ಮಂಜಪ್ಪ ಕುರ್ಕಿ ಹಾಗೂ ಕಾಲೇಜಿನ ಎಲ್ಲ ಅತಿಥಿ ಉಪನ್ಯಾಸಕರು, ಎಲ್ಲ ಭೋಧಕ, ಭೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.