ಬೆಂಗಳೂರು ನಗರದಲ್ಲಿ ಇನ್ನೂ ಮೂರು ದಿನ ಭಾರಿ ಮಳೆ
ಬೆಂಗಳೂರು , ಜೂನ್ 26, ಬೆಂಗಳೂರು ನಗರದಲ್ಲಿ ಇನ್ನೂ ಮೂರು ದಿನ ಭಾರಿಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ . ಮುಂಗಾರು ಚುರುಕುಗೊಂಡ ಹಿನ್ನೆಲೆ ಭಾರಿ ಮಳೆಯಾಗಲಿದೆನಿನ್ನೆ ನಗರದ ದಕ್ಷಿಣ ಭಾಗದಲ್ಲಿ ಸುರಿದ ಮಳೆಯಿಂದ ಅವಾಂತರ ಸೃಷ್ಟಿಯಾಗಿತ್ತು. ಇದೇ ಕಾರಣಕ್ಕೆ ವೃಷಭಾವತಿ ನದಿಯ ಕಾಲುವೆ ನೀರು ಹೆಚ್ಚಳವಾಗಿ ತಡೆಗೋಡೆ ಒಡೆದು ರಸ್ತೆಯಲ್ಲಿ ಭಾರಿ ಪ್ರವಾಹ ಕ್ಕೆ ಕಾರಣವಾಗಿ ಸಂಚಾರ ಬಹಳ ಅಸ್ತವ್ಯಸ್ತವಾಗಿತ್ತು ನಗರದ ಹಲವಡೆ ಭಾರಿ ಮಳೆಯಾಗಿದೆ , ಕೆಂಗೇರಿ 91 ಮಿ ಮೀಟರ್, ನಾಯಂಡಳ್ಳಿ 76 ಮಿ.ಮೀ, ಆರ್ ಆರ್ ನಗರ 70ಮಿ., ಮಾರುತಿ ಮಂದಿರ 61 ಮಿಮಿ ನಾಗರಭಾವಿಯಲ್ಲಿ 57 ಮಿ.ಮೀಟರ್ ಮಳೆ ಸುರಿದಿದೆಇಂದು ಸಂಜೆ ಸಹ ಧಾರಾಕಾರ ಮಳೆಯಾಗಲಿದ್ದು ಪಾಲಿಕೆಗೆ ಅಗತ್ಯ ಮುನ್ನೆಚ್ಚರಿಕೆ ಕೈಗೊಂಡಿದೆ ಎಂದೂ ಹೇಳಲಾಗಿದೆ.
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ 