ಈಜಲು ಹೋದ ಇಬ್ಬರು ವಿದ್ಯಾರ್ಥಿಗಳ ಸಾವು
Two students die while swimming: Bellay news
ಹೊಸಪೇಟೆ 22: ನಗರದ ಕಾರಿಗನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ ಅರವಿಂದ (13ವರ್ಷ) ಹನುಮಂತ (13 ವರ್ಷ) ಕಾರಿಗನೂರಿನಲ್ಲಿ ಇರುವಂತ ಚಕ್ಡ್ಯಾಂನಲ್ಲಿ ಶನಿವಾರದ ಮದ್ಯಾಹ್ನ ನಂತರ ಈಜಲು ಹೋದ ವಿದ್ಯಾರ್ಥಿಗಳು ಮರಳಿ ಮನೆಗೆ ಬಾರದೆ ಸಾವನ್ನಪ್ಪಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದಎಚ್.ಎನ್ ಮಹಮ್ಮದ್ಇಮಾಮ್ ನಿಯಾಜಿರವರು ಕಾರಿಗನೂರಿಗೆ ತೆರಳಿ ಮೃತರಕುಟುಂಬಕ್ಕೆ ಸಾಂತ್ವಾನ ಹೇಳಿದರು. ಹಾಗೂ ಸ್ಥಳದಲ್ಲೇ ಇಬ್ಬರ ಮಕ್ಕಳ ಪೋಷಕರಿಗೆ ತಲಾ 25,000 ವೈಯಕ್ತಿಕವಾಗಿಆರ್ಥಿಕ ಸಹಾಯ ಮಾಡಿ, ಇನ್ನು ಹೆಚ್ಚಿನ ಸಹಾಯವನ್ನು ಕರ್ನಾಟಕ ಸರಕಾರದಿಂದ ಕೊಡಿಸುವ ಭರವಸೆ ನೀಡಿದರು. ಹಾಗೂ ಕುಟುಂಬದಆಧಾರ ಸ್ಥಂಭವಾಗುತ್ತಾರೆಂದು ಸಾವಿರಾರು ಕನಸುಗಳನ್ನು ಕಂಡಿದ್ದತಂದೆ ತಾಯಿಗಳಿಗೆ ಮರ್ಮಾಘಾತವಾಗಿದ್ದು ಭಾರಿಸಲಾಗದಂತ ನೋವನ್ನುಅನುಭವಿಸುತ್ತಿರುವುದನ್ನುಕಂಡು ಆ ಮಕ್ಕಳ ತಂದೆ ತಾಯಿಗಳಿಗೆ ಹಾಗೂ ಇಡೀಕುಟುಂಬಕ್ಕೆ ಮಕ್ಕಳ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಆ ಭಗವಂತನು ನೀಡಲಿ ಎಂದು ಭಗವಂತನಲ್ಲಿದುಃಖದಿಂದ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಹೊಸಪೇಟೆ ನಗರ ಸಭಾ ಅಧ್ಯಕ್ಷರಾದ ರೂಪೇಶ್ ಕುಮಾರ್, ಹಾಗೂ ನಗರ ಸಭಾ ಸದಸ್ಯರಾದ ನಾಗೇಂದ್ರ, ಹಾಗೂ ನಗರ ಸಭಾ ಸದಸ್ಯರಾದ ದ್ವಾರಕೇಶ್, ಬಜಾರ್ಪ, ಪರಮೇಶಗೌಡ್ರು, ಭಾಷಾ, ಭರತ್, ಮೋಹನ್ ಸ್ವಾಮಿ ಫಕ್ರುದ್ದೀನ್, ಕಾರಿಗನೂರು ಗ್ರಾಮದ ನೂರಾರು ಜನ ಮುಖಂಡರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 