ಶ್ರೀಮಂತ ಪಾಟೀಲರಿಗೆ ತಕ್ಕಪಾಠ ಕಲಿಸಲಿದ್ದಾರೆ
ಲೋಕದರ್ಶನ ವರದಿ
ಕಾಗವಾಡ: ರಾಜ್ಯದ ಸಮ್ಮಿಶ್ರ ಸಕರ್ಾರದಲ್ಲಿ ಕಾಗವಾಡ ಕ್ಷೇತ್ರದ ಆಗೀಣ ಶಾಸಕ ಇವರು ಕ್ಷೇತ್ರದ ಅಭಿವೃದ್ಧಿಗಾಗಿ 400 ಕೋಟಿ ಅನುದಾನ ನೀಡಿದ್ದಾರೆ. ಆದರೂತಾವು ಸ್ವಾರ್ಥಕ್ಕಾಗಿ ಪಕ್ಷಾಂತರ ಮಾಡಿ, ಕುಮಾರಸ್ವಾಮಿ ಇವರ ಮೇಲೆ ಗುಬೆ ಕುಳಿಸುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಕ್ಷೇತ್ರದ ಜನತೆತಕ್ಕ ಪಾಠ ಕಲಿಸಲಿದೆಯೆಂದು ಜೆಡಿಎಸ್ ಪಕ್ಷದ ವರಿಷ್ಠರು, ವಿಧಾನಪರಿಷತ್ತ ಸದಸ್ಯ ಬಸವರಾಜ ಹೊರಟ್ಟಿ ಕಾಗವಾಡದಲ್ಲಿ ಹೇಳಿದರು.
ಸೋಮವಾರರಂದು ಕಾಗವಾಡದ ಮಾಜಿ ಶಾಸಕ ಕೆ.ಪಿ.ಮಗೆಣ್ಣವರ ಇವರ ಲಕ್ಷ್ಮೀ ಬ್ಯಾಂಕ್ ಶಾಖೆಯಲ್ಲಿ ಆಯೋಜಿಸಿದ ಪತ್ರೀಕಾಗೋಷ್ಠಿಯಲ್ಲಿ ಬಸವರಾಜ ಹೊರಟ್ಟಿ ಮನಬಿಚ್ಚಿ ಹೇಳಿದರು.
ಶ್ರೀಮಂತ ಪಾಟೀಲ ರೈತರ ನೇತಾರರು ಎಂದು ಹೇಳುತ್ತಾರೆ. ಅವರು ಈ ವರೆಗೆ ಸ್ವಾರ್ಥ ಒಂದೇ ಬಹಿಸಿದ್ದಾರೆ. ಮೊದಲು ಜೆಡಿಎಸ್, ಆಮೇಲೆ ಕಾಂಗ್ರೆಸ್, ಈಗ ಬಿಜೆಪಿ ಪಕ್ಷದಲ್ಲಿ ಸೇರಿಕೊಂಡು ರಾಜಕೀಯಮಾಡುತ್ತಿದ್ದಾರೆ. ಈ ಪಕ್ಷದಲ್ಲಿಯೂ ಕೆಲ ದಿನ ಮಾತ್ರ ಉಳಿಯಬಹುದು. ಕ್ಷೇತ್ರದಜನತೆಯಅಭಿವೃದ್ಧಿಗಾಗಿನಾನು ಈ ನಿರ್ಣಯಕೈಗೊಂಡಿದ್ದೇನೆ ಎಂದು ಹೇಳುತ್ತಿರುವುದು ಸುದ್ದಸುಳ್ಳು ಎಂದುಬಸವರಾಜ ಹೊರಟ್ಟಿ ಆರೋಪಿಸಿದರು.
ಕೃಷ್ಣಾ ನದಿಗೆ ನೀರು ಹರಿಸಲು ಕುಮಾರಸ್ವಾಮಿ ಮತ್ತು ನಾನು ಪ್ರಯತ್ನಿಸಿದ್ದೇನೆ. ಹಿಡಕಲ ಆನೆಕಟ್ಟೆಯಿಂದ 1 ಟಿಎಂಸಿ ನೀರು ಬಿಡಿಸಿದ್ದು ನಾನೇ.ಅಭಿವೃದ್ಧಿ ಕಾಮಗಾರಿಗಾಗಿ ಮತ್ತು ಕ್ಷೇತ್ರದ ಜನತೆಗಾಗಿ ನಾನು ಬಿಜೆಪಿ ಪಕ್ಷ ಸೇರಿದ್ದೇನೆ ಎಂದು ಹೇಳಿದ್ದು, ಎಷ್ಟು ಸತ್ಯ? ಎದೆನೋವು ಕಾಣಿಸಿದ್ದು ಇದು ಸುಳ್ಳು. ಕನರ್ಾಟಕದಲ್ಲಿ ಬೇರೆ ರಾಜ್ಯಗಳಿಂದ ಬಂದು ಉಪಚಾರಿಸಿಕೊಳ್ಳುತ್ತಾರೆ.
ಇವರು ಮುಂಬೈಗೆ ಹೋಗುವ ಅವಶ್ಯಕತೆಯಿಲ್ಲಾಗಿತ್ತು. ಈ ಚುನಾವಣೆ ಜೆಡಿಎಸ್ ಎದುರಾಳಿಗೆ ಕಾಂಗ್ರೆಸ್ ಇದೆ ಎಂದು ಬಸವರಾಜ ಹೋರಟ್ಟಿ ಹೇಳಿದರು.
ಪತ್ರೀಕಾಗೋಷ್ಠಿ ಸಭೆಯಲ್ಲಿ ಜೆಡಿಎಸ್ ಪಕ್ಷದರಾಷ್ಟ್ರೀಯ ಪ್ರಧಾನ ಕಾರ್ಯದಶರ್ಿ ಎನ್.ಎಚ್.ಕೋನರೆಡ್ಡಿ, ಮಾಜಿ ಸಚಿವ ವೆಂಕಟರಾವನಾಡಗೌಡಾ, ಚಿಕ್ಕೋಡಿ ಜಿಲ್ಲಾ ಜೆಡಿಎಸ್ಆಧ್ಯಕ್ಷ, ಮಾಜಿ ಶಾಸಕ ಕೆ.ಪಿ.ಮಗೆಣ್ಣವರ, ಕಾಗವಾಡ ಅಭ್ಯಥರ್ಿ ಶ್ರೀಶೈಲ್ ತುಗಶೆಟ್ಟಿ, ಬೆಳಗಾವಿ ಜಿಲ್ಲಾಧ್ಯಕ್ಷಶಂಕರ ಮಾಡಲಗಿ, ಗಿರೀಶ ಭುಟಾಳಿ, ಎಂ.ಕೆ.ಪಾಟೀಲ, ಭೀಮು ಪಾಟೀಲ, ಬಿ.ಆರ್.ಪಾಟೀಲ, ಸೇರಿದಂತೆ ಅನೇಕ ಜೆಡಿಎಸ್ ಕಾರ್ಯಕರ್ತರುಪಾಲ್ಗೊಂಡಿದ್ದರು.
ಕಾಗವಾಡದಲ್ಲಿ ಅಭ್ಯಥರ್ಿ ಶ್ರೀಶೈಲ್ ತುಗಶೆಟ್ಟಿ ಪರಬಸವರಾಜ ಹೋರಟ್ಟಿ, ಹಾಗೂ ಮುಖಂಡರುಮನೆ ಮನೆಗೆ ತರಳಿ ಮತಯಾಚಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 