ವರದಕ್ಷಿಣೆಗಾಗಿ ಮಹಿಳೆ ಹತ್ಯೆ
ಹಾಜಿಪುರ, ಡಿ 20: ವರದಕ್ಷಿಣೆ ಪಿಡುಗು ಇನ್ನೂ ನಿರ್ಮೊಲನೆಯಾಗಿಲ್ಲ ಎಂಬುದಕ್ಕೆ ದೇಶದ ವಿವಿಧೆಡೆಯಿಂದ ವರದಿಯಾಗುತ್ತಿರುವ ಪ್ರಕರಣಗಳೇ ಸಾಕ್ಷಿಯಾಗಿವೆ ಈ ನಿಟ್ಟಿನಲ್ಲಿ ವೈಶಾಲಿ ಜಿಲ್ಲೆಯ ಭಗವಾನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮುಜಾಫಪುರ್ ಮಲಾಹಿ ಗ್ರಾಮದಲ್ಲಿ ವರದಕ್ಷಿಣೆಗಾಗಿ ಮಹಿಳೆಯೊಬ್ಬರನ್ನು ಹತ್ಯೆ ಮಾಡಲಾಗಿದೆ.
ಬೆಗುಸರೈ ಜಿಲ್ಲೆಯ ಬಚ್ವಾಡಾ ಪೊಲೀಸ್ ಠಾಣೆ ವ್ಯಾಪ್ತಿಯ ಚಮತ ಲಕ್ಷ್ಮಣ್ ತೋಲಾದ ಉಮೇಶ್ ಪಾಸ್ವಾನ್ ಅವರ ಪುತ್ರಿ ಕಾಜಲ್ ದೇವಿ (22) ಹತ್ಯೆಗೀಡಾದ ದುರ್ದೈವಿ.
ಈಕೆ ಎಂಟು ವರ್ಷಗಳ ಹಿಂದೆ ವೈಶಾಲಿ ಜಿಲ್ಲೆಯ ಮುಜಫಪುರ್ ಮಲಾಹಿ ಗ್ರಾಮದ ಸಂಜಯ್ ಪಾಸ್ವಾನ್ ಅವರನ್ನು ವಿವಾಹವಾಗಿದ್ದರು. ಮದುವೆಯಾದಾಗಿನಿಂದ, ಕಾಜಲ್ಗೆ 50 ಸಾವಿರ ರೂ. ವರದಕ್ಷಿಣೆ ತರಲು ಹಿಂಸೆ ನೀಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರ ತಂದೆ ಉಮೇಶ್ ಪಾಸ್ವಾನ್ ಅವರ ಹೇಳಿಕೆಯ ಆಧಾರದ ಮೇಲೆ ಮೃತಳ ಪತಿ ಸಂಜಯ್ ಪಾಸ್ವಾನ್, ಅವರ ತಂದೆ, ತಾಯಿ ಸೇರಿದಂತೆ ಆರು ಮಂದಿ ಆರೋಪಿಗಳ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮಾಹಿತಿ ನೀಡಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 