ರಘು ದೀಕ್ಷಿತ್ ಹಾಡಿದ ಕೆಟ್ಟ ಹಾಡು ಯಾವುದು?
ಬೆಂಗಳೂರು, ಫೆ 25, ವಿಶಿಷ್ಟ ಕಂಠಸಿರಿಯ, ‘ನಿನ್ನಾ ಪೂಜೆಗೆ ಬಂದೆ ಮಾದೇಶ್ವರ’ ಹಾಡಿನಿಂದ ಜನಪ್ರಿಯರಾಗಿರುವ ಖ್ಯಾತ ಗಾಯಕ ರಘು ದೀಕ್ಷಿತ್ ಇತ್ತೀಚಿಗೆ ದನಿಯಾಗಿರುವ ಕೆಲ ಗೀತೆಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಡಾ ರಾಜ್ ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ನಟನೆಯ ‘ನಿನ್ನ ಸನಿಹಕೆ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಘು ದೀಕ್ಷಿತ್ ಕೆಲವೊಮ್ಮೆ ಒತ್ತಡಕ್ಕೆ ಮಣಿದು ಕೆಟ್ಟ ಹಾಡುಗಳನ್ನೂ ಹಾಡಬೇಕಾಗುತ್ತದೆ , ಸಾಹಿತ್ಯ ಇಷ್ಟವಾಗುವುದಿಲ್ಲ ಎಂದರುಹಾಗಾದರೆ ನೀವು ಹಾಡಿದ ಕೆಟ್ಟ ಹಾಡು ಯಾವುದು ಎಂಬ ಪ್ರಶ್ನೆಗೆ ಎ ಪಿ ಅರ್ಜುನ್ ಸಾಹಿತ್ಯದ‘ಯು ಆರ್ ಮೈ ಪೊಲೀಸ್ ಬೇಬಿ” ಎಂಬ ಉತ್ತರ ಹೊರಬಂತು ಅಂದಹಾಗೆ ರುಸ್ತುಂ ಚಿತ್ರದ ಈ ಗೀತೆಯಲ್ಲಿ ಶಿವರಾಜ್ ಕುಮಾರ್ ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ ಹಾಡಿಗೆ ಅನೂಪ್ ಸಿಳೀನ್ ಸಂಗೀತವಿದೆ ಆದರೆ ರಘು ದೀಕ್ಷಿತ್ ಗೆ ಬೇಸರ ತಂದಿದ್ದು ಸಾಹಿತ್ಯ “ಇಂತಹ ಹಾಡನ್ನೇಕೆ ಹಾಡಿದೆ ಎಂದು ಅಭಿಮಾನಿಗಳಿಂದ ಛೀಮಾರಿ ಹಾಕಿಸಿಕೊಂಡೆ” ಎಂದರು. ಕೆಲವೊಂದು ಸಂದರ್ಭದಲ್ಲಿ ಇಷ್ಟವಿಲ್ಲದ ಹಾಡುಗಳಿಗೂ ದನಿಯಾಗಬೇಕಾಗುತ್ತದೆ, ಇದಕ್ಕೆ ಕಾರಣ ಒತ್ತಡ ಎಂಬುದು ರಘು ದೀಕ್ಷಿತ್ ಅಂಬೋಣ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 