ಮಂಗಳೂರಿನಲ್ಲಿ ಕೊವಿಡ್-19 ಸೋಂಕಿಗೆ ಇಬ್ಬರು ಬಲಿ
ಮಂಗಳೂರು, ಜೂನ್ 28: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಕೊವಿಡ್-19 ಸೋಂಕಿನಿಂದ ಮತ್ತಿಬ್ಬರು ಸಾವನ್ನಪ್ಪುವುದರೊಂದಿಗೆ ಸಾವಿನ ಸಂಖ್ಯೆ 12 ಕ್ಕೆ ಏರಿದೆ.ಮೃತರ ಪೈಕಿ ಬಂಟ್ವಾಳ ಮೂಲದ 57 ವರ್ಷದ ಮಹಿಳೆ ಮತ್ತು ಸೂರತ್ಕಲ್ ನ 31 ವರ್ಷದ ಯುವಕ ಸೇರಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಶನಿವಾರ ಒಂದೇ ಕುಟುಂಬದ 16 ಸದಸ್ಯರು ಸೇರಿದಂತೆ 49 ಜನರಿಗೆ ಕರೋನವೈರಸ್ ಸೋಂಕು ದೃಢಪಟ್ಟಿದೆ.
ಇದರೊಂದಿಗೆ ದಕ್ಷಿಣ ಕನ್ನಡದಲ್ಲಿ ಪ್ರಕರಣಗಳ ಒಟ್ಟು ಪ್ರಕರಣಗಳ ಸಂಖ್ಯೆ 566 ಕ್ಕೆ ಏರಿದೆ. 17 ಮಾದರಿಗಳ ಪರೀಕ್ಷೆಗಳ ಪೈಕಿ 7 ಪುರುಷರು,4 ಮಕ್ಕಳು, 4 ಮಹಿಳೆಯರು ಮತ್ತು ವೃದ್ಧೆ ಸೇರಿದಂತೆ 16 ಮಂದಿಗೆ ಸೋಂಕು ದೃಢಪಟ್ಟಿದೆ. ಮಹಿಳಾ ಉದ್ಯೋಗಿಯೊಬ್ಬರಿಗೆ ಶನಿವಾರ ಕರೋನವೈರಸ್ ಸೋಂಕು ದೃಢಪಟ್ಟ ನಂತರ ಅಧಿಕಾರಿಗಳು ಉಲ್ಲಾಳದ ಮಾಸ್ತಿಕಟ್ಟೆ ಪ್ರದೇಶ ಮತ್ತು ಉಜಿರೆಯ ಪೆಟ್ರೋಲ್ ಬಂಕ್ ಸೀಲ್ಡೌನ್ ಮಾಡಿದ್ದಾರೆ. ಉಳ್ಳಾಲ ಪಟ್ಟಣವನ್ನು ಕಂಟೈನ್ಮೆಂಟ್ ವಲಯವೆಂದು ಘೋಷಿಸಲಾಗಿದೆ. ಆರೋಗ್ಯ ಕಾರ್ಯಕರ್ತರು ಕೋಟೆಪುರ, ಮೊಗವೀರ ಪಟ್ಟಣ, ಅಬ್ಬಕ್ಕ ವೃತ್ತ, ಕಲ್ಲಾಪು, ಪಂಡಿತ್ಹೌಸ್ ಮತ್ತು ಕುತರ್ ಮುಂತಾದ ಪ್ರದೇಶಗಳನ್ನು ಸ್ಯಾನಿಟೈಸ್(ಸ್ಚಚ್ಛ) ಮಾಡುತ್ತಿದ್ದಾರೆ.
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ 