ವಿಜಯಪುರ: ಬೆಂಗಳೂರು-ವಿಜಯಪುರ ಸೈಕಲ್ ಯಾತ್ರೆಗೆ ಚಾಲನೆ
ಲೋಕದರ್ಶನ ವರದಿ
ವಿಜಯಪುರ 28: 'ಮಧುಮೇಹಕ್ಕೆ ಸೈಕ್ಲಿಂಗ್ ಮದ್ದು' ಎಂಬ ಸಂದೇಶದೊಂದಿಗೆ ಇಲ್ಲಿನ ಬಿ.ಎಲ್.ಡಿ.ಇ ವಿಶ್ವವಿದ್ಯಾಲಯ ಬಿ.ಎಂ.ಪಾಟೀಲ ವೈದ್ಯಕೀಯ ಆಸ್ಪತ್ರೆ ಸಹಯೋಗದಲ್ಲಿ ಏರ್ಪಡಿಸಿರುವ ಬೆಂಗಳೂರಿನಿಂದ ವಿಜಯಪುರ ಅಹೋರಾತ್ರಿ ಸೈಕಲ್ ಯಾತ್ರೆಗೆ ಶುಕ್ರವಾರ ಬೆಂಗಳೂರಿನಲ್ಲಿ ನಗರ ಪೋಲಿಸ್ ಆಯುಕ್ತ ಭಾಸ್ಕರ್ ರಾವ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಧುಮೇಹ ಕಾಯಿಲೆಯಿಂದ ಭಾಧಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಈ ಕಾಯಿಲೆ ತಡೆಗಟ್ಟಲು ಸೈಕಲ್ ಪರಿಣಾಮಕಾರಿ ಸಾಧನವಾಗಿದೆ. ಹಿಂದೆ ನಾನು ಕೂಡಾ ಪೋಲಿಸ್ ಸಿಬ್ಬಂದಿಯೊಂದಿಗೆ ಬೀದರ-ಬೆಂಗಳೂರು, ಬೆಳಗಾವಿ-ಬೆಂಗಳೂರು ಸೈಕಲ್ ಸವಾರಿ ಹಮ್ಮಿಕೊಂಡಿದ್ದೆವು. ಆದರೆ ಇಲ್ಲಿ ಒಂದೇ ದಿನದಲ್ಲಿ 500ಕಿ.ಮೀ ಗಿಂತಲೂ ಹೆಚ್ಚು ದೂರವನ್ನು ಕ್ರಮಿಸುತ್ತಿರುವುದು ಮಹಾನ ಸಾಧನೆಯಾಗಿದೆ ಎಂದರು.
ಬಿ.ಎಲ್.ಡಿ.ಇ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಅಭಿಯಾನ ಉಸ್ತುವಾರಿ ಡಾ. ವಿಕಾಸ ದೇಸಾಯಿ, ಸೈಕ್ಲಿಸ್ಟ್ ಗಳಾದ ಪೋಲಿಸ್ ಅಧಿಕಾರಿ ಗಂಗು ಬಿರಾದಾರ, ರೈಲ್ವೇಸ್ನ ಅಧಿಕಾರಿ ವಿಜಯಸಿಂಗ್ ರಜಪೂತ, ನಿಜಪ್ಪ ಎಂಟೆತ್ತು, ಉಪಸ್ಥಿತರಿದ್ದರು.
ಬೆಂಗಳೂರಿನ ವೆಂಕಟೇಶ ಶಿವರಾಮ, ಮಾಹಿತಿ ತಂತ್ರಜ್ಞ ಮಂಜುನಾಥ ನಾಗರಾಜ, ವಿಜಯಪುರದ ಶ್ರೀಧರ ಸವಣೂರ, ಮೂವರು ಸೈಕ್ಲಿಸ್ಟ್ಗಳು ಬೆಂಗಳೂರಿನಿಂದ ಅಹೋರಾತ್ರಿ ಸೈಕಲ್ ತುಳಿದು ಶನಿವಾರ ಬೆಳಿಗ್ಗೆ 10 ಗಂಟೆಗೆ ವಿಜಯಪುರ ತಲುಪುವ ಅಂದಾಜಿದೆ. ಮಧ್ಯಾಹ್ನ 3.30ಕ್ಕೆ ಬಿ.ಎಲ್.ಡಿ.ಇ ಗ್ರಂಥಾಲಯ ಸಭಾಂಗಣದಲ್ಲಿ ಈ ಕುರಿತು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 