ಕುರಆನ್ ಪ್ರವಚನದ ಪೋಸ್ಟರ್ ಅನಾವರಣ

Unveiling poster of Quran discourse

ತಾಳಿಕೋಟಿ 14: ಪಟ್ಟಣದಲ್ಲಿ ಫೆಬ್ರವರಿ 21ರಿಂದ 23ರ ವರೆಗೆ ನಡೆಯಲಿರುವ ಸಾರ್ವಜನಿಕ ಕುರಆನ್ ಪ್ರವಚನ ಕಾರ್ಯಕ್ರಮದ ಭಿತ್ತಿ ಪತ್ರ ( ಪೋಸ್ಟರ್) ಗಳನ್ನು ಗುರುವಾರ ಪ್ರವಚನ ಕಾರ್ಯಾಲಯದಲ್ಲಿ ಅನಾವರಣಗೊಳಿಸಲಾಯಿತು.  

ಈ ವೇಳೆ ಪೂಜ್ಯ ಶ್ರೀ ಶರಣಪ್ಪ ಮುತ್ಯಾ ಶರಣರ,ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ, ಹಿರಿಯ ಪತ್ರಕರ್ತ ಜಿ.ಟಿ. ಘೋರೆ​‍್ಡ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ವಿಜಯಸಿಂಗ್ ಹಜೇರಿ,ವಸಾಪ ಅಧ್ಯಕ್ಷ ಮಹಾಂತೇಶ ಮುರಾಳ, ಎ.ಕೆ.ನಮಾಜಕಟ್ಟಿ,ಎಂ.ಎ.ಮೇತ್ರಿ, ಸಂಚಾಲಕ ಸೈಯದ್ ಇರ್ಫಾನ್ ಖಾಜಿ, ಅಧ್ಯಕ್ಷ ಮುಜಾಹೀದ ನಮಾಜಕಟ್ಟಿ ಮತ್ತಿತರರು ಇದ್ದರು.