ಹಣ್ಣುಗಳ ಪ್ರದರ್ಶನ-ಮಾರಾಟ ಮೇಳ ಇಂದು ಕೊನೆಯ ದಿನ
ಲೋಕದರ್ಶನ ವರದಿ
ಕೊಪ್ಪಳ 22: ನಗರದ ತೋಟಗಾರಿಕಾ ಇಲಾಖೆ ಆವರಣದಲ್ಲಿ ಏರ್ಪಡಿಸಿರುವ ದಾಳಿಂಬೆ, ಕರಬೂಜ, ಕಲ್ಲಂಗಡಿ ಹಾಗೂ ದ್ರಾಕ್ಷಿ ಮೇಳದಲ್ಲಿ ಭಾರಿ ವ್ಯಾಪಾರವಾಗಿದ್ದು, ಮೂರು ದಿನದಲ್ಲಿ ಸುಮಾರು 30 ಲಕ್ಷ ರೂ. ವಹಿವಾಟು ನಡೆದಿದೆ.
ಶಿವರಾತ್ರಿ ಆಚರಣೆ ಸಂದರ್ಭದಲ್ಲಿಯೇ ಈ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜನೆಗೊಂಡಿರುವುದು ಒಳ್ಳೆಯ ವ್ಯಾಪಾರ ನಡೆದಿದೆ. ನಾನಾ ಬಗೆಯ ಕಲ್ಲಂಗಡಿ, ಕರಬೂಜ, ದ್ರಾಕ್ಷಿ ಹಾಗೂ ದಾಳಿಂಬೆ ಹಣ್ಣುಗಳು ವ್ಯಾಪಕವಾಗಿ ಈ ಮೇಳದಲ್ಲಿ ಮಾರಾಟಗೊಂಡಿವೆ.ಇನ್ನು ಮೇಳಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಕೇವಲ ಮೂರು ದಿನಗಳಲ್ಲಿ ಸುಮಾರು 25 ಟನ್ ಕಲ್ಲಂಗಡಿ, 8ರಿಂದ 10 ಟನ್ ಕರಬೂಜ, 10 ಟನ್ ದ್ರಾಕ್ಷಿ ಹಾಗೂ ಸುಮಾರು 8 ಟನ್ ದಾಳಿಂಬೆ ಮಾರಾಟವಾಗಿವೆ. ಸುಮಾರು 30 ಲಕ್ಷ ರೂ. ವಹಿವಾಟು ನಡೆದಿದೆ. ಹೀಗಾಗಿ ಮೇಳ ಯಶಸ್ವಿಯಾಗಿದ್ದು, ನಾಳೆಯವರೆಗೂ ವಿಸ್ತರಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿದರ್ೇಶಕ ಕೃಷ್ಣ ಉಕ್ಕುಂದ ತಿಳಿಸಿದ್ದಾರೆ.
ಕೊಪ್ಪಳದ ಫ್ರೂಟ್ಸ್ ಮೇಳಕ್ಕೆ ಶಾಸಕ-ಸಂಸದರ ಶಾಸಕ, ಸಂಸದರ ಭೇಟಿ: ಮೇಳಕ್ಕೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹಾಗೂ ಸಂಸದ ಸಂಗಣ್ಣ ಕರಡಿ ಪ್ರತ್ಯೇಕವಾಗಿ ಭೇಟಿ ನೀಡಿದರು. ಮೇಳದಲ್ಲಿನ ಕರಬೂಜ, ಕಲ್ಲಂಗಡಿ, ದ್ರಾಕ್ಷಿ ಹಾಗೂ ದಾಳಿಂಬೆ ಹಣ್ಣಿನ ವಿವಿಧ ತಳಿಗಳ ಬಗ್ಗೆ ಹಾಗೂ ಮೇಳದ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆ ಉಪ ನಿದರ್ೇಶಕ ಕೃಷ್ಣ ಉಕ್ಕುಂದ ಹಣ್ಣಿನ ಹಾಗೂ ಹಣ್ಣುಗಳ ಮೌಲ್ಯವಧರ್ಿತ ಉತ್ಪನ್ನಗಳ ಬಗ್ಗೆ ಸಂಸದರಿಗೆ ಮಾಹಿತಿ ನೀಡಿದರು. ಬಳಿಕ ಸಂಸದ ಸಂಗಣ್ಣ ಕರಡಿ ಮೇಳದಲ್ಲಿ ಕಲ್ಲಂಗಡಿ ಹಣ್ಣಿನ ರುಚಿ ಸವಿದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 