ರಘು ದೀಕ್ಷಿತ್ ಹಾಡಿದ ಕೆಟ್ಟ ಹಾಡು ಯಾವುದು?
ಬೆಂಗಳೂರು, ಫೆ 25, ವಿಶಿಷ್ಟ ಕಂಠಸಿರಿಯ, ‘ನಿನ್ನಾ ಪೂಜೆಗೆ ಬಂದೆ ಮಾದೇಶ್ವರ’ ಹಾಡಿನಿಂದ ಜನಪ್ರಿಯರಾಗಿರುವ ಖ್ಯಾತ ಗಾಯಕ ರಘು ದೀಕ್ಷಿತ್ ಇತ್ತೀಚಿಗೆ ದನಿಯಾಗಿರುವ ಕೆಲ ಗೀತೆಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಡಾ ರಾಜ್ ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ನಟನೆಯ ‘ನಿನ್ನ ಸನಿಹಕೆ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಘು ದೀಕ್ಷಿತ್ ಕೆಲವೊಮ್ಮೆ ಒತ್ತಡಕ್ಕೆ ಮಣಿದು ಕೆಟ್ಟ ಹಾಡುಗಳನ್ನೂ ಹಾಡಬೇಕಾಗುತ್ತದೆ , ಸಾಹಿತ್ಯ ಇಷ್ಟವಾಗುವುದಿಲ್ಲ ಎಂದರುಹಾಗಾದರೆ ನೀವು ಹಾಡಿದ ಕೆಟ್ಟ ಹಾಡು ಯಾವುದು ಎಂಬ ಪ್ರಶ್ನೆಗೆ ಎ ಪಿ ಅರ್ಜುನ್ ಸಾಹಿತ್ಯದ‘ಯು ಆರ್ ಮೈ ಪೊಲೀಸ್ ಬೇಬಿ” ಎಂಬ ಉತ್ತರ ಹೊರಬಂತು ಅಂದಹಾಗೆ ರುಸ್ತುಂ ಚಿತ್ರದ ಈ ಗೀತೆಯಲ್ಲಿ ಶಿವರಾಜ್ ಕುಮಾರ್ ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ ಹಾಡಿಗೆ ಅನೂಪ್ ಸಿಳೀನ್ ಸಂಗೀತವಿದೆ ಆದರೆ ರಘು ದೀಕ್ಷಿತ್ ಗೆ ಬೇಸರ ತಂದಿದ್ದು ಸಾಹಿತ್ಯ “ಇಂತಹ ಹಾಡನ್ನೇಕೆ ಹಾಡಿದೆ ಎಂದು ಅಭಿಮಾನಿಗಳಿಂದ ಛೀಮಾರಿ ಹಾಕಿಸಿಕೊಂಡೆ” ಎಂದರು. ಕೆಲವೊಂದು ಸಂದರ್ಭದಲ್ಲಿ ಇಷ್ಟವಿಲ್ಲದ ಹಾಡುಗಳಿಗೂ ದನಿಯಾಗಬೇಕಾಗುತ್ತದೆ, ಇದಕ್ಕೆ ಕಾರಣ ಒತ್ತಡ ಎಂಬುದು ರಘು ದೀಕ್ಷಿತ್ ಅಂಬೋಣ.
ಬೆಳಗಾವಿಯಲ್ಲಿ ನ್ಯಾಯವಾದಿ ಮನೆ ಮೇಲೆ ಗುಂಡಿನ ದಾಳಿ, ಹತ್ಯೆಗೆ ಯತ್ನ : ಅತಂಕದಲ್ಲಿ ಜನ
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ? 