ವಿಜೃಂಭಣೆಯಿಂದ ಜರುಗಿದ ಭೈರೇಶ್ವರ, ಹನುಮಾನ ಮಲ್ಲಿಕಾರ್ಜುನ ದೇವರ ಜಾತ್ರೆ
The fair of Bhaireshwar, Hanuman and Mallikarjuna
ರಾಯಬಾಗ 17: ತಾಲೂಕಿನ ಬೊಮ್ಮನಾಳ ಗ್ರಾಮದ ಭೈರೇಶ್ವರ, ಹನುಮಾನ ಮತ್ತು ಮಲ್ಲಿಕಾರ್ಜುನ ದೇವರ ಜಾತ್ರೆಯು ವಿಜೃಂಭಣೆಯಿಂದ ಜರುಗಿತು.
ಗುರುವಾರ ವಿವಿಧ ಶರ್ಯತ್ತುಗಳು ಜರುಗಿದವು. ವಿಜೇತರಿಗೆ ಕಮಿಟಿಯಿಂದ ಬಹುಮಾನ ವಿತರಿಸಲಾಯಿತು. ಕುದುರೆ ಗಾಡಿ ಶರ್ಯತ್ತಿನಲ್ಲಿ ಕುಡಚಿಯ ಡೌನ ಪ್ರಥಮ, ಹುಬರಟ್ಟಿಯ ಅಶೋಕ ದ್ವಿತೀಯ, ಅಂಕಲಿಯ ಸಾಗರ ಮೇಸ್ತ್ರಿ ತೃತೀಯ ಹಾಗೂ ಶೇಡಷಾಳದ ಲಕ್ಷ್ಮಣ ನಾಯಿಕ ನಾಲ್ಕನೆಯ ಬಹುಮಾನ ಪಡೆದರು. ಸಾಯಕಲ್ ಶರ್ಯತ್ತಿನಲ್ಲಿ ಇಚಲಕರಂಜಿಯ ಬಾಳು ಹೀರೆಮಠ ಪ್ರಥಮ, ಬಡಿಗವಾಡದ ಮಾರುತಿ ದ್ವಿತೀಯ, ಕರಣ ಲಮಾಣಿ ತೃತೀಯ ಬಹುಮಾನ ಪಡೆದರು. ಚಿ
ಕುದುರೆ ಶರ್ಯತ್ತಿನಲ್ಲಿ ಚಿಂಚಲಿಯ ಸುರೇಶ ಪ್ರಥಮ, ಭಿರಡಿಯ ಮಹಾದೇವ ಈಟೇಕರಿ ದ್ವಿತೀಯ, ಚಿಂಚಲಿಯ ಕುಮಾರ ಪೂಜಾರಿ ತೃತೀಯ ಬಹುಮಾನ ಪಡೆದರು.ಓಡುವ ಶರ್ಯತ್ತಿನಲ್ಲಿ ಸುಲ್ತಾನಪೂರದ ಅಸ್ಲಾಂ ಮುಲ್ತಾನಿ ಪ್ರಥಮ, ಜಮಖಂಡಿಯ ನಾಗರಾಜ ದ್ವಿತೀಯ, ಸವಸುದ್ದಿಯ ಕಲ್ಲಪ್ಪ ನಾಯಿಕ ತೃತೀಯ ಬಹುಮಾನ ಪಡೆದರು.
ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ರಮೇಶ ಪಾಟೀಲ, ಸತ್ಯಗೌಡ ಪಾಟೀಲ, ಸತೀಶ ಬಾಗಿ, ನಿಂಗೌಡ ಪಾಟೀಲ, ಅಲಿಸಾಬ ನದಾಫ, ಅರುಣ ವಡ್ಡರ, ಶಿವಗೌಡ ಪಾಟೀಲ, ರಾಮಗೌಡ ಪಾಟೀಲ, ಎನ್.ಎಸ್.ಪಾಟೀಲ, ಕಲ್ಲಪ್ಪ ಪಾಟೀಲ ಸೇರಿ ಅನೇಕರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 