ಕಾಗವಾಡ: ದರೋಡೆ ಆರೋಪಿಗಳು ಮೂರೇ ದಿನದಲ್ಲಿ ಪೊಲೀಸ್ ವಶಕ್ಕೆ
ಕಾಗವಾಡ ಪೊಲೀಸ್ ಠಾಣೆಯಲ್ಲಿ ದರೋಡೆ ಆರೋಪಿಗಳನ್ನು ವಾಹನ ಸಮೇತ ಬಂಧಿಸಿದ ಸಿಪಿಐ ಅಲಿಸಾಬ, ಪಿಎಸ್ಐ ಹನಮಂತ ಶಿರಹಟ್ಟಿ ಮತ್
ಕಾಗವಾಡ 07: ಹಳೆ ವಾಹನ ಮಾರಾಟ ಮಾಡುವದಾಗಿ ಹೇಳಿ ಮಹಾರಾಷ್ಟ್ರದ ಕರಾಡ ತಾಲೂಕಿನ ಜನರನ್ನು ಕುಡಚಿ ಮತ್ತು ಉಗಾರದ 3 ಜನ ಆರೋಪಿಗಳು ಅವರ ಬಳಿಯಿರುವ 7.50 ಲಕ್ಷ ರೂ. ಹಣವನ್ನು ಕೋಣೆಯಲ್ಲಿ ಕೂಡು ಹಾಕಿ ಹೊಡೆದು ದರೋಡೆ ಮಾಡಿದ ಘಟಣೆ ಕೇವಲ ಮೂರು ದಿನಗಳಲ್ಲಿ ಕಾಗವಾಡ ಪೊಲೀಸ್ರು ತಪಾಸಣೆ ಮಾಡಿ, ಆರೋಪಿಗಳನ್ನು ಗೋಕಾಕ್ ಜೈಲಿಗೆ ಹಾಕಿದ ಘಟಣೆ ನಡೆದಿದೆ.
ಮಂಗಳವಾರ ದಿ.04ರಂದು ಸಂಜೆ ಕರಾಡದ ಉದಯ ಶಿಂಧೆ ಇವರು ಕಾಗವಾಡ ಪೊಲೀಸ್ ಠಾಣೆಗೆ ದೂರು ನೀಡಿ, ಉಗಾರದಲ್ಲಿ ನನ್ನ ಬಳಿಯಿರುವ ಕಾರು ಮತ್ತು 7.50 ಲಕ್ಷ ರೂ. ಮೂರು ಜನ ಕಸಿದುಕೊಂಡು ಹೊಡೆದು ಫರಾರಿಯಾಗಿದ್ದಾರೆ ಎಂದು ದೂರು ನೀಡಿದರು.
ಈ ಘಟಣೆ ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡು ಜಿಲ್ಲಾ ಪೊಲೀಸ್ ಪ್ರಮುಖರ ಆದೇಶ ಮೇರಿಗೆ ಅಥಣಿ ಡಿವೈಎಸ್ಪಿ ಆರ್.ಬಿ.ಬಸರಗಿ ಇವರ ಮಾರ್ಗದರ್ಶನದಲ್ಲಿ ಅಥಣಿ ಸಿಪಿಐ ಅಲಿಸಾಬ, ಕಾಗವಾಡ ಪಿಎಸ್ಐ ಹನಮಂತ ಶಿರಹಟ್ಟಿ ತಂಡ ರಚಿಸಿ ಶೋಧ ಪ್ರಾರಂಭಿಸಿದರು.
ಕಾಗವಾಡ-ಶೇಡಬಾಳ ಮಾರ್ಗದಿಂದ ದರೋಡೆ ಮಾಡಿ ಕಸಿದುಕೊಂಡು ಹೋದ ಫೋಡರ್್ಕಾರ್: ಎಂ.ಎಚ್.50.ಟಿ.7711 ಈ ವಾಹನಗೆ ಬೆನ್ನು ಹತ್ತಿ ತಡೆದಾಗ ಇದರಲ್ಲಿ ಘಟಣೆಯ ಮುಖ್ಯ ಆರೋಪಿ ದಾದಾಪಾಷಾ ಸಿರಾಜುದ್ದೀನ ಫಾಜೀಲ್(ಪಾಷಾ)ಇವನನ್ನು ವಶಕ್ಕೆ ತೆಗೆದುಕೊಂಡರು. ಉಗಾರ ಬಸ್ ನಿಲ್ದಾಣದಲ್ಲಿ ಸುತ್ತಾಡುತ್ತಿರುವ ಮಹೇಂದ್ರ ಉರ್ಫ ಮಾರ್ಶಲ್ ಕುರಾಡೆ, ಯಶ್ವಂತ ಕಾಂಬಳೆ ಈ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ಮಾಡಿದಾಗ, ಈ ಮೂರು ಜನರಿಂದ 5.50 ಲಕ್ಷ ರೂ.ನಗದು ಮತ್ತು 5 ಲಕ್ಷದ ಕಾರ್ ಹಾಗೂ ಇನೋವಾ ಎಂ.ಎಚ್.14.ಎ.ಎಂ.0530 ಜಪ್ತಿಮಾಡಿ ಆರೋಪಿಗಳ ಮೇಲೆ ಕ್ರಮ ಜರುಗಿಸಲಾಗಿದೆ. ಈ ಘಟಣೆಯಲ್ಲಿ ಇನ್ನು 4ಜನ ಆರೋಪಿಗಳಿದ್ದು ಇವರನ್ನು ಸೆರೆ ಹಿಡಿಯಲು ಜಾಲ ಬೀಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಈ ಘಟಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಎಸ್.ಬಿ.ಮುರಗೋಡ, ಎಸ್.ಎಂ.ದೊಡ್ಮನಿ, ಜೆ.ಎಸ್.ಸೋನವಣೆ, ಕೆ.ಬಿ.ಚಂದೂರ, ಎಸ್.ಬಿ.ದೊಡ್ಮನಿ ಇವರು ಸಹಕರಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 