ಶ್ರಮಬಿಂದು ಸಾಗರಕ್ಕೆ ಎರಡ್ಮೂರು ದಿನಗಳಲ್ಲಿ ನೀರು: ಶಾಸಕ ನ್ಯಾಮಗೌಡ

Water to Shramabindu Sagar in two to three days: MLA Nyamagowda

ಜಮಖಂಡಿ 08: ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ನಿಂದ ಶ್ರಮಬಿಂದು ಸಾಗರಕ್ಕೆ ಎರಡ್ಮೂರು ದಿನಗಳಲ್ಲಿ ಅರ್ಧ ಟಿಎಂಸಿ ನೀರು ಹರಿಸಲಿದ್ದಾರೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ತಿಳಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಾಪೂರ ಬ್ಯಾರೇಜ್‌ನಿಂದ ಹಿಪ್ಪರಗಿ ಬ್ಯಾರೇಜ್‌ಗೆ ಸುಮಾರು 1500 ಕ್ಯೂಸೆಕ್‌ನಷ್ಟು ನೀರು ಹರಿದು ಬರುತ್ತಿದೆ, ಹಿಪ್ಪರಗಿ ಬ್ಯಾರೇಜ್‌ನಲ್ಲಿ 4 ಟಿಎಂಸಿಕ್ಕಿಂತ ಅಧಿಕ ನೀರಿದೆ ಈ ಬಗ್ಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮಾಹಿತಿ ನೀಡಿದ್ದೆನೆ, ಬ್ಯಾರೇಜ್‌ನಲ್ಲಿನ ಅರ್ದ ಟಿಎಂಸಿಯಷ್ಟು ನೀರು ಹರಿಸುವಂತೆ ಮನವಿ ಮಾಡಿಕೊಂಡಿದ್ದೆನೆ ಎಂದು ತಿಳಿಸಿದರು.