ವಸಂತ ಪಂಚಮಿ ಹಿಂದೂಗಳ ಪವಿತ್ರ ದಿನ: ಶಿವಾನಂದ ತಿಪ್ಪಾ
Vasant Panchami is a holy day for Hindus: Shivanand Tippa
ಮಹಾಲಿಂಗಪುರ 24: ಇಂದು ಹಿಂದೂಗಳಿಗೆ ಪವಿತ್ರವಾದ ವಸಂತ ಪಂಚಮಿ ಆ ನಿಮಿತ್ಯ ನಮ್ಮ ಶಾಲೆಯಲ್ಲಿ ಸರಸ್ವತಿ ಮಂದಿರದಲ್ಲಿ ಪಂಚ ಲೋಹದ ಸರಸ್ವತಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಹೇಳಿದರು. ಸ್ಥಳೀಯ ಜೆಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೆರವೇರಿದ ಸರಸ್ವತಿ ಮೂರ್ತಿ ಪ್ರತಿಷ್ಠಾಪನ ಸಂದರ್ಭದಲ್ಲಿ ಮಾತನಾಡಿದ ಅವರು ಇಂದು ಸರಸ್ವತಿ ಮಾತೆ ಅವತರಿಸಿದ ದಿನ, ಸರಸ್ವತಿ ಮಾತೆಯ ಕೃಪೆಯಿಂದ ಸರ್ವರೂ ಜ್ಞಾನ ಸಂಪಾದಿಸಬಹುದು. ಹಣ, ಅಂತಸ್ತು, ಐಶ್ವರ್ಯ ಮುಂತಾದ ಎಲ್ಲಾ ಸಂಪತ್ತುಗಳಿಗಿಂತ ಜ್ಞಾನ ಸಂಪತ್ತು ಶ್ರೇಷ್ಠ ಆ ಜ್ಞಾನವನ್ನು ಸಂಪಾದಿಸಲು ಸರ್ವರು ಸರಸ್ವತಿ ಮಾತೆಯ ಕೃಪೆಗೆ ಪಾತ್ರರಾಗಲು ಈ ದಿನ ಸುಸಂದರ್ಭ ಎಂದರು. ಪತ್ರಕರ್ತರಾದ ಎಸ್.ಎಸ್. ಈಶ್ವರ್ಪಗೋಳ, ನಾರನಗೌಡ ಉತ್ತಂಗಿ, ಮುಖ್ಯೋಪಾಧ್ಯಾಯ ಎಸ್.ಜಿ.ಕೌಜಲಗಿ, ಶಿಕ್ಷಕರಾದ ಸುರೇಶ ಮಾಟಗಾರ, ಎನ್.ಎಂ.ನಾಡಗೌಡ, ಐ.ಎಂ.ಬಡಿಗೇರ ಮತ್ತು ಮಕ್ಕಳ ಸಮ್ಮುಖದಲ್ಲಿ ಪ್ರತಿಷ್ಠಾಪಿಸಲಾಯಿತು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 