ದೇಶದ ಅಭಿವೃದ್ಧಿ ಪ್ರತಿ ನಾಗರಿಕನ ಪಾಲಿದೆ: ವಾಯ್.ಎಸ್. ಸಿದ್ದೇಶ್ವರ
ಲೋಕದರ್ಶನ ವರದಿ
ಕೊಪ್ಪಳ 11: ಸ್ವಯಂ ಉದ್ಯೋಗ ಆಥರ್ಿಕ ಸ್ವಾಲಂಭನೆ, ನಗದು ರಹಿತ ವ್ಯಪಾರ, ಗ್ರಾಹಕರಿಗೆ ಸರಕಾರದಿಂದ ನೀಡುವ ಆಥರ್ಿಕ ಸಾಲ ಸೌಲಭ್ಯಗಳು ಗ್ರಾಹಕ ಸಾರ್ವಜನಿಕರಿಗೆ ಒದಗಿಸಿಕೊಡಲು ಪ್ರಾಮಿಣಿಕ ಪ್ರಯತ್ನ ಬ್ಯಾಂಕರ್ಸ ಮಾಡುತ್ತದೆ ದೇಶದ ಅಭಿವೃದಿಯಲ್ಲಿ ಪ್ರತಿ ಒಬ್ಬ ನಾಗರಿಕನ ಪಾಲುಗಾರಿಕೆ ಇರುತ್ತದೆ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಪ್ರಬಂಧಕರಾದ ವಾಯ್.ಎಸ್. ಸಿದ್ದೇಶ್ವರ ಹೇಳಿದರು.
ಅವರು ಮಂಗಳವಾರ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೊಪ್ಪಳ ಶಾಖೆವತಿಯಿಂದ ಆಥರ್ಿಕ ಸಾಕ್ಷರತಾ ಸಪ್ತಾಹ ಕಾಯರ್ಾಗಾರವು ಜಿಲ್ಲಾ ಕೈಗಾರಿಕಾ ಉದ್ಯಮಶೀಲತೆ ಕೇಂದ್ರದಲ್ಲಿ ಕಾರ್ಯಗಾರದ ಉದ್ಘಾಟನೆಯನ್ನು ನೆರೆವೇರಿಸಿ ಮಾತನಾಡಿದ ಅವರು, ಗ್ರಾಹಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಾಗೃತಿ ಮೂಡಿಸಿ ಸಿಗಬಹುದಾದ ಸೌಕರ್ಯ ಒದಗಿಸಿಕೊಡಲು ನಿಟ್ಟಿನಲ್ಲಿ ಶ್ರಮಿಸಬೇಕೆಂದರು. ಇದರ ಉಪಯುಕ್ತತೆ ಕುರಿತು ಎಲ್ಲರೂ ಅರಿತು ಕೊಳ್ಳಬೇಕೆಂದು ಗ್ರಾಹಕರ ಜೊತೆಗೆ ಅವಿನಾಭಾವ ಸಂಬಂಧ ಹೊಂದಬೇಕೆಂದು ಕಾರ್ಯಗಾರದಲ್ಲಿ ವಿವರಿಸಿದರು.
ಕಾರ್ಯಗಾರದ ಪ್ರಾಸ್ತಾವಿಕ ನುಡಿಗಳನ್ನು ಮತ್ತು ಆರ್ಥಿಕ ಸಾಕ್ಷರತೆ ಕುರಿತು ಸವಿವರವಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೊಪ್ಪಳ ಶಾಖೆಯ ಹಿರಿಯ ಪ್ರಬಂಧಕರಾದ ಬೊಮ್ಮಣ್ಣ ಅಕ್ಕಸಾಲಿ ಫಲಾನುಭವಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಉದ್ಯಮಶೀಲ ಅಭಿವೃದ್ಧಿ ಕೇಂದ್ರ ಕೊಪ್ಪಳದ ಅಧಿಕಾರಿ ದತ್ತಾತ್ರೇಯ ರುಡ್ಸೆಟ್, ಕೊಪ್ಪಳದ ನಿರ್ದೇಶಕರಾದ ವಿ.ಎಸ್. ಕೊಲ್ಲಾಪುರ ಹಾಗೂ ಜಿಲ್ಲಾ ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಮಂಡಳಿಯ ಜಿಲ್ಲಾ ಅಧಿಕಾರಿ ವೀರೇಶ್, ಸರ್ಮೋದಯ ಸಂಸ್ಥೆ ಕೊಪ್ಪಳ ಜಿಲ್ಲೆಯ ಜಿಲ್ಲಾ ಅಧ್ಯಕ್ಷರು ನಾಗರಾಜ್ ದೇಸಾಯಿ ಪಾಲ್ಗೊಂಡಿದ್ದರು. ಕಾರ್ಯಕಮವನ್ನು ವೀರೇಶ್ ಕೂಲಿ ನಿರೂಪಿಸಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 