ಸಂಕ್ರಮಣ ಬಳಗದಿಂದ ತೋಂಟದ ಶ್ರೀಗಳಿಗೆ ಮೌನ ನಮನ
ಲೋಕದರ್ಶನ ವರದಿ
ಗದಗ 09: ಕನ್ನಡದ ಜ. ಪುಸ್ತಕದ ಸ್ವಾಮೀಜಿ, ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳಿಗೆ ಸಂಕ್ರಮಣ ಸಾಹಿತ್ಯ ಬಳಗದಿಂದ ಮೌನ ನಮನ ಸಲ್ಲಿಸಲಾಯಿತು.
ಸಾಹಿತಿ ಪ್ರೊ.ಚಂದ್ರಶೇಖರ ವಸ್ತ್ರದರವರ ಮನೆಯ ಛಾವಡಿ ಮೇಲೆ ನಡೆದ ಸಂಕ್ರಮಣ ಸಾಹಿತ್ಯ ಬಳಗದ 2ನೇ ಮಾಸಿಕ ಸಭೆಯಯಲ್ಲಿ ಪೂಜ್ಯರಿಗೆ ಮೌನ ನಮನ ಸಲ್ಲಿಸಲಾಯಿತು. ಆರಂಭದಲ್ಲಿ ಪ್ರಸಾದ ಸುತಾರ ಹಾಗೂ ಗುರುನಾಥ ಸುತಾರ ಅವರಿಂದ ವಚನ ಸಂಗೀತ ನಡೆಯಿತು. ಪೂಜ್ಯರ ಕುರಿತು ಪ್ರೊ.ಚಂದ್ರಶೇಖರ ವಸ್ತ್ರದವರು ರಚಿಸಿದ ಗೀತೆಯನ್ನು ಪ್ರಸಾದ ಸುತಾರ ಹಾಡಿದರು. ನಂತರ ಪೂಜ್ಯರಿಗೆ ಮೌನನಮನ ಸಲ್ಲಿಸಲಾಯಿತು.
ಸಂಕ್ರಮಣ ಸಾಹಿತ್ಯ ಬಳಗದ ಜಿಲ್ಲಾ ಸಂಚಾಲಕ ಡಾ.ಡಿ.ಬಿ.ಗವಾನಿ ಅವರು ಪೂಜ್ಯರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಂದಿನ ಸಭೆ ನಡೆಯುವ ಜಾಗ ಮತ್ತು ಚಚರ್ಿಸುವ ವಿಷಯಗಳ ಕುರಿತು ಸಭೆಯಲ್ಲಿ ಸಂಚಾಲಕರಾದ ಪ್ರೊ.ಚಂದ್ರಶೇಖರ ವಸ್ತ್ರದ, ಎಚ್.ವಿ.ಶಾನುಬೋಗರ, ಡಾ.ಎನ್.ಎಂ.ಅಂಬಲಿ ಮುಂತಾದವರು ಚಚರ್ಿಸಿದರು. ಪತ್ರಕರ್ತ ಮಂಜುನಾಥ ಬಮ್ಮನಕಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಕ್ರಮಣದ ಸದಸ್ಯರು ಹಾಗೂ ಸಾಹಿತಿಗಳು, ಸಾಹಿತ್ಯ ಆಸಕ್ತರು, ಮುಂತಾದವರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 