ಬೆಳಗಾವಿ: ಮುಖ್ಯೋಪಾಧ್ಯಾಯರಿಗೆ ಎಬಿಸಿ ವಲಯದ ವರ್ಗಾವಣೆ ನಡೆಸಲು ಡಿಡಿಪಿಐರಿಗೆ ಮನವಿ
ಲೋಕದರ್ಶನ ವರದಿ
ಬೆಳಗಾವಿ 24: ಬೆಳಗಾವಿ ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಸದ್ಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿ ಬಡ್ತಿ ಹೊಂದಿ ಕಾರ್ಯ ನಿರ್ವಹಿಸುತ್ತಿರುವವರಿಗೆ, ಎ.ಬಿ.ಸಿ. ವಲಯದಲ್ಲಿ ವಗರ್ಾವಣೆ ಕೌನ್ಸಿಲಿಂಗ್ ನಡೆಸಬೇಕೆಂದು ಕನರ್ಾಟಕ ರಾಜ್ಯ ಸರಕಾರಿ ಹಿರಿಯ ಹಾಗೂ ಪದವಿಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಬೆಳಗಾವಿ ಜಿಲ್ಲಾಘಟಕವು ಡಿ.ಡಿ.ಪಿ.ಐ ಎ.ಬಿ. ಪುಂಡಲೀಕರಿಗೆ ಇಂದು ಮನವಿ ನೀಡಿ ಶಿಕ್ಷಕರ ವಗರ್ಾವಣೆ ಕೌನ್ಸಿಲಿಂಗ್ ನಡೆಸುವುದಕ್ಕಿಂತ ಮೊದಲು ಮುಖ್ಯೋಪಾಧ್ಯಾಯರ ಎ.ಬಿ.ಸಿ. ವಗರ್ಾವಣೆ ಮಾಡಲು ಆಗ್ರಹಿಸಿದೆ.
ಕಳೆದ 4 ವರ್ಷಗಳಿಂದ ಮುಖ್ಯೋಪಾಧ್ಯಾಯರ ವಗರ್ಾವಣೆ ಆಗಿರುವುದಿಲ್ಲ, ಇಲಾಖಾ ನಿಯಮಾವಳಿಯಂತೆ ವರ್ಷಕ್ಕೆ ಎರಡು ಸಲ ಎ.ಬಿ.ಸಿ ವಲಯದ ಮುಖ್ಯೋಪಾಧ್ಯಾಯರ ವಗರ್ಾವಣೆ ನಡೆಸಬೇಕೆಂಬ ಇಲಾಖಾ ನಿಯಮಾವಳಿಯಂತೆ ಜಿಲ್ಲೆಯಲ್ಲಿ ಸದ್ಯ ವಗರ್ಾವಣೆ ಪ್ರಕ್ರಿಯೆ ನಡೆಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಜೊತೆಗೆ ಪ್ರಾಥಮಿಕ ಶಾಲೆಗಳಲ್ಲಿ ಸಹ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಸೇವಾ ಜ್ಯೇಷ್ಠತೆ ಆಧಾರದ ಮೇರೆಗೆ ಮುಖ್ಯೋಪಾಧ್ಯಾಯರ ಹುದ್ದೆಗೆ ಬಡ್ತಿ ನೀಡುವಂತೆ ಸಂಘವು ಆಗ್ರಹಿಸಿದೆ.
ಮನವಿ ನೀಡುವ ಸಮಯದಲ್ಲಿ ಶಿಕ್ಷಣಾಧಿಕಾರಿಗಳಾದ ಮಹಾದೇವ ಬೆಳ್ಳನ್ನವರ ಉಪಸ್ಥಿತರಿದ್ದರು, ಜಿಲ್ಲಾ ಸಂಘದ ಗೌರವಾಧ್ಯಕ್ಷ ಶಶಿಧರ ರೊಟ್ಟಿ, ಅಧ್ಯಕ್ಷ ಬಿ.ಎಸ್. ಹುಣಸೀಕಟ್ಟಿ, ಪ್ರಧಾನ ಕಾರ್ಯದಶರ್ಿ ಬಸವರಾಜ ಸುಣಗಾರ, ಪದಾಧಿಕಾರಿಗಳಾದ ಎಂ.ಎಸ್. ಅಥಣಿ, ಎಸ್.ಬಿ. ಜಕಾತಿ, ಎಂ.ಎಸ್. ಬೋಳಣ್ಣವರ, ಎಸ್.ಎಂ. ಶಹಾಪೂರಮಠ, ಎಸ್.ಜಿ. ಚವಲಗಿ, ಪಿ.ಕೆ.ಘೋಲಪೆ, ವಾಯ್.ಆರ್.ಗುಡಿ, ಎಂ.ಎಸ್. ಪಾಟೀಲ, ಎಸ್.ಜಿ. ರಜಪೂತ, ರಾಜೇಂದ್ರ ಚಲವಾದಿ ಸುರೇಶಕೋಲಕಾರ ಸೇರಿದಂತೆ ಹಲವು ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 