ಮೊಸರು ಗುಂಡಿಗೆ ಒಡೆದ ಊರ ಗೌಡರು
The village Gowdas who broke the curd pit
ಮೊಸರು ಗುಂಡಿಗೆ ಒಡೆದ ಊರ ಗೌಡರು
ಇಂಡಿ: ತಾಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಹನುಮಾನ್ ಜಯಂತಿ ನಿಮಿತ್ತವಾಗಿ ಮೊಸರು ಗುಂಡಿಗೆ ಗ್ರಾಮದ ಊರ ಗೌಡರು ಒಡಿಯುವುದರ ಮೂಲಕ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಶ್ರೀ ಶಾಲಿವಾಹನ ಶಕೆ 1947 ವಿಶ್ವಾವಸುನಾಮ ಸಂವತ್ಸರ ಚೈತ್ರ ಶು.14 ಶುಕ್ರವಾರ ರಂದು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಬಲಭೀಮ ದೇವರಿಗೆ ಬೆಳೆಗೆ ಆರು ಗಂಟೆಗೆ ರುದ್ರಾಭಿಷೇಕ ಹಾಗೂ ಎಲೆ ನೆರವೇರಿಸಲಾಯಿತು. ನಂತರ ಮದ್ಯಾಹ್ನ 4ಗಂಟೆಗೆ ಊರ ಗೌಡರ ಮನೆಯಿಂದ ಗೋಪಾಳ ಕಾವಲಿ ಅತಿ ವಿಜೃಂಭಣೆಯಿಂದ ವಾದ್ಯ ವೈಭವಗಳೊಂದಿಗೆ ದೇವರ ಗುಡಿಗೆ ಬಂದು ದೇವಸ್ಥಾನದಲ್ಲಿ ಗೋಪಾಳ ಕಾವಲಿ (ಮೊಸರು ಗಡಿಗೆ) ಯನ್ನು, ಸಾಂಪ್ರದಾಯಿಕ ಪದ್ಧತಿಯಂತೆ ಊರ ವಾಲಿಕಾರ ಕಟ್ಟುತ್ತಾರೆ. ಅದನ್ನು ಊರ ಗೌಡರು ಅದನ್ನು ಬಂದು ಒಡಿಯುತ್ತಾರೆ, ನಂತರ ಜಾತ್ರೆಗೆ ಬಂದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ನಂತರ ವಿವಿಧ ಗ್ರಾಮಗಳಿಂದ ಬಂದ ಕುಸ್ತಿ ಪಟುಗಳಿಂದ ಕುಸ್ತಿ ಸೆಣಸಾಟ ನುಡಿಯಿತು. ಈ ಪದ್ಧತಿ ಆದಿಕಾಲದಿಂದಲೂ ನಡೆದುಕೊಂಡ ಬಂದ ಪದ್ಧತಿಯಾಗಿ ಎಂದು ಹೇಳುತ್ತಾರೆ ಗ್ರಾಮದ ಹಿರಿಯರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 