ವಿರಾಟ್ ನೀಡಿದ ಪ್ರದರ್ಶನ ಮುಂದುವರೆಸುವೆವು: ರೋಹಿತ್
ನವದೆಹಲಿ, ನ.2: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ನೀಡಿರುವ ಪ್ರದರ್ಶನವನ್ನು ಮುಂದುವರೆಸುತ್ತೇವೆ ಎಂದು
ರೋಹಿತ್ ಶರ್ಮಾ ತಿಳಿಸಿದ್ದಾರೆ.
ಬಾಂಗ್ಲಾ ದೇಶದ ವಿರುದ್ಧ
ಭಾರತ ಇಲ್ಲಿನ ಅರುಣ್ ಜೇಟ್ಲಿ ಅಂಗಳದಲ್ಲಿ ಮೊದಲ ಟಿ-20 ಪಂದ್ಯ ನಡೆಯಲಿದೆ. ರೋಹಿತ್ ಶರ್ಮಾ ಅವರು
ಏಷ್ಯಾ ಕಪ್ ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು.
“ನನ್ನ ಮುಂದಿನ ಗುರಿ
ಸ್ಪಷ್ಟವಾಗಿದೆ. ವಿರಾಟ್ ಕೊಹ್ಲಿ ಮಾಡಿರುವ ಒಳ್ಳೆಯ ಕಾರ್ಯವನ್ನು ಮುನ್ನಡೆಸುವೆ. ಸಿಕ್ಕ ಅವಕಾಶವನ್ನು
ಬಳಸಿಕೊಂಡು ಸ್ಥಿರ ಪ್ರದರ್ಶನ ನೀಡಿದ್ದೇನೆ. ವಿರಾಟ್ ಮಾಡಿರುವ ಕಾರ್ಯ ವನ್ನು ಮುಂದುವರೆಸುವೆ.” ಎಂದು
ರೋಹಿತ್ ತಿಳಿಸಿದ್ದಾರೆ.
“ಬಾಂಗ್ಲಾದೇಶ ಒಳ್ಳೆಯ
ತಂಡ. ಎದುರಾಳಿ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದಾರೆ. ಆ ತಂಡದಲ್ಲಿ ಶಕೀಬ್ ಹಾಗೂ ತಮೀಮ್ ಅನುಪಸ್ಥಿತರಾಗಿದ್ದಾರೆ.
ಆದರೂ ಅವರ ತಂಡದಲ್ಲಿ ಸ್ಥಿರತೆ ಇದೆ ಎಂದಿದ್ದಾರೆ..
“ನಾವು ಬಾಂಗ್ಲಾ ವಿರುದ್ಧ
ಉತ್ತಮ ಗುರಿ ನೀಡುವ ಯೋಜನೆ ಹೆಣೆದುಕೊಳ್ಳಲಾಗಿದೆ. ರಿಷಭ್ ಪಂತ್ ಅವರಿಗೆ ಅವಕಾಶವನ್ನು ಕೊಡಲಾಗುವುದು.
ಅಲ್ಲದೆ ಟಿ-20 ಟೂರ್ನಿ ಅವರು ಭರ್ಜರಿ ಪ್ರದರ್ಶನ ನೀಡಬಲ್ಲರು. ಅವರಿಗೆ ಇನ್ನಷ್ಟು ಅವಕಾಶವನ್ನು ನೀಡುವ
ಬಗ್ಗೆ ಚಿಂತನೆ ನಡೆದಿದೆ ಎಂದು ರೋಹಿತ್ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 