ತಾಲೂಕಾ ಆಹಾರ ಸುರಕ್ಷತಾ ಅಧಿಕಾರಿ ನಾಪತ್ತೆ
ಲೋಕದಶನ ವರದಿ
ಮುಧೋಳ 21: ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಹಳೆ ಸರಕಾರಿ ಆಸ್ಪತ್ರೆಯ ಆವರಣದಲ್ಲಿರುವ ತಾಲೂಕಾ ಆಹಾರ ಸುರಕ್ಷತಾ ಅಧಿಕಾರಿಗಳ ಕಾಯರ್ಾಲಯಕ್ಕೆ ಬೀಗ ಜಡಿದಿದ್ದು ಅಲ್ಲಿನ ಅಧಿಕಾರಿಯೇ ನಾಪತ್ತೆಯಾಗಿದ್ದಾರೆ ಎಂದು ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ
ಲಕ್ಷ್ಮಣ ಮಾಲಗಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಾದ್ಯಂತ ಸಂಚರಿಸಿ ಹೊಟೇಲ್ಗಳು, ಖಾಸಗಿ ಹಾಲಿನ ಡೈರಿಗಳು,ರೆಸ್ಟೋರೆಂಟ್ ಗಳಲ್ಲಿನ ಕಲಬೆರೆಕೆ ಆಹಾರ ಪದಾರ್ಥಗಳನ್ನು ತಪಾಸಿಸಿ ಕಂಡು ಹಿಡಿದು ದಂಡ ಹಾಗೂ ಕೇಸ ದಾಖಲಿಸಬೇಕಾದ ಅಧಿಕಾರಿಯೇ ಹೀಗೆ ತಿಂಗಳುಗಟ್ಟಲೆ ನಾಪತ್ತೆಯಾದರೆ ಹೇಗೆ ಎಂದು ಸಂಬಂಧಿಸಿದ ಮೇಲಾಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.ಡೆಪ್ಯುಟೇಶನ್ ಮೇಲೆ ವಿಜಯಪುರ ದಿಂದ ಮುಧೋಳಕ್ಕೆ ವಾರಕ್ಕೆ ಮೂರು ದಿನಗಳ ಕಾಲ ಕಚೇರಿಗೆ ಬಂದು ಕೆಲಸ ಮಾಡಬೇಕಾಗಿದ್ದ ಅಧಿಕಾರಿ ನಿಡೋಣಿ ಬರದೆ ಇರುವುದು ಏಕೆ ಎಂಬ ಮಾಲಗಿಯವರ ಪ್ರಶ್ನೆಗೆ ಉತ್ತರ ದೊರಕಬೇಕಾಗಿದೆ. ಕಚೇರಿಯ ಬಾಗಿಲು ಮೇಲೆ ಬರೆದ ಮೋಬೈಲ್ ಸಂಖ್ಯೆ 8495915014 ಗೆ ಕಾಲ್ ಮಾಡಿದರೂ ಅದು ಅಸ್ತಿತ್ವದಲ್ಲಿ ಇಲ್ಲ ಎಂಬ ಉತ್ತರ ಬರುತ್ತದೆ. ಹೀಗಾದರೆ ಯಾರಿಗೆ ದೂರು ನೀಡಬೇಕು ಎಂಬುದು ಕಗ್ಗಂಟಾಗಿದೆ. ಆದಕಾರಣ ಮೇಲಾಧಿಕಾರಿಗಳು ಈ ಕಡೆ ಶೀಘ್ರ ಗಮನಹರಿಸಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಕಲಬೆರಕೆ ಆಹಾರಕ್ಕೆ ಕಡಿವಾಣ ಹಾಕುವ ದಿಶೆಯಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ನಿಡೋಣಿಯವರಿಗೆ ಸೂಚಿಸಬೇಕೆಂದು ಸಾರ್ವಜನಿಕರ ಪರವಾಗಿ ಮಾಲಗಿ ಒತ್ತಾಯಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 