ಸಂತೆ ಕರ ವಸೂಲಿ ಟೆಂಡರ ಪ್ರಕ್ರಿಯೆ
Tender process for collection of market tax
ಜಮಖಂಡಿ 25: ನಗರ ಪ್ರದೇಶದ ವ್ಯಾಪ್ತಿಯಲ್ಲಿ ರಸ್ತೆಯ ಪಕ್ಕದಲ್ಲಿ ಕುಳಿತು ವ್ಯಾಪಾರ ಮಾಡುವ ಜನರಿಂದ ನಿಗದಿಪಡಿಸಿದ ದರಗಳಂತೆ ಸಂತೆ ಕರ ವಸೂಲಿ ಮಾಡುವ ಟೆಂಡರ ಪ್ರಕಿಯೆ ಜರುಗಿತು.
ನಗರದ ನಗರಸಭೆ ಸಭಾಭವನದಲ್ಲಿ ನಡೆದ ಕರ ವಸೂಲಾತಿ ಟೆಂಡರನಲ್ಲಿ 8 ಜನ ಭಾಗವಹಿದರು. 8 ಜನರಲ್ಲಿ ಲೀಲಾವಿನ ತಮ್ಮಗೆ ಬೇಕಾದಷ್ಟು ಅನುಕೂಲಕ್ಕೆ ತಕಂತೆ ಬೇಡಿಕೆಯನ್ನು ಬೇಡಿದರು. ಅದರಲ್ಲಿ ಹೆಚ್ಚು ಮೊತ್ತದ ಬೇಡಿಕೆಯನ್ನು ಬೇಡಿದವರಿಗೆ ಲೀಲಾವು ಟೆಂಡರ್ ಅಂತಿಮವಾಯಿತು.
ಲೀಲಾವ ಟೆಂಡರ್ನಲ್ಲಿ ಅತೀ ಹೆಚ್ಚು ಮೊತ್ತದ 16 ಲಕ್ಷ 65 ಸಾವಿರ ರೂ,ಗಳ ಬೇಡಿಕೆಯನ್ನು ಮುತ್ತಪ್ಪ ಹಣಮಂತ ಬಜಂತ್ರಿ ಅವರು ಪಡೆದು ಟೆಂಡರ ತಮ್ಮದಾಗಿಸಿಕೊಂಡರು ಎಂದು ನಗರಸಭೆಯ ಪೌರಾಯುಕ್ತ ಜೋತಿ ಗೀರಿಶ ತಿಳಿಸಿದರು.
2025-26 ನೇ ಸಾಲಿನಲ್ಲಿ ಅತೀ ಹೆಚ್ಚಿನ ಮೊತ್ತದ ಬೇಡಿಕೆಯಾದ 16 ಲಕ್ಷ 65 ಸಾವಿರ ರೂ.ಗಳು ಆಗಿದೆ. ಇದು 12 ತಿಂಗಳದ ವರೆಗೆ ಮಾತ್ರ ಇರುತ್ತದೆ. ಕಳೆದ 2024 - 25 ರ ಸಾಲಿನಲ್ಲಿ 6 ಲಕ್ಷ 40 ಸಾವಿರ ರೂ.ಗಳವರೆಗೆ ಬೇಡಿಕೆಯಾಗಿತ್ತು. ಅದು ಪರಸಪ್ಪ ಮಾಳಿ ಅವರಿಗೆ ಟೆಂಡರ ಆಗಿತ್ತು. ಕೇವಲ 9 ತಿಂಗಳ ಮಾತ್ರ ಟೆಂಡರ ಆಗಿತ್ತು ಎಂದರು.
ಇದೇ ಸಂದರ್ಭದಲ್ಲಿ ಪೌರಾಯುಕ್ತ ಜೋತಿ ಗೀರಿಶ, ಕಂದಾಯ ಅಧಿಕಾರಿ ಯಲ್ಲಪ್ಪ ಬಿದರಿ, ಕಂದಾಯ ನೀರೀಕ್ಷಕ ಅಮೀತ ಯಳಗಾರ, ಕಂದಾಯ ನೀರೀಕ್ಷಕ ಎಸ್.ಆರ್. ದೇವರಮನಿ, ಕರ ವಸೂಲಿಗಾರ ಅನೀಲ ಜೀರಗಾಳ ಸೇರಿದಂತೆ ಕರವಸೂಲಾತಿ ಟೆಂಡರ್ನಲ್ಲಿ ಪ್ರಕ್ರಿಯಲ್ಲಿ 8 ಜನರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 