ಸಾಂಸ್ಕೃತಿಕ ಪರಂಪರೆಗೆ ಬುಡಕಟ್ಟು ಜನಾಂಗದ ಕೊಡುಗೆ ಅಪಾರ
ಲೋಕದರ್ಶನ ವರದಿ
ಹೂವಿನಹಡಗಲಿ : ಸಾಂಸ್ಕೃತಿಕ ಪರಂಪರೆಗೆ ಬುಡಕಟ್ಟು ಜನಾಂಗದ ಕೊಡುಗೆ ಅಪಾರ ಎಂದು ಕನ್ನಡ ಪಂಡಿತರಾದ ತುಳಜಾನಾಯ್ಕ ಹೇಳಿದರು.
ತಾಲೂಕಿನ ಕೊಮಾರನಹಳ್ಳಿತಾಂಡದ ಗೋಗಲಬಾಯಿ ಹರಿಶ್ಚಂದ್ರನಾಯ್ಕ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಕನರ್ಾಟಕ ಸಾಹಿತ್ಯ ಅಕಾಡಮಿಯ ಚಕೋರ-441 ಕವಿಕಾವ್ಯ ವಿಚಾರ ವೇದಿಕೆ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ನಾಡುನುಡಿ ಸೇವೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಾವೇರಿಯ ಮುಖ್ಯಗುರುಗಳಾದ ಗುಡಿಗೇರಿ ಮಾತನಾಡಿ ಸಿರಿಗನ್ನಡ ನಾಡು ಶ್ರೀಗಂಧದ ಬೀಡು ಸಕಲ ವೈಭವದ ನಮ್ಮ ನಾಡಿನ ಬಗೆಗೆ ಭಾಷೆಯ ಬಗ್ಗೆ ನಮಗೆ ಹೆಮ್ಮೆ ಇರಬೇಕಾಗಿದೆ ಎಂದರು.
ಮಿರಾಕೊರ್ನಹಳ್ಳಿ ಪ್ರೌಢಶಾಲಾಯ ಹಿಂದಿ ಪಂಡಿತರಾದ ಎಲ್.ಖಾದರಬಾಷ, ಗಾಧೆಗಳು, ಒಡಪುಗಳು ತತ್ವ ಪದಗಳು ಹಳ್ಳಿಗಳ ತಾಂಡಗಳ ಸಾಹಿತ್ಯ ಸಂಪತ್ತು ಕನ್ನಡ ಸಾಹಿತ್ಯದ ತಾಯಿ ಬೇರುಗಳೆಂದರು.
ಸಂದರ್ಭದಲ್ಲಿ ಸಾಹಿತ್ಯ ಅಕಾಡೆಮಿಯ ಪ್ರತಿನಿಧಿ ಡಾ.ಅಂಜನಾಕೃಷ್ಣಪ್ಪ, ಶಿಕ್ಷಕರಾದ ಮಂಜ್ಯಾನಾಯ್ಕ, ರೂಪ್ಲನಾಯ್ಕ, ಚನ್ನನಾಯ್ಕ, ಕಬೀರದಾಸ್, ಕನ್ನಡ ಪಂಡಿತರಾದ ಕೋಟೆಪ್ಪ ಮತ್ತೂರು ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಗುರುಗಳಾದ ದಾದಾಸಾಹೇಬ್ ವಹಿಸಿದ್ದರು. ಕವಿಗೋಷ್ಠಿಯಲ್ಲಿ ಗುರುಪ್ರಸಾದ್, ಮೋಹನ್, ರೋಜಾ, ಪ್ರಿಯಾಂಕ, ಲಲಿತಾಬಾಯಿ, ಕಾವ್ಯ, ಪವಿತ್ರ ಶೋಭಾ ರವರುಗಳು ಕವಿತೆ ವಾಚಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 