ವೈದ್ಯ ವೃತ್ತಿ ಪವಿತ್ರವಾಗಿದ್ದು,: ಡಾ.ಅರಿಷಿಣಗೋಡಿ
ಲೋಕದರ್ಶನವರದಿ
ಮಹಾಲಿಂಗಪುರ 03: ವೈದ್ಯ ವೃತ್ತಿ ಪವಿತ್ರವಾಗಿದ್ದು, ಜನಸೇವೆಗೆ ಸಂದ ಸದವಕಾಶವಿದ್ದಂತೆ ಎಂದು ಡಾ. ಶ್ರೀಕಾಂತ ಅರಿಷಿಣಗೋಡಿ ಹೇಳಿದರು.
ಸ್ಥಳೀಯ ಬಸವನಗರದ ಶ್ರೀನಿವಾಸ ನಸರ್ಿಂಗ್ ಹೋಂ ನಲ್ಲಿ ಆಚರಿಸಲಾದ ವೈದ್ಯ ದಿನಾಚರಣೆಯಲ್ಲಿ ಮಾತನಾಡಿದರು.
ಅಧ್ಯಾತ್ಮ ಜೀವಿಗಳಾದ ನಾವು ಭಗವಾನ್ ಸಾಯಿಬಾಬಾ ಅವರ ಕೃಪೆಯಿಂದ ವೈದ್ಯ ದಂಪತಿ ಸೇರಿ ರೋಗಿಗಳ ಸೇವೆಯಲ್ಲಿ ಆಸ್ಪತ್ರೆಯನ್ನೇ ಮನೆ, ಸಿಬ್ಬಂದಿಯೇ ಸಂಬಂಧಿಗಳೆಂದು 24 ಗಂಟೆ ಸೇವೆಯಲ್ಲಿರುವ ನಮಗೆ ನಮ್ಮ ಬರ್ತಡೇಗಿಂತ ಜುಲೈ 1 ನ್ನೇ ನಿಜವಾದ ಹುಟ್ಟು ಹಬ್ಬ ಎಂದುಕೊಂಡಿದ್ದೇವೆ ಎಂದು ತಮ್ಮ ವೃತ್ತಿ ಪಾವಿತ್ರ್ಯತೆ ಬಗ್ಗೆ ಹೇಳಿಕೊಂಡರು.
ಆಸ್ಪತ್ರೆಯ ವೈದ್ಯ ದಂಪತಿ ಡಾ. ಅನುಪಮಾ ಮತ್ತು ಶ್ರೀಕಾಂತ ಅರಿಷಿಣಗೋಡಿ ಅವರಿಂದ ಕೇಕ್ ಕತ್ತರಿಸಿ ಪರಸ್ಪರ ತಿನ್ನಿಸುವ ಮೂಲಕ ಆಸ್ಪತ್ರೆ ಸಿಬ್ಬಂದಿ ಶುಭ ಹಾರೈಸಿ ಅರ್ಥಪೂರ್ಣ ವೈದ್ಯ ದಿನಾಚರಣೆ ಮಾಡಿ ಸಂಭ್ರಮಿಸಿದರು.
ಮ್ಯಾನೇಜರ್ ಚಂದ್ರು, ಹನಮಂತ, ರಫಿಕ್, ರಾಜು, ಬಸು, ವಿಶಾಲ, ರೂಪಾ, ರೇಖಾ, ರಿಯಾನಾ, ನಾಗರತ್ನಾ, ಹೀನಾ, ಲಕ್ಷ್ಮೀ, ಪ್ರತಿಭಾ, ಸುಪ್ರಿಯಾ, ರೇಣುಕಾ, ಶಮಜಾದ, ಸರಸ್ವತಿ, ರೇಣು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 