ಲೇಟಾದರೂ ಲೇಟೆಸ್ಟಾಗಿ ಕಾರ್ಯ ಮಾಡಿದ ಅರಣ್ಯ ಇಲಾಖೆ
ಲೋಕದರ್ಶನವರದಿ
ಮಹಾಲಿಂಗಪೂರ28 : ನಗರದಿಂದ ರಬಕವಿ ಸಮೀಪದ ಮೇನಭಾವಿ ಹತ್ತಿರವಿರುವ ರಸ್ತೆಯ ಬದಿಯಲ್ಲಿ ಅರಣ್ಯ ಇಲಾಖೆ ಮರಗಳು ಒಣಗಿ ಬಿಳ್ಳುವ ಹಂತದಲ್ಲಿದ್ದವು.ಸ್ಥಳೀಯರಿಗೆ, ವಾಹನ ಸವಾರರಿಗೆ ಇದರಿಂದ ದೊಡ್ಡ ಅಪಾಯ ಕಾದಿತ್ತು.ಇದನ್ನರಿತು ಲೋಕದರ್ಶನ ದಿನಪತ್ರಿಕೆ ಕಳೆದ 2019 ರ ಮೇ ತಿಂಗಳ 06 ನೆಯ ತಾರೀಖಿನಂದು ವಿವರವಾದ ವರದಿ ಪ್ರಕಟಿಸಿತ್ತು.ಇಲಾಖೆಗೆ ವಿಳಂಬ ಕಾರಣ ಕೇಳಿ ದೂರವಾಣಿ ಮೂಲಕ ಕೇಳಿದಾಗ ಎರಡು ದಿನಗಳಲ್ಲಿ ಶಿಥಿಲಗೊಂಡ ಮರಗಳನ್ನು ತೆರವುಗೊಳಿಸಲಾಗುವುದು ಎಂಬ ಉತ್ತರ ಸಿಕ್ಕಿತು. ಅದರಂತೆ ಇಲಾಖೆ ಜವಾನರು ಮರಗಳನ್ನು ಸೆ.26. 27 ರಂದು ತೆರವುಗೊಳಿಸಿದ್ದಾರೆ.
ಯಾವಾಗ ಎನಾಗುವುದೋ ಎಂಬ ಭಯದಲ್ಲಿದ ಸ್ಥಳೀಯರು, ಅಕ್ಕಪಕ್ಕದ ಊರುಗಳ ಜನ ನಿಟ್ಟುಸಿರು ಬಿಡುವಂತಾಗಿದೆ.ಲೇಟಾಗಿದ್ರೂ ಲೇಟೆಸ್ಟಾಗಿ ಕೆಲಸ ಮಾಡಿರುವ ಅರಣ್ಯ ಇಲಾಖೆ ಕಾರ್ಯವನ್ನು ಸದಾಶಿವ ಬುಜುರುಕ,ಮಂಜು ಬನಹಟ್ಟಿ,ವೆಂಕಪ್ಪ ಪಾಟೀಲ, ಶ್ರೀಶೈಲ ಕವಟಕೊಪ್ಪ ಮುಂತಾದವರು ಶ್ಲ್ಯಾಘಿಸಿದ್ದಾರೆ. ವರದಿಯನ್ನು ಪ್ರಕಟಿಸಿದ ಪತ್ರಿಕೆಗೂ ಧನ್ಯವಾದಗಳನ್ನು ಹೇಳಲು ಮರೆಯಲಿಲ್ಲ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 