ಮರೆಯಾಗುತ್ತದೆ ಗುರುಭಕ್ತಿ: ಕಾಶೀನಾಥ ಶ್ರೀ
ಲೋಕದರ್ಶನ ವರದಿ
ಗುಳೇದಗುಡ್ಡ; ಭಾರತೀಯ ಪ್ರಾಚೀನ ಪರಂಪರೆಯಲ್ಲಿ ಗುರುಗಳನ್ನು ದೇವರೆಂದು ಬಗೆಯಲಾಗಿತ್ತು. ಆದರೆ ಇಂದು ಗುರು ಭಕ್ತಿ ಮರೆಯಾಗುತ್ತಿದೆ ಎಂದು ಇಲ್ಲಿನ ಮುರಘಾಮಠದ ಕಾಶೀನಾಥ ಶ್ರೀಗಳು ತಮ್ಮ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಸರಸ್ವತಿ ವಿದ್ಯಾ ಸಂಸ್ಥೆಯಲ್ಲಿ ಕಲಿತ 1993-94 ನೇ ಸಾಲಿನ 7 ನೇ ತರಗತಿಯ ಹಳೆಯ ವಿದ್ಯಾಥರ್ಿಗಳ ಸ್ನೇಹ ಸಮ್ಮೀಲನ ಹಾಗೂ ಗುರುವಂದನಾ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿ,ಗುರುಪರಂಪರೆ ಮುಂದುವರೆಯಬೇಕಿದೆ. ಗುರುಗಳನ್ನು ಭಯ ಭಕ್ತಿಯಿಂದ ಪೂಜಿಸುವ ಸಂಸ್ಕೃತಿ ನಮ್ಮದು. ಆದರೆ ಆಧುನಿಕ ದಿನಗಳಲ್ಲಿ ಗುರು ಭಕ್ತಿ ಕಡಿಮೆಯಾಗಿ ವಿದ್ಯಾಥರ್ಿಗಳಲ್ಲಿ ಶಿಸ್ತುಬದ್ಧ ಜೀವನ ಮರೆಯಾಗುತ್ತಿದೆ. ಪ್ರತಿಯೊಬ್ಬರೂ ಗುರುಗಳನ್ನು ಸ್ಮರಿಸುವ ಕಾಲ ಮತ್ತೇ ಬರಬೇಕೆಂದರು.
ಆರ್ಎಸ್ಎಸ್ ನ ಕನರ್ಾಟಕ ಉತ್ತರ ಪ್ರಾಂತದ ರಾಷ್ಟ್ರೀಯ ವಕ್ತಾರ ಶ್ರೀನಿವಾಸ್ ನಾಡಿಗೇರ್ ಮುಖ್ಯ ಅತಿಥಿಗಳಾಗಿ ಮಾತನಾಡಿ, ಗುರುಗಳನ್ನು ನೆನಪಿಸಿಕೊಳ್ಳುವ ಈ ಸಂಸ್ಕೃತಿ ಬೆಳೆಯಬೇಕು. ಕಲಿತ ಶಾಲೆ ಹಾಗೂ ಗುರುಗಳನ್ನು ಕಾಣುವ ಈ ಬಗೆಯ ಪರಂಪರೆಯಿಂದ ಗುರುಭಕ್ತಿ ಹೆಚ್ಚುತ್ತದೆ ಎಂದರು.ಸಂಸ್ಥೆಯ ಅಧ್ಯಕ್ಷ ಘನಶಾಂದಸ್ ರಾಠಿ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಶಿಕ್ಷಕ ಕೆ.ಹೆಚ್.ಮರಳಿ ಮಾತನಾಡಿದರು.
ಸಭೆಯ ಆಕರ್ಷಣೆಯಾಗಿದ್ದ ಗುರುಗಳಾದ ಸುಮತಿ ಹೆಗಡೆ, ಸುಮನಾ ನಾಯಕ, ಪ್ರಮೀಳಾ ಮುದ್ದಾಪೂರ, ಭಾರತಿ ತಾಂಡೂರ್, ಜಮುನಾ ಮಾದರ್, ರಾಜೇಶ್ವರಿ ಕವಡಿಮಟ್ಟಿ, ಪಿ.ಎನ್.ಪವಾರ್ ನಾಗಪ್ಪ ವಡ್ಡರ್, ಶಂಕರ್ ರೂಡಗಿ ಸೇರಿದಂತೆ ಇನ್ನೂ ಹಲವು ಹಳೆಯ ವಿದ್ಯಾಥರ್ಿಗಳು ಗುರುಗಳಿಗೆ ಸತ್ಕರಿಸಿ ಗುರುವಂದನಾ ಸಲ್ಲಿಸಿ ಗೌರವಿಸಿದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 