ತಾಂಬಾ: ಜಮೀನಿನ ಫಲವತ್ತತೆ ಹೆಚ್ಚಿಸಲು ಸಂಚಾರಿ ಕುರಿಗಳು ಪ್ರಯೋಜನಕಾರಿ
ಲೋಕದರ್ಶನ ವರದಿ
ತಾಂಬಾ 01: ಬೇಸಿಗೆಯಲ್ಲಿ ಜಮೀನಿನ ಫಲವತ್ತತೆ ಹೆಚ್ಚಿಸಲು ಸಂಚಾರಿ ಕುರಿಗಳು ಬಹು ಪ್ರಯೋಜನಕಾರಿ ಹೀಗಾಗಿ ಈಗ ಕುರಿಗಾರರಿಗೆ ಬಹು ಬೇಡಿಕೆ ಬಂದಿದೆ. ಜಮೀನುಗಳಲ್ಲಿ ಬೆಳೆಗಳು ಉತ್ತಮವಾಗಿ ಬೆಳೆದಿರುವಾಗ ಜಮೀನಿನಲ್ಲಿ ಕುರಿಗಾರರು ಸಂಚರಿಸಿದರೆ. ರೈತರಿಂದ ಛೀಮಾರಿ ಹಾಕಿಕೊಳ್ಳುವ ಅದೇ ಕುರಿಗಾರರನ್ನು ಬೇಸಿಗೆ ಕಾಲದಲ್ಲಿ ಹಣ ಕೊಟ್ಟು ಕರೆಸಿಕೊಳ್ಳುತ್ತಾರೆ.
ಅವಳಿ ಜಿಲ್ಲೆಯ ನಾನಾ ಕಡೆಗಳಿಂದಲ್ಲದೇ ಬೆಳಗಾವಿ ಜಿಲ್ಲೆಯ ನಾನಾ ಭಾಗಗಳಿಂದ ಬರುವ ನೂರಾರು ಕುರಿಗಾರರನ್ನು ಸಂಚಾರಿ ಕುರಿಗಾರರೆಂದೇ ಕರೆಯುತ್ತಾರೆ. ಕುರಿಗಳ ಗೋಬ್ಬರದ ಮಹತ್ವ ತಿಳಿದಿರುವ ರೈತರು ಕುರಿಗಳ ಮಾಲಿಕರಿಗೆ ತಮ್ಮ ಜಮೀನಿನಲ್ಲಿ ತಂಗಲು ಹಿಂದೆ ಬೀಳುತ್ತಾರೆ. ಹೀಗಾಗಿ ಈ ಭಾಗದಲ್ಲಿ ಹೊಲ, ಗದ್ದೆ ತೋಟಗಳಲ್ಲಿ ಕುರಿಗಾರರು ತಮ್ಮ ಕುರಿಗಳ ಹಿಂಡಿನೋದಿಗೆ ಬಿಡಾರ ಹೂಡಿದ್ದಾರೆ.
ಜಮೀನಿಗೆ ಕುರಿ ಗೊಬ್ಬರ ಉತ್ತಮ. ಕಳೆದೆರಡು ವರ್ಷಗಳಿಂದ ಬೀಕರ ಬರಗಾಲದಿಂದ ತತ್ತರಿಸುವ ರೈತರು ಸಮೂಹ ಬಿತ್ತನೆಗೆ ಬೇಕಾದ ಕನಿಷ್ಠ ಮಳೆಯೂ ಆಗದಿರುವದರಿಂದ ಬಹುತೇಕ ಜಮೀನುಗಳು ಬಿತ್ತನೆಯಾಗದೆ ಖಾಲಿ ಬಿದ್ದಿದ್ದವು ಇದೀಗ ಭೂಮಿಯ ಫಲವತ್ತತೆ ಹೆಚ್ಚಿಸಲು ಕುರಿಗಾರರನ್ನು ಬೆನ್ನು ಬಿದ್ದು ತಮ್ಮ ಹೊಲ, ಗದ್ದೆಗಳಲ್ಲಿ ಕುರಿಗಳ ಹಿಂಡಿನ ದೊಡ್ಡಿಗಳನ್ನು ಹಾಕಿಸುತ್ತಾರೆ.
ಗೊಬ್ಬರಕ್ಕಿಂತ ಉತ್ತಮ: ಹೊಲಗಳಲ್ಲಿ ಕುರಿಗಳನ್ನು ನಿಲ್ಲಿಸಿದರೆ ಕೊಟ್ಟಿಗೆ ಗೊಬ್ಬರಕ್ಕಿಂತಲು ಉತ್ತಮ ರೀತಿಯಲ್ಲಿ ಭೂಮಿ ಹದವಾಗುತ್ತದೆ. ಫಸಲು ಚೆನ್ನಾಗಿ ಬರುತ್ತದೆ ಎಂಬ ಕಾರಣದಿಂದ ರೈತರು ಹೊಲಗಳಲ್ಲಿ ಕುರಿ ಹಿಂಡುಗಳನ್ನು ನಿಲ್ಲಿಸಲು ಹಾತೊರೆಯುತ್ತಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 