ಉಗಾರ-ಕುಡಚಿ ಮಾರ್ಗದ ವಾಹನ ಸಂಚಾರ ಸ್ಥಗಿತ
ಲೋಕದರ್ಶನ ವರದಿ
ಕಾಗವಾಡ: ಕೃಷ್ಣಾ ನದಿ ನೀರಿನ ರಭಸಕ್ಕೆ ಉಗಾರ-ಕುಡಚಿ ಮಧ್ಯದ ಕೃಷ್ಣಾ ನದಿ ಮೇಲಿನ ಸೇತುವೆಯ ಎರಡು ದಡಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರಿಂದ ಸೇತುವೆ ಮೇಲಿನ ನೀರು ಇಳಿಮುಖವಾದರೂ ಸಂಚಾರ ಸೇವೆ ಕಡಿತಗೊಳಿಸಲಾಗಿದೆ.
ಕಳೇದ 20 ದಿನಗಳಿಂದ ಕುಡಚಿ ಸೇತುವೆ ನೀರಿನಲ್ಲಿ ಮುಳುಗಿದೆ. ಸುಮಾರು 10 ಅಡಿ ನೀರು ಸೇತುವೆ ಮೇಲಿಂದ ಹರಿದು ಹೋಗಿದ್ದರಿಂದ ಎರಡು ದಡಿಗಳ ರಸ್ತೆ ಕೊಚ್ಚಿಕೊಂಡು ಹೋಗಿದೆ. ಇದರಿಂದ ಸೇತುವೆ ಮೇಲಿಂದ ಸಂಚಾರಿಸಲು ವಾಹನಧಾರಕರಿಗೆ ಅಪಾಯಕಾರಿವಾಗಿದೆ. ಇದರಿಂದ ಸಂಚಾರ ಸೇವೆ ಕಡಿತಗೊಳಿಸಲಾಗಿದೆ.
ಕಾಗವಾಡ ಪಿಎಸ್ಐ ಹನಮಂತ ಶಿರಹಟ್ಟಿ, ಕುಡಚಿ ಪಿಎಸ್ಐ ಮತ್ತು ಸಿಬ್ಬಂದಿಗಳು ಸೇತುವೆ ಮೇಲೆ ಉಳಿದು ಭಾರೀ ತೂಕದ ವಾಹನಗಳು ಸೇತುವೆ ಮೇಲಿಂದ ಸಂಚಾರಿಸಲು ನಿಷೆೇಧಿಸಲಾಗಿದೆ.
ಕೆಲ ಬೈಕ್ಗಳು ಮಾತ್ರ ಸಂಚಾರಿಸುತ್ತಿವೆ. ಕಳೇದ 20 ದಿನಗಳ ನಂತರವು ಈ ಮಾರ್ಗದ ಸೇತುವೆಯಿಂದ ಸಂಚಾರಿಸಲು ವಾಹನಧಾರಕರಿಗೆ ಅನಾನುಕೂಲತೆಯಾಗಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 