ಬಾಂದರಗಳಲ್ಲಿ ನೀರು ಬತ್ತಿ: ಮೀನುಗಳ ಸಾವು
ಲೋಕದರ್ಶನ ವರದಿ
ಸಂಬರಗಿ 04: ಗಡಿ ಗ್ರಾಮಗಳಲ್ಲಿ ಅಗ್ರಾಣಿ ಹಾಗೂ ಬಾಂದರಗಳಲ್ಲಿ ಸಂಗ್ರಹವಾಗಿರುವ ನೀರು ಬತ್ತಿ ಹೋಗಿರುತ್ತವೆ. ನೀರಿಲ್ಲದ ಕಾರಣ ನಿರಿನಲ್ಲಿರುವ ಸಾವಿರಾರು ಮಿನುಗಳು ಮೃತಪಟ್ಟು ದುರ್ವಾಸನೆ ಬರುತ್ತಿದೆ.
ಗಡಿ ಗ್ರಾಮ ಶಿರೂರ, ಸಂಬರಗಿ, ತಾಂವಶಿ, ಪಾಂಡೇಗಾಂವ, ಖಿಳೇಗಾಂವ, ಕಲ್ಲೋತಿ, ಶಿವನೂರ ಸೇರಿದಂತೆ ಈ ಭಾಗದಲ್ಲಿರುವ ಅಗ್ರಾಣಿ ನದಿಗೆ ಬಾಂದಾರ ಇದ್ದು, ಕಳೆದ ಮೂರು ತಿಂಗಳಿನಿಂದ ಬಾಂದರಗಳಲ್ಲಿ ನೀರು ಸಂಗ್ರಹವಿತ್ತು ಕಳೆದ ಹದಿನೈದು ದಿನಗಳಿಂದ ಬಾಮದರಗಳು ನೀರಿನಿಂದ ಖಾಲಿಯಾಗಿದ್ದು ನೀರಿನಲ್ಲಿರುವ ಮಿನುಗಳು ನೀರಿನ ಕೊರತೆಯಿಂದ ನರಳಾಡಿ ಮೃತಪಟ್ಟಿತುತ್ತವೆ. ಮಿನುಗಾರಿಕೆ ಇಲಾಖೆಯ ಅಧಿಕಾರಿಗಳು ಈ ಭಾಗಕ್ಕೆ ಭೆಟ್ಟಿ ನೀಡಿಲ್ಲ, ಬಾಂದಾರಗಳು ನೀರು ತುಂಬಿದ ನಂತರ ಚಿಕ್ಕ ಮಿನುಗಳನ್ನು ಬಿಟ್ಟ ನಂತರ ಮರಳಿ ನೋಡಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಈ ಭಾಗದಲ್ಲಿರುವ ಬಾಂದಾರಗಳು ಹಾಗೂ ಅಗ್ರಾಣಿ ನೀರಿಲ್ಲದ ಪರಿಣಾಮ ಮಿನುಗಳು ಮೃತಪಟ್ಟು ದುರ್ವಾಸನೆಯಿಂದ ಆ ದಾರಿಯಲ್ಲಿ ಹೋಗುವ ಜನರಿಗೆ ತೀರಾ ತೊಂದರೆಯಾಗಿದ್ದು ಹಲವಾರು ರೋಗಗಳು ಹಬ್ಬುವ ಸಾಧ್ಯತೆ ಇವೆ. ಸಂಬಂದ ಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಯೋಗ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಹೊರಾಟಗಾರರಾದ ಬಸನಗೌಡಾ ಪಾಟೀಲ ಬೊಬನಾಳ ಇವರನ್ನು ಸಂಪರ್ಕಿಸಿದಾಗ ಅಗ್ರಾಣಿಯಲ್ಲಿ ನೀರಿದ್ದಾಗ ಮಿನುಗಳಿಗೆ ಅನುಕೂಲವಾಗಿತ್ತು. ಆದರೆ ಬತ್ತಿ ಹೋದ ನಂತರ ದುವರ್ಾಸನೆ ಎದ್ದಿದೆ. ಈ ಭಾಗದಲ್ಲಿ ಇನ್ನುವರೆಗೆ ಮಿನುಗಾರಿಕೆ ಇಲಾಖೆ ಭೆಟ್ಟಿ ನೀಡಿಲ್ಲ. ಇಲಾಖೆ ಅಧಿಕಾರಿಗಳು ಭೆಟ್ಟಿನೀಡಿ ಪರಿಹಾರಗೋಳಿಸಬೇಕು. ಇಲ್ಲವಾದರೆ ಹೋರಾಟಮಾಡಲಾಗುವದೆಂದು ಎಚ್ಚರಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 