ಸಮಾಜಮುಖಿ ಕಾರ್ಯವೇ ರೋಟರಿ ಸಂಸ್ಥೆ ಗುರಿ
ಅಥಣಿ(ಶಿವಪುತ್ರ ಯಾದವಾಡ): ಸಮಾಜಮುಖಿ ಕಾರ್ಯವೇ ರೋಟರಿ ಸಂಸ್ಥೆ ಗುರಿ ಎಂದು ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ ಮಾತನಾಡುತ್ತಾ ಅಥಣಿ ತಾಲೂಕಿನಲ್ಲಿ ಎರಡು ದಶಕಗಳಿಂದ ರೋಟರಿ ಸಂಸ್ಥೆ ಸಮಾಜಮುಖಿ ಕಾರ್ಯ ಮಾಡುತ್ತ ಮುಂದೆ ಸಾಗಿದೆ. ಇಂದಿನ ವಿದ್ಯಾರ್ಥಿಗಳು ಸಮಾಜ ಕಾರ್ಯಗಳಲ್ಲಿ ತೋಡಗಬೇಕಾದರೆ , ತಮ್ಮ ಕಲಿಕೆಯೊಂದಿಗೆ ಸಮಾಜ ಸೇವೆಯನ್ನು ರುಡಿಸಿಕೊಳ್ಳಬೇಕು. ಎಂದು ಕಿವಿ ಮಾತು ಹೇಳಿದರು.
ಸ್ಥಳಿಯ ರಾಷ್ಟ್ರ ಪ್ರಶಸ್ತಿ ಭೂಷಿತ ವಿಮೋಚನಾ ಸಂಸ್ಥೆಯ ಸಂತರಾಮ ಪಿಯು ಮಹಾವಿದ್ಯಾಲಯದಲ್ಲಿ ಸಮಾಜ ಸೇವೆಯಲ್ಲಿ ತೋಡಗಿರುವ ರೋಟರಿ ಸಂಸ್ಥೆಯ ಅಂಗ ಸಂಸ್ಥೆಯಾದ ರೋಟ್ರ್ಯಾಕ್ಟ ಕ್ಲಬ್ ಇದರ ನೂತನ ಸದಸ್ಯರ ಪದಗ್ರಹನ ಸಮಾರಂಭ ನಡೆಯಿತು. ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಡಾ ಆನಂದ ಕುಲಕರ್ಣಿ ರೋಟ್ರ್ಯಾಕ್ಟ ಕ್ಲಬ್ ಜಿಲ್ಲಾಪ್ರತಿನಿಧಿ ರಾಹುಲ ಮೋಹಿತ, ಪ್ರಾಚಾರ್ಯ ಭಾರತಿ ಬಿಜಾಪುರೆ ಮಾತನಾಡಿದರು.
ರೋಟ್ರ್ಯಾಕ್ಟ ಕ್ಲಬ ಅಧ್ಯಕ್ಷರಾಗಿ ದೀಪಾ ಬಳ್ಳಿಗೇರಿ, ಕಾರ್ಯದರ್ಶಿಯಾಗಿ ದಾನೇಶ್ವರಿ ಚಿಮ್ಮಡ, ಖಜಾಂಚಿಯಾಗಿ ಮಂಜುಳಾ, ಉಪಾಧ್ಯಕ್ಷರಾಗಿ ತೋಹಿದ ಬಾಲದಾರ ಸೇರಿ 15 ವಿದ್ಯಾರ್ಥಿಗಳು ನಿರ್ದೇಶಕರಾಗಿ ಪದಗ್ರಹಣ ಸ್ವೀಕರಿಸಿದರು. ರೋಟರಿ ಕ್ಲಬ್ ಹಿರಿಯ ಸದಸ್ಯರು ಬಾಲಚಂದ್ರ ಬುಕಿಟಗಾರ, ಸಚಿನ ದೇಸಾಯಿ, ಮೇಗರಾಜ ಪರಮಾರ, ಡಾ ಅಮೃತ ಕುಲಕಣರ್ಣಿ, ಶಿವಾನಂದ ಕಾರೆ ಹಾಗೂ ಕ್ಲಬಿನ ಇತರ ಸದಸ್ಯರು ಮತ್ತು ವಿಮೋಚನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 