ಸಾಂಸ್ಕೃತಿಕ ಪರಂಪರೆಗೆ ಬುಡಕಟ್ಟು ಜನಾಂಗದ ಕೊಡುಗೆ ಅಪಾರ
ಲೋಕದರ್ಶನ ವರದಿ
ಹೂವಿನಹಡಗಲಿ : ಸಾಂಸ್ಕೃತಿಕ ಪರಂಪರೆಗೆ ಬುಡಕಟ್ಟು ಜನಾಂಗದ ಕೊಡುಗೆ ಅಪಾರ ಎಂದು ಕನ್ನಡ ಪಂಡಿತರಾದ ತುಳಜಾನಾಯ್ಕ ಹೇಳಿದರು.
ತಾಲೂಕಿನ ಕೊಮಾರನಹಳ್ಳಿತಾಂಡದ ಗೋಗಲಬಾಯಿ ಹರಿಶ್ಚಂದ್ರನಾಯ್ಕ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಕನರ್ಾಟಕ ಸಾಹಿತ್ಯ ಅಕಾಡಮಿಯ ಚಕೋರ-441 ಕವಿಕಾವ್ಯ ವಿಚಾರ ವೇದಿಕೆ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ನಾಡುನುಡಿ ಸೇವೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಾವೇರಿಯ ಮುಖ್ಯಗುರುಗಳಾದ ಗುಡಿಗೇರಿ ಮಾತನಾಡಿ ಸಿರಿಗನ್ನಡ ನಾಡು ಶ್ರೀಗಂಧದ ಬೀಡು ಸಕಲ ವೈಭವದ ನಮ್ಮ ನಾಡಿನ ಬಗೆಗೆ ಭಾಷೆಯ ಬಗ್ಗೆ ನಮಗೆ ಹೆಮ್ಮೆ ಇರಬೇಕಾಗಿದೆ ಎಂದರು.
ಮಿರಾಕೊರ್ನಹಳ್ಳಿ ಪ್ರೌಢಶಾಲಾಯ ಹಿಂದಿ ಪಂಡಿತರಾದ ಎಲ್.ಖಾದರಬಾಷ, ಗಾಧೆಗಳು, ಒಡಪುಗಳು ತತ್ವ ಪದಗಳು ಹಳ್ಳಿಗಳ ತಾಂಡಗಳ ಸಾಹಿತ್ಯ ಸಂಪತ್ತು ಕನ್ನಡ ಸಾಹಿತ್ಯದ ತಾಯಿ ಬೇರುಗಳೆಂದರು.
ಸಂದರ್ಭದಲ್ಲಿ ಸಾಹಿತ್ಯ ಅಕಾಡೆಮಿಯ ಪ್ರತಿನಿಧಿ ಡಾ.ಅಂಜನಾಕೃಷ್ಣಪ್ಪ, ಶಿಕ್ಷಕರಾದ ಮಂಜ್ಯಾನಾಯ್ಕ, ರೂಪ್ಲನಾಯ್ಕ, ಚನ್ನನಾಯ್ಕ, ಕಬೀರದಾಸ್, ಕನ್ನಡ ಪಂಡಿತರಾದ ಕೋಟೆಪ್ಪ ಮತ್ತೂರು ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಗುರುಗಳಾದ ದಾದಾಸಾಹೇಬ್ ವಹಿಸಿದ್ದರು. ಕವಿಗೋಷ್ಠಿಯಲ್ಲಿ ಗುರುಪ್ರಸಾದ್, ಮೋಹನ್, ರೋಜಾ, ಪ್ರಿಯಾಂಕ, ಲಲಿತಾಬಾಯಿ, ಕಾವ್ಯ, ಪವಿತ್ರ ಶೋಭಾ ರವರುಗಳು ಕವಿತೆ ವಾಚಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 