ಬಾಂದರಗಳಲ್ಲಿ ನೀರು ಬತ್ತಿ: ಮೀನುಗಳ ಸಾವು
ಲೋಕದರ್ಶನ ವರದಿ
ಸಂಬರಗಿ 04: ಗಡಿ ಗ್ರಾಮಗಳಲ್ಲಿ ಅಗ್ರಾಣಿ ಹಾಗೂ ಬಾಂದರಗಳಲ್ಲಿ ಸಂಗ್ರಹವಾಗಿರುವ ನೀರು ಬತ್ತಿ ಹೋಗಿರುತ್ತವೆ. ನೀರಿಲ್ಲದ ಕಾರಣ ನಿರಿನಲ್ಲಿರುವ ಸಾವಿರಾರು ಮಿನುಗಳು ಮೃತಪಟ್ಟು ದುರ್ವಾಸನೆ ಬರುತ್ತಿದೆ.
ಗಡಿ ಗ್ರಾಮ ಶಿರೂರ, ಸಂಬರಗಿ, ತಾಂವಶಿ, ಪಾಂಡೇಗಾಂವ, ಖಿಳೇಗಾಂವ, ಕಲ್ಲೋತಿ, ಶಿವನೂರ ಸೇರಿದಂತೆ ಈ ಭಾಗದಲ್ಲಿರುವ ಅಗ್ರಾಣಿ ನದಿಗೆ ಬಾಂದಾರ ಇದ್ದು, ಕಳೆದ ಮೂರು ತಿಂಗಳಿನಿಂದ ಬಾಂದರಗಳಲ್ಲಿ ನೀರು ಸಂಗ್ರಹವಿತ್ತು ಕಳೆದ ಹದಿನೈದು ದಿನಗಳಿಂದ ಬಾಮದರಗಳು ನೀರಿನಿಂದ ಖಾಲಿಯಾಗಿದ್ದು ನೀರಿನಲ್ಲಿರುವ ಮಿನುಗಳು ನೀರಿನ ಕೊರತೆಯಿಂದ ನರಳಾಡಿ ಮೃತಪಟ್ಟಿತುತ್ತವೆ. ಮಿನುಗಾರಿಕೆ ಇಲಾಖೆಯ ಅಧಿಕಾರಿಗಳು ಈ ಭಾಗಕ್ಕೆ ಭೆಟ್ಟಿ ನೀಡಿಲ್ಲ, ಬಾಂದಾರಗಳು ನೀರು ತುಂಬಿದ ನಂತರ ಚಿಕ್ಕ ಮಿನುಗಳನ್ನು ಬಿಟ್ಟ ನಂತರ ಮರಳಿ ನೋಡಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಈ ಭಾಗದಲ್ಲಿರುವ ಬಾಂದಾರಗಳು ಹಾಗೂ ಅಗ್ರಾಣಿ ನೀರಿಲ್ಲದ ಪರಿಣಾಮ ಮಿನುಗಳು ಮೃತಪಟ್ಟು ದುರ್ವಾಸನೆಯಿಂದ ಆ ದಾರಿಯಲ್ಲಿ ಹೋಗುವ ಜನರಿಗೆ ತೀರಾ ತೊಂದರೆಯಾಗಿದ್ದು ಹಲವಾರು ರೋಗಗಳು ಹಬ್ಬುವ ಸಾಧ್ಯತೆ ಇವೆ. ಸಂಬಂದ ಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಯೋಗ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಹೊರಾಟಗಾರರಾದ ಬಸನಗೌಡಾ ಪಾಟೀಲ ಬೊಬನಾಳ ಇವರನ್ನು ಸಂಪರ್ಕಿಸಿದಾಗ ಅಗ್ರಾಣಿಯಲ್ಲಿ ನೀರಿದ್ದಾಗ ಮಿನುಗಳಿಗೆ ಅನುಕೂಲವಾಗಿತ್ತು. ಆದರೆ ಬತ್ತಿ ಹೋದ ನಂತರ ದುವರ್ಾಸನೆ ಎದ್ದಿದೆ. ಈ ಭಾಗದಲ್ಲಿ ಇನ್ನುವರೆಗೆ ಮಿನುಗಾರಿಕೆ ಇಲಾಖೆ ಭೆಟ್ಟಿ ನೀಡಿಲ್ಲ. ಇಲಾಖೆ ಅಧಿಕಾರಿಗಳು ಭೆಟ್ಟಿನೀಡಿ ಪರಿಹಾರಗೋಳಿಸಬೇಕು. ಇಲ್ಲವಾದರೆ ಹೋರಾಟಮಾಡಲಾಗುವದೆಂದು ಎಚ್ಚರಿಸಿದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 