ವಿನಯ ರಾಜ್ಯ ಮಟ್ಟಕ್ಕೆ ಆಯ್ಕೆ

ರನ್ನ ಬೆಳಗಲಿ 17: ರನ್ನ ಬೆಳಗಲಿ ಸಮೀಪದ ಕೆಸರಗೋಪ್ಪ ಸರಕಾರಿ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿಯಾದ ವಿನಯ ಇರಗಾರ ಇವನು ಬೆಳಗಾವಿ ವಿಭಾಗ  ಮಟ್ಟದ ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈ  ಕ್ರೀಡಾ ಪಟುವಿಗೆ ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷರು, ಸದ್ಯಸರು, ಊರಿನ ಹಿರಿಯರು ಹಾಗೂ ಮುಖ್ಯೋಪಾಧ್ಯಾಯ, ಸಿಬ್ಬಂದಿ ವರ್ಗದವರು  ಶುಭ ಹಾರೈಸಿದ್ದಾರೆ.