ಸೂರ್ಯಗ್ರಹಣ ವೀಕ್ಷಿಸಿದ ಸಾರ್ವಜನಿಕರು
ಹುನಗುಂದ: ಡಿ.26ರಂದು ಬೆಳಿಗ್ಗೆ 8ರಿಂದ ಬಾಹ್ಯಾಕಾಶದಲ್ಲಿ ನಡೆದ ವಿಸ್ಮಯಕಾರಿ ಸೂರ್ಯಗ್ರಹಣ ಪ್ರಯೋಗವನ್ನು ನಗರದ ಶಾಲೆ ಮತ್ತು ಪ್ರಮುಖ ಸ್ಥಳಸಲ್ಲಿ ಫಿಲ್ಮರ್ ಕನ್ನಡಕಗಳ ಮೂಲಕ ಸಾರ್ವಜನಿಕರಿಗೆ ವೀಕ್ಷಣೆ ಮಾಡಿಸಲಾಯಿತು ಎಂದು ಉಪನ್ಯಾಸಕ ಆಯ್.ಎಚ್. ನಾಯಕ ಹೇಳಿದರು.
ಕನರ್ಾಟಕ ರಾಜ್ಯ ವಿಜ್ಞಾನ ಪರಿಷತ್ ಬೆಂಗಳೂರ, ಹಾಗೂ ಜಿಲ್ಲಾ ಸಮಿತಿ ಬಾಗಲಕೋಟ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸೂಯರ್ೋತ್ಸವ 2019 ಜಿಲ್ಲಾ ಮಟ್ಟದ ಶಿಕ್ಷಕರ, ಸಾರ್ವಜನಿಕರ ಕುರಿತು ನಗರದ ವಿದ್ಯಾನಗರ ಸಕರ್ಾರಿ ಪ್ರೌಢ ಶಾಲೆಯಲ್ಲಿ ಕಂಕಣ ಸೂರ್ಯಗ್ರಹಣವನ್ನು ಶಾಲಾ ಮಕ್ಕಳಿಗೆ ವೀಕ್ಷಣೆ ಮಾಡಿಸುತ್ತ ಸೂರ್ಯ ಚಂದ್ರ ಮತ್ತು ಭೂಮಿ ಒಂದೆ ಸರಳ ರೇಖೆಯಲ್ಲಿ ಸಂಧಿಸುವ ಬಗ್ಗೆ ಸವಿಸ್ತಾರ ವಿವರಣೆಯನ್ನು ಅವರು ನೀಡುತ್ತ ಬರಿಗಣ್ಣಿನಿಂದ ಈ ಸೂರ್ಯ ಗ್ರಹಣ ವೀಕ್ಷಣೆ ಅಪಾಯಕಾರಿ ಎಂಬುದನ್ನು ಅವರು ತಿಳಿಸಿದರು. ಈ ಗ್ರಹಣ ಮತ್ತು 2064ರಲ್ಲಿ ಸಂಭವಿಸಬಹುದಾಗಿದೆ ಎಂದು ನಾಯಕ ವಿವರಿಸಿದರು. ನಗರದ ವಿಜಯ ಮಹಾಂತೇಶ ವೃತ್ತ, ಕಿತ್ತೂರ ಚನ್ನಮ್ಮನ ವೃತ್ತ ಮತ್ತು ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಗ್ರಹಣ ವೀಕ್ಷಣೆಯನ್ನು ಫಿಲ್ಮಿ ಕನ್ನಡಕಗಳ ಮೂಲಕ ವ್ಯವಸ್ಥೆ ಮಾಡಲಾಗಿತ್ತು. ಉಪನ್ಯಾಸಕ ಸಿದ್ದಲಿಂಗಪ್ಪ ಬೀಳಗಿ, ಶಿಕ್ಷಕ ಪ್ರಭು ಹೇರೂರ್, ಸಿ.ಬಿ. ಉಪನಾಳ, ಬಿ.ಎಸ್. ಕರನಂದಿ, ಶಿವು ಅಂಗಡಿ,ಪ್ರಶಾಂತ ಬಾದವಾಡಗಿ, ಅಶ್ವಿನಿ ಬೀಳಗಿ, ಪವನಪ್ರಸಾದ ಕುರ್ತಕೋಟಿ, ಚನ್ನಕೇಶವ ಅವರಾದಿ, ಪ್ರವೀಣಕುಮಾರ ಕುರ್ತಕೋಟಿ ಇತರರು ಇದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 