ಕಾಂಗ್ರೆಸ್ ಹೆಜ್ಜೆ ಅನುಸರಿಸಿದ್ದರೆ ರಾಮಜನ್ಮಭೂಮಿ ವಿವಾದ ಬಗೆಹರಿಯುತ್ತಿರಲಿಲ್ಲ: ಪ್ರಧಾನಿ ಮೋದಿ
ನವದೆಹಲಿ, ಫೆ 06, ಎನ್ ಡಿಎ ಸರ್ಕಾರವು ಶೀಘ್ರಗತಿಯಲ್ಲಿ ಮುಂದೆ ಸಾಗುವ ಉದ್ದೇಶವನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದು, ಕಾಂಗ್ರೆಸ್ ನ ಹೆಜ್ಜೆಗಳನ್ನು ಅನುಸರಿಸಿದ್ದರೆ, 134 ವರ್ಷಗಳ ಹಳೆಯ ಅಯೋಧ್ಯೆ ರಾಮಜನ್ಮ ಭೂಮಿ ವಿವಾದ ಬಗೆಹರಿಯುತ್ತಿರಲಿಲ್ಲ ಎಂದಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣ್ಕೆ ವಂದನೆ ಸಲ್ಲಿಸುತ್ತಾ, "ನಾವು ನಿಮ್ಮಂತೆಯೇ ಕೆಲಸ ಮಾಡಿದ್ದರೆ ಜನ್ಮವಭೂಮಿ ವಿವಾದ ಹಾಗೇ ಉಳಿಯುತ್ತಿತ್ತು, (ಅಗರ್ ಹಮ್ ಆಪ್ ಹಿ ಕಿ ತರಾ ಚಲ್ಟೆ, ತೋಹ್ ರಾಮ್ ಜನ್ಮಭೂಮಿ ಅಭಿ ಭಿ ವಿವಾದಿತ್ ಸ್ತಲ್ ರಾಹ್ತಾ ರಾಮ್ ಜನ್ಮಭೂಮಿ) ಇದಲ್ಲದೆ, ಭಾರತವು ಶತ್ರುಗಳ ಆಸ್ತಿಯ ವಿರುದ್ಧ ಕಾನೂನಿಗಾಗಿ ಕಾಯಬೇಕಾಗಿಲ್ಲ ಎಂದರು. ಯಾವ ಕೆಲಸಕ್ಕೆ ಎಷ್ಟು ಆದ್ಯತೆ ನೀಡಬೇಕು, ಎಷ್ಟು ವೇಗದಿಂದ ಮುಂದುವರಿಯಬೇಕು ಎಂದು ಅರಿತ ಕಾರಣದಿಂದಲೇ ದೇಶದ ಜನತೆ ಎನ್ ಡಿಎಗೆ ಮತ್ತೊಂದು ಅವಕಾಶ ನೀಡಿದೆ ಎಂದು ತಿಳಿಸಿದರು. ಹಿಂದಿನ 70 ವರ್ಷಗಳ ಕಾಲದಂತೆಯೇ ದೇಶವು ನಡೆದುಕೊಂಡು ಹೋಗಿದ್ದರೆ, 370 ನೇ ವಿಧಿಯನ್ನು ಎಂದಿಗೂ ಹಿಂಪಡೆಯಲಾಗುತ್ತಿರಲಿಲ್ಲ. ತ್ರಿವಳ ತಲಾಖ್ ಅನ್ನು ತೆಗೆದುಹಾಕಲು ಸಾಧ್ಯವಾಗುತ್ತಿರಲಿಲ್ಲ, ಶ್ರೀರಾಮ ದೇವಾಲಯ, ಕರ್ತಾರ್ಪುರ ಕಾರಿಡಾರ್ ಕನಸು ನನಸಾಗುತ್ತಿರಲಿಲ್ಲ ”ಎಂದು ಅವರು ಪ್ರತಿಪಕ್ಷ ಪಕ್ಷವನ್ನು ದೂಷಿಸಿದರು. ತಮ್ಮ ಸರ್ಕಾರದ ಅಡಿಯಲ್ಲಿ ಈಶಾನ್ಯವು ಬೆಳವಣಿಗೆಯ ಎಂಜಿನ್ ಆಗಿ ಮಾರ್ಪಟ್ಟಿದೆ ಎಂದು ಅವರು ಇತ್ತೀಚೆಗೆ ತೀರ್ಮಾನಿಸಿದ ಬೋಡೋ ಒಪ್ಪಂದವನ್ನು ಉಲ್ಲೇಖಿಸಿದರು, ಈಶಾನ್ಯ ಭಾರತವು ರಾಜಕೀಯ ಸ್ಥಿರತೆ ಮತ್ತು ಅಭಿವೃದ್ಧಿಗಾಗಿ ದಶಕಗಳಿಂದ ಕಾಯುತ್ತಿತ್ತು ಎಂದರು. "ನಮ್ಮ ಸರ್ಕಾರವು ರಾಜಕೀಯ ಲಾಭದಿಂದ ಈಶಾನ್ಯ ಭಾರತವನ್ನು ಅಳೆಯುವುದಿಲ್ಲ. ನಾವು ಈಶಾನ್ಯ ಭಾರತವನ್ನು ದೆಹಲಿಗೆ ಹತ್ತಿರ ತಂದಿದ್ದೇವೆ. ಅನೇಕ ಒಪ್ಪಂದಗಳು ಮತ್ತು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಬೋಡೋ ಸಮಸ್ಯೆ ನಿವಾರಣೆಗೆ ಯತ್ನಿಸಲಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದ ತಿಳಿಸಿದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 