ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ
ರಾಣೇಬೆನ್ನೂರು-ಫೆ19: ತಾಲೂಕಿನ ಅಸುಂಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಆಡಳಿತ ಮಂಡಳಿಯ 12 ನಿರ್ದೇಶಕರ ಚುನಾವಣೆ ಪ್ರಕ್ರಿಯೆ ನಡೆದು ಅವಿರೋಧ ಆಯ್ಕೆ ಘೋಷಣೆಯಾಗಿತ್ತು. ಇಂದು ಮಂಗಳವಾರ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆದು ಈಶ್ವರ ಹೊನ್ನಪ್ಪ ಹವಳನಾಯಕ ಅಧ್ಯಕ್ಷರಾಗಿ ಮತ್ತು ಕಾಂತೇಶ ಹನುಮಂತಪ್ಪ ಹಿತ್ತಲಮನಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.
ಇನ್ನುಳಿದಂತೆ ನಿರ್ದೇಶಕರಾಗಿ ಎಂ.ಎಸ್.ಕುಸಗೂರ, ಎಚ್.ಎಸ್.ಸಿದ್ದಪ್ಪನವರ, ಬಿ.ಪಿ.ದೊಡ್ಡಬೂದಿಹಾಳ, ಡಿ.ಎಸ್.ನಿರ್ಮನಿ, ಎ.ಎಂ.ಕೊಕ್ಕರಗೊಂದಿ, ಇ.ಆರ್.ಬಳಿಗಾರ, ಕೆ.ಎನ್.ಕೆಂಚಮ್ಮನವರ, ಎಚ್.ಬಿ.ಬೆಳವಿಗಿ, ವೀಣಾ ಎಂ. ಕುಬಸದ, ಗಿರಿಜವ್ವ ಕೆ. ಮೂಲಿಮನಿ ಆಯ್ಕೆಗೊಂಡವರಾಗಿದ್ದಾರೆ. ನೂತನ ಪದಾಧಿಕಾರಿಗಳು ಗ್ರಾಮದ ಮುಖಂಡರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗಣ್ಯರು ಅಭಿನಂದಿಸಿ ಸನ್ಮಾನಿಸಿದರು.
ಚುನಾವಣಾಧಿಕಾರಿಯಾಗಿ ವ್ಹಿ.ಜಿ.ಕುಲಕಣರ್ಿ ಅವರು ಕಾರ್ಯನಿರ್ವಹಿಸಿದರು. ಬ್ಯಾಂಕ್ ಪ್ರತಿನಿಧಿ ಆರ್.ಜಿ.ಮಾಳಗುಡ್ಡಪ್ಪನವರ ಅವರು ಪಾಲ್ಗೊಂಡಿದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 