ಸರ್ಕಾರದಿಂದ ಸಾಮಾಜಿಕ ಅಂತರದ ಕ್ರಮಗಳು ಬಿಗಿ
ನವದೆಹಲಿ, ಏಪ್ರಿಲ್ 6, ಮಹಾವೀರ ಜಯಂತಿ ಆಚರಣೆಯೊಂದಿಗೆ ಸೋಮವಾರದಿಂದ ಆರಂಭವಾಗುವ ಎರಡನೇ ಹಂತದ ಹಬ್ಬ-ಆಚರಣೆಗಳ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ನಿಗಾ ವಹಿಸಿದೆ ಎಂದು ಮೂಲಗಳು ತಿಳಿಸಿವೆ.ಮಹಾವೀರ ಜಯಂತಿಯಲ್ಲದೆ, ಏಪ್ರಿಲ್ 14 ರವರೆಗೆ ಹಲವು ಆಚರಣೆಗಳಿದ್ದು, ಈ ದಿನಗಳಲ್ಲಿ ಜನರು ಗುಂಪುಗೂಡುವುದಕ್ಕೆ ಅವಕಾಶ ನೀಡದಿರಲು ಸರ್ಕಾರ ಕ್ರಮ ತೆಗೆದುಕೊಂಡಿದೆ.
ಸಬೆಬರತ್ ಮತ್ತು ಗುಡ್ಫ್ರೈಡೆ ಏಪ್ರಿಲ್ 9 ಮತ್ತು 10 ರಂದು ಆಚರಿಸಲಾಗುವುದು. ಹಾಗೆಯೇ ನೀಲ್ ಪೂಜಾ ಮತ್ತು ಚರಕ್ ಪೂಜೆ ಆಚರಣೆಗಳು ಏಪ್ರಿಲ್ 12 ಮತ್ತು 13 ರಂದು ಆಚರಿಸುವುದರಿಂದ ಮತ್ತು ಏಪ್ರಿಲ್ 14 ರಂದು ಕೆಲ ಸಮುದಾಯಗಳ 'ಹೊಸ ವರ್ಷ' ಆಚರಣೆಯಿರುವುದರಿಂದ ಜನಸಂದಣಿಯಾಗುವ ಸಾಧ್ಯತೆ ಇರುವುದರಿಂದ ಸರ್ಕಾರ ಕಣ್ಗಾವಲು ವಹಿಸಿದೆ.
ಕೊರೊನ ವಿರುದ್ದ ಹೋರಾಟದಲ್ಲಿ ಒಗ್ಗಟ್ಟು ತೋರಿಸಲು ಪ್ರಧಾನಿ ನರೇಂದ್ರಮೋದಿ ಕರೆ ನೀಡಿದ್ದ ದೀಪ ಬೆಳಗುವ ಕಾರ್ಯಕ್ರಮ ನಡೆದ ಮರುದಿನ ಹಬ್ಬಗಳ ಎರಡನೇ ಹಂತ ಆರಂಭವಾಗುತ್ತಿದ್ದಂತೆ ಸರ್ಕಾರ ತೀವ್ರ ನಿಗಾ ವಹಿಸಿದೆ.
ದೀಪ ಬೆಳಗುವ ವೇಳೆ ರಾತ್ರಿ 9 ಗಂಟೆಯಿಂದ ಒಂಬತ್ತು ನಿಮಿಷಗಳ ಕಾಲ ಐಕ್ಯತೆ ತೋರಿದ ಸಮಯದಲ್ಲಿ ಅನೇಕ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸಿರುವ ಬಗ್ಗೆ ವರದಿಯಾಗಿದೆ. ಇಂತಹ ಕೆಲ ಘಟನೆಗಳನ್ನು ಹೊರತು ಪಡಿಸಿ ಮಾರ್ಚ್ 25 ರಿಂದ ಏಪ್ರಿಲ್ 2ರ ವರೆಗಿನ ನವರಾತ್ರದ ಮೊದಲ ಹಂತದ ಹಬ್ಬದ ಸಂದರ್ಭದಲ್ಲಿ ದೇಶದ ಯಾವುದೇ ಭಾಗದಿಂದ ಸಾಮಾಜಿಕ ಅಂತರ ಉಲ್ಲಂಘನೆಯ ಬಗ್ಗೆ ವರದಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಸೋಂಕಿನಿಂದ ಸಾವಿನ ಸಂಖ್ಯೆ 109 ಕ್ಕೆ ಏರಿದೆ. ಒಟ್ಟಾರೆ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಪ್ರಧಾನಿ ಸೋಮವಾರ ಕೇಂದ್ರ ಸಚಿವ ಸಂಪುಟದ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 