ಪಂದ್ಯ ಇನ್ನು ಮುಗಿದಿಲ್ಲ, ನಮಗೂ ಗೆಲ್ಲುವ ಚಾನ್ಸ್ ಇದೆ: ಆತ್ಮವಿಶ್ವಾಸದಲ್ಲಿ ರಹಾನೆ
ಲಾಡ್ಸರ್್ 11: ಮೊದಲ ದಿನ ನಿರಂತರ ಮಳೆ, ಎರಡನೇ ದಿನ ಮಳೆಯ ನಡುವೆ ಆಟವಾಡಿದ ಭಾರತ ತಂಡ ಕೇವಲ 107 ರನ್ಗಳಿಗೆ ಆಲೌಟ್ ಆಗಿದೆ.
ಒಂದುಕಡೆ ಮಳೆ, ಇನ್ನೊಂದು ಕಡೆ ಇಂಗ್ಲೆಂಡ್ ಬೌಲರ್ಗಳ ಬಿರುಸಿನ ದಾಳಿಗೆ ಕಂಗೆಟ್ಟ ಟೀಮ್ ಇಂಡಿಯಾದ ಯಾವೊಬ್ಬ ಆಟಗಾರನೂ ಕ್ರೀಸ್ನಲ್ಲಿ ಸ್ಥಿರವಾಗಿ ನಿಲ್ಲಲು ಸಾಧ್ಯವಾಗಲಿಲ್ಲ. ಪರಿಣಾಮ ಕೇವಲ 107 ರನ್ಗಳಿಗೆ ಸರ್ವಪತನ ಕಂಡಿತು.
ಆದರೆ ಪಂದ್ಯದ ಬಳಿಕ ಮಾತನಾಡಿದ ತಂಡದ ಉಪ ನಾಯಕ ಅಜಿಂಕ್ಯ ರಹಾನೆ, ಇಂತಹ ವಾತಾವರಣದಲ್ಲಿ ಯಾವುದೇ ತಂಡವಾದರೂ ಇದೇ ಪರಿಸ್ಥಿತಿ ಎದುರಿಸಬೇಕಾಗಿತ್ತು. ನಮ್ಮ ಆಟವೂ ಉತ್ತಮವಾಗಿರಲಿಲ್ಲ. ಆದರೆ ಪಂದ್ಯ ಇನ್ನು ಮುಗಿದಿಲ್ಲ. ಇಂಗ್ಲೆಂಡ್ ಬೌಲಿಂಗ್ ಉತ್ತಮವಾಗಿತ್ತು ಎಂದ ರಹಾನೆ, ಎರಡನೇ ಇನ್ನಿಂಗ್ಸ್ನಲ್ಲಿ ನಾವು ಉತ್ತಮವಾಗಿ ಬ್ಯಾಟಿಂಗ್ ನಡೆಸಿ ಸ್ಪಧರ್ಾತ್ಮಕ ಗುರಿ ನೀಡಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.
ಪಂದ್ಯ ಅರ್ಧ ಮಾತ್ರ ಮುಗಿದಿದ್ದು, ಇನ್ನು 3 ದಿನ ಆಟ ಬಾಕಿ ಇದೆ. ಈ ಪಂದ್ಯದಲ್ಲಿ ನಾವು ಸೋತಿದ್ದೇವೆ ಎಂದುಕೊಳ್ಳದೆ ಆಡಬೇಕಿದೆ. ಮೊದಲು ನಮಗೆ ನಂಬಿಕೆ ಮುಖ್ಯ. ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದಕ್ಕೆ ಇನ್ನು ಸಮಯವಿದೆ. ಪಂದ್ಯ ಮುಗಿದ ನಂತರ ಸರಣಿ 1-1 ರಲ್ಲಿ ಸಮವಾಗಬಹುದು ಎಂದು ಅಭಿಪ್ರಾಯಪಟ್ಟರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 