ದಾಸ ಪರಂಪರೆಯ ಶ್ರೇಷ್ಠ ಸಂತ ಭಕ್ತ ಕನಕದಾಸರು
ಲೋಕದರ್ಶನ ವರದಿ
ಕಾಗವಾಡ 15: ದಾಸ ಪರಂಪರೆಯ ಶ್ರೇಷ್ಠ ಸಂತ ಭಕ್ತ ಕನಕದಾಸರು ಸರಳ ಜೀವನದಿಂದ ಭಗವಂತನನ್ನೇತನ್ನೆಡೆಗೆ ಕರುಣಿಸಿಕೊಂಡು ಸಮಾಜದಲ್ಲಿನ ಮೇಲು-ಕೀಳು ಎಂಬ ಭಾವನೆಗಳನ್ನು ನಯವಾಗಿ ತಿರಸ್ಕರಿಸಿ ಸಮಾನತೆಯ ಬೀಜವನ್ನು ಈ ನೆಲದಲ್ಲಿ ಭಿತ್ತಿದ ಮಹಾಮಾನವತಾವಾದಿ ಶ್ರೀ ಕನಕದಾಸರು ಎಂದು ಪ್ರಾಚಾರ್ಯರಾದ ಡಾ.ಎಸ್.ಓ. ಹಲಸಗಿ ಹೇಳಿದರು.
ಶುಕ್ರವಾರರಂದು ಶಿವಾನಂದ ಮಹಾವಿದ್ಯಾಲಯದಲ್ಲಿ ನಡೆದ ಕನಕದಾಸರ ಜಯಂತಿ ಆಚರಣೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು. ಕನಕದಾಸ ವಿಜಯನಗರ ಅರಸರಕಾಲದಲ್ಲಿ ದಂಡನಾಯಕರಾಗಿದ್ದರೂ ಅಧಿಕಾರವನ್ನು ಅವರೆಂದೂತಲೆಗೆ ಏರಿಸಿಕೊಳ್ಳಲಿಲ್ಲ. ವೈರಾಗ್ಯ ಮೂತರ್ಿಯಾಗಿ ಈ ನಾಡಿಗೆ 12ನೇ ಶತಮಾನದ ಶರಣರತರುವಾಯ ಸಮಾನತೆಯನ್ನು ಹಾಗೂ ಸಮಾಜೋ-ಧಾಮರ್ಿಕ ಆಂದೋಲನಗಳನ್ನು ಮುಂದುವರಿಸಿದ ಕೀತರ್ಿ ಕನಕದಾಸರಿಗೆ ಸಲ್ಲುತ್ತದೆಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಹಾವಿದ್ಯಾಲಯದ ಇಂಗ್ಲೀಷ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಜೆ.ಕೆ.ಪಾಟೀಲ ಕನಕದಾಸರ ಜೀವನ - ಸಾಧನೆಗಳ ಕುರಿತಾಗಿ ಮಾತನಾಡಿ ಕನಕದಾಸರು ತಮ್ಮ ಭಕ್ತಿ-ಭಾವದಿಂದ ಸಾಕ್ಷತ್ ಶ್ರೀ ಕೃಷ್ಣನನ್ನೇತಮ್ಮೆಡೆಗೆ ತಿರುಗಿಸಿಕೊಂಡು 'ಕನಕನ ಕಿಂಡಿ'ಯೆಂದೇ ಇಂದಿಗೂ ನೆನಪುಳಿಯುವಂತೆ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪದವಿ ಮಹಾವಿದ್ಯಾಲಯದ ಉಪ-ಪ್ರಾಚಾರ್ಯ, ಪ್ರೊ.ಎಸ್.ಎಸ್.ಬಾಗನೆ, ವಿದ್ಯಾಥರ್ಿಕಲ್ಯಾಣಾಧಿಕಾರಿ ಪ್ರೊ. ಬಿ.ಎ.ಪಾಟೀಲ ಸಿಬ್ಬಂದಿ ಕಾರ್ಯದಶರ್ಿ ಡಾ.ಎಸ್.ಎ.ಕಕರ್ಿಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಪಿ.ಬಿ.ನಂದಾಳೆ ಸೇರಿದಂತೆಇತರರು ಉಪಸ್ಥಿತರಿದ್ದರು. ಪ್ರೊ.ಎ.ಎಂ.ಜಕ್ಕಣ್ಣವರ ನಿರೂಪಿಸಿ, ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 