ವಸಂತ ಪಂಚಮಿ ಹಿಂದೂಗಳ ಪವಿತ್ರ ದಿನ: ಶಿವಾನಂದ ತಿಪ್ಪಾ
Vasant Panchami is a holy day for Hindus: Shivanand Tippa
ಮಹಾಲಿಂಗಪುರ 24: ಇಂದು ಹಿಂದೂಗಳಿಗೆ ಪವಿತ್ರವಾದ ವಸಂತ ಪಂಚಮಿ ಆ ನಿಮಿತ್ಯ ನಮ್ಮ ಶಾಲೆಯಲ್ಲಿ ಸರಸ್ವತಿ ಮಂದಿರದಲ್ಲಿ ಪಂಚ ಲೋಹದ ಸರಸ್ವತಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಹೇಳಿದರು. ಸ್ಥಳೀಯ ಜೆಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೆರವೇರಿದ ಸರಸ್ವತಿ ಮೂರ್ತಿ ಪ್ರತಿಷ್ಠಾಪನ ಸಂದರ್ಭದಲ್ಲಿ ಮಾತನಾಡಿದ ಅವರು ಇಂದು ಸರಸ್ವತಿ ಮಾತೆ ಅವತರಿಸಿದ ದಿನ, ಸರಸ್ವತಿ ಮಾತೆಯ ಕೃಪೆಯಿಂದ ಸರ್ವರೂ ಜ್ಞಾನ ಸಂಪಾದಿಸಬಹುದು. ಹಣ, ಅಂತಸ್ತು, ಐಶ್ವರ್ಯ ಮುಂತಾದ ಎಲ್ಲಾ ಸಂಪತ್ತುಗಳಿಗಿಂತ ಜ್ಞಾನ ಸಂಪತ್ತು ಶ್ರೇಷ್ಠ ಆ ಜ್ಞಾನವನ್ನು ಸಂಪಾದಿಸಲು ಸರ್ವರು ಸರಸ್ವತಿ ಮಾತೆಯ ಕೃಪೆಗೆ ಪಾತ್ರರಾಗಲು ಈ ದಿನ ಸುಸಂದರ್ಭ ಎಂದರು. ಪತ್ರಕರ್ತರಾದ ಎಸ್.ಎಸ್. ಈಶ್ವರ್ಪಗೋಳ, ನಾರನಗೌಡ ಉತ್ತಂಗಿ, ಮುಖ್ಯೋಪಾಧ್ಯಾಯ ಎಸ್.ಜಿ.ಕೌಜಲಗಿ, ಶಿಕ್ಷಕರಾದ ಸುರೇಶ ಮಾಟಗಾರ, ಎನ್.ಎಂ.ನಾಡಗೌಡ, ಐ.ಎಂ.ಬಡಿಗೇರ ಮತ್ತು ಮಕ್ಕಳ ಸಮ್ಮುಖದಲ್ಲಿ ಪ್ರತಿಷ್ಠಾಪಿಸಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 