ಕಾಂಗ್ರೆಸ್ ಹೆಜ್ಜೆ ಅನುಸರಿಸಿದ್ದರೆ ರಾಮಜನ್ಮಭೂಮಿ ವಿವಾದ ಬಗೆಹರಿಯುತ್ತಿರಲಿಲ್ಲ: ಪ್ರಧಾನಿ ಮೋದಿ
ನವದೆಹಲಿ, ಫೆ 06, ಎನ್ ಡಿಎ ಸರ್ಕಾರವು ಶೀಘ್ರಗತಿಯಲ್ಲಿ ಮುಂದೆ ಸಾಗುವ ಉದ್ದೇಶವನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದು, ಕಾಂಗ್ರೆಸ್ ನ ಹೆಜ್ಜೆಗಳನ್ನು ಅನುಸರಿಸಿದ್ದರೆ, 134 ವರ್ಷಗಳ ಹಳೆಯ ಅಯೋಧ್ಯೆ ರಾಮಜನ್ಮ ಭೂಮಿ ವಿವಾದ ಬಗೆಹರಿಯುತ್ತಿರಲಿಲ್ಲ ಎಂದಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣ್ಕೆ ವಂದನೆ ಸಲ್ಲಿಸುತ್ತಾ, "ನಾವು ನಿಮ್ಮಂತೆಯೇ ಕೆಲಸ ಮಾಡಿದ್ದರೆ ಜನ್ಮವಭೂಮಿ ವಿವಾದ ಹಾಗೇ ಉಳಿಯುತ್ತಿತ್ತು, (ಅಗರ್ ಹಮ್ ಆಪ್ ಹಿ ಕಿ ತರಾ ಚಲ್ಟೆ, ತೋಹ್ ರಾಮ್ ಜನ್ಮಭೂಮಿ ಅಭಿ ಭಿ ವಿವಾದಿತ್ ಸ್ತಲ್ ರಾಹ್ತಾ ರಾಮ್ ಜನ್ಮಭೂಮಿ) ಇದಲ್ಲದೆ, ಭಾರತವು ಶತ್ರುಗಳ ಆಸ್ತಿಯ ವಿರುದ್ಧ ಕಾನೂನಿಗಾಗಿ ಕಾಯಬೇಕಾಗಿಲ್ಲ ಎಂದರು. ಯಾವ ಕೆಲಸಕ್ಕೆ ಎಷ್ಟು ಆದ್ಯತೆ ನೀಡಬೇಕು, ಎಷ್ಟು ವೇಗದಿಂದ ಮುಂದುವರಿಯಬೇಕು ಎಂದು ಅರಿತ ಕಾರಣದಿಂದಲೇ ದೇಶದ ಜನತೆ ಎನ್ ಡಿಎಗೆ ಮತ್ತೊಂದು ಅವಕಾಶ ನೀಡಿದೆ ಎಂದು ತಿಳಿಸಿದರು. ಹಿಂದಿನ 70 ವರ್ಷಗಳ ಕಾಲದಂತೆಯೇ ದೇಶವು ನಡೆದುಕೊಂಡು ಹೋಗಿದ್ದರೆ, 370 ನೇ ವಿಧಿಯನ್ನು ಎಂದಿಗೂ ಹಿಂಪಡೆಯಲಾಗುತ್ತಿರಲಿಲ್ಲ. ತ್ರಿವಳ ತಲಾಖ್ ಅನ್ನು ತೆಗೆದುಹಾಕಲು ಸಾಧ್ಯವಾಗುತ್ತಿರಲಿಲ್ಲ, ಶ್ರೀರಾಮ ದೇವಾಲಯ, ಕರ್ತಾರ್ಪುರ ಕಾರಿಡಾರ್ ಕನಸು ನನಸಾಗುತ್ತಿರಲಿಲ್ಲ ”ಎಂದು ಅವರು ಪ್ರತಿಪಕ್ಷ ಪಕ್ಷವನ್ನು ದೂಷಿಸಿದರು. ತಮ್ಮ ಸರ್ಕಾರದ ಅಡಿಯಲ್ಲಿ ಈಶಾನ್ಯವು ಬೆಳವಣಿಗೆಯ ಎಂಜಿನ್ ಆಗಿ ಮಾರ್ಪಟ್ಟಿದೆ ಎಂದು ಅವರು ಇತ್ತೀಚೆಗೆ ತೀರ್ಮಾನಿಸಿದ ಬೋಡೋ ಒಪ್ಪಂದವನ್ನು ಉಲ್ಲೇಖಿಸಿದರು, ಈಶಾನ್ಯ ಭಾರತವು ರಾಜಕೀಯ ಸ್ಥಿರತೆ ಮತ್ತು ಅಭಿವೃದ್ಧಿಗಾಗಿ ದಶಕಗಳಿಂದ ಕಾಯುತ್ತಿತ್ತು ಎಂದರು. "ನಮ್ಮ ಸರ್ಕಾರವು ರಾಜಕೀಯ ಲಾಭದಿಂದ ಈಶಾನ್ಯ ಭಾರತವನ್ನು ಅಳೆಯುವುದಿಲ್ಲ. ನಾವು ಈಶಾನ್ಯ ಭಾರತವನ್ನು ದೆಹಲಿಗೆ ಹತ್ತಿರ ತಂದಿದ್ದೇವೆ. ಅನೇಕ ಒಪ್ಪಂದಗಳು ಮತ್ತು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಬೋಡೋ ಸಮಸ್ಯೆ ನಿವಾರಣೆಗೆ ಯತ್ನಿಸಲಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದ ತಿಳಿಸಿದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 