ಜುಲೈ 1 ರಿಂದ ಮಹಾಲಿಂಗಪುರ ಪಟ್ಟಣದಲ್ಲಿ ಬೃಹತ್ ಮೊತ್ತಗಳ ತೆರುಬಂಡಿ ವೈಭವ
Teru Bandi Utsava
ಮಹಾಲಿಂಗಪುರ 30: ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಬಸವೇಶ್ವರ ಜಾತ್ರಾ ಕಮಿಟಿ ವತಿಯಿಂದ ಬೃಹತ್ ಮೊತ್ತಗಳ ತೆರುಬಂಡಿ ಉತ್ಸವ ಜುಲೈ 01 ಹಾಗೂ 02 ರಂದು ಪಟ್ಟಣದಲ್ಲಿ ಜರುಗಲಿದೆ ಎಂದು ಕಮಿಟಿ ಅಧ್ಯಕ್ಷರಾದ ಯಲ್ಲನ್ನಗೌಡ ಪಾಟೀಲ್ ತಿಳಿಸಿದ್ದಾರೆ.
ಪ್ರಥಮ ಬಹುಮಾನ ರಾಯಲ್ ಎನ್ ಫೀಲ್ಡ್, ದ್ವಿತೀಯ ಹೊಂಡಾ ಶೈನ್, ತೃತೀಯ ಬಹುಮಾನ ಹೀರೋ ಸ್ಪ್ಲೆಂಡರ್ ಪ್ಲಸ್ ಮತ್ತು ಚತುರ್ಥ ಬಹುಮಾನ ಹೀರೋ ಎಚ್ ಎಫ್ ಹೀಗೆ ದ್ವಿ ಚಕ್ರ ವಾಹನಗಳ ಪ್ರಶಸ್ತಿ ಫಲಕಗಳನ್ನು ಅಗ್ರ ಶ್ರೇಣಿ ಪಡೆದ ಎತ್ತುಗಳ ಮಾಲೀಕರು ಪಡೆಯುವರು.
ಮತ್ತು ನಂತರ 5 ನೇ ಶ್ರೇಣಿಯಿಂದ ಅಂದರೆ 40 ಸಾವಿರ ನಗದು ಹಣದಿಂದ ಆರಂಭವಾದ ಬಹುಮಾನಗಳ ಶ್ರೇಣಿ ಕೊನೆಯ 25 ನೇ ಬಹುಮಾನ ರೂಪದಲ್ಲಿ 5 ಸಾವಿರ ಹಣ ಹಾಗೂ ಪಾರಿತೋಷಕಗಳನ್ನು ಪಡೆಯಲಿವೆ.
ಮಹಾಲಿಂಗಪುರದ ಸಾಧುಗುಡಿ ಭಗೀರಥ ಸರ್ಕಲ್ ಹತ್ತಿರದ ಗಟ್ಟಿ ನೆಲದಲ್ಲಿ ಸ್ಪರ್ಧೆಗಳು ನಡೆಯಲಿವೆ. ಅಂತಿಮವಾಗಿ ಟೂರ್ನಿಯಲ್ಲಿ ಭಾಗವಹಿಸುವ ಎತ್ತುಗಳ ಲಾಟ್ ಎಪಿಎಂಸಿ ಟೆಂಡರ್ ಹಾಲ್ ನಲ್ಲಿ ಎತ್ತಲಾಗುವುದು.ಜರ್ಸಿ ಎತ್ತುಗಳಿಗೆ ಪ್ರವೇಶವಿಲ್ಲ. ಸ್ಪರ್ಧೆಯ ಕಾಲಾವಕಾಶ 2 ನಿಮಿಷಗಳು ಮಾತ್ರ.ಎತ್ತುಗಳಿಗೆ ಚಾರ್ಜರ್ ಹಚ್ಚುವಂತಿಲ್ಲ.ಏನೇ ತಂಟೆ ತಕರಾರುಗಳಿಗೆ ಕಮಿಟಿ ನಿರ್ಧಾರವೇ ಅಂತಿಮವಾಗಿರುತ್ತದೆ. ಎಲ್ಲರ ಸಹಕಾರ ಪಂದ್ಯಾವಳಿಯ ಶೋಭೆಯನ್ನು ಹೆಚ್ಚಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ, ಕೃಷ್ಣಗೌಡ ಪಾಟೀಲ್ - 9901343522, ನಾರಾಯಣಗೌಡ - 9731097077, ಶಿವಪ್ಪ ಗಿರಡ್ಡಿ - 9036739529, ಮಹಾಲಿಂಗಪ್ಪ ಪಾಟೀಲ್ - 9738775747 ಮತ್ತು ವಿಠ್ಠಲ. ಗು. ಪಾಟೀಲ್ - 9886610061 ಈ ಮೋಬೈಲ್ ಸಂಖ್ಯೆಗಳಿಗೆ ಸಂಪರ್ಕ ಹೊಂದಲು ಕೋರಲಾಗಿದೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 