ಯಶಸ್ವಿ ಜನಸ್ಪಂದನ ಕಾರ್ಯಕ್ರಮ
ಬೆಳಗಾವಿ 04: ಸತತ ಮೂರು ದಿನಗಳಿಂದ ಜನರೊಂದಿಗೆ, ಬೆರೆತು ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯುತ್ತಿರುವ "ಜನಸ್ಪಂದನ ಕಾರ್ಯಕ್ರಮ " ದಕ್ಷಿಣ ಮತಕ್ಷೇತ್ರದ 26 ವಾಡರ್್ ಗಳಲ್ಲಿ ಅತ್ಯಂತ ಯಶಸ್ವಿಯಾಗಿ ಮೂಡಿ ಬಂದಿತು. ಜನರ ದೈನಂದಿನ ಸಮಸ್ಯೆಗಳಾದ ನೀರು, ಒಳಚರಂಡಿ, ರಸ್ತೆ ನಿಮರ್ಾಣ, ಕಸ ವಿಲೇವಾರಿ, ಬೀದಿ ದೀಪಗಳು ಇವುಗಳು ಬಹು ಮುಖ್ಯ ಸಮಸ್ಯೆಗಳಾಗಿ ಕಂಡು ಬಂದವು.
ಒಟ್ಟಾರೆ, 942 ಬಂದ ಸಮಸ್ಯೆಗಳ ಅಜರ್ಿ ಗಳಲ್ಲಿ 97 ವಿಷಯಗಳ ಬಗ್ಗೆ ಅಧಿಕಾರಿಗಳ ಸಮ್ಮುಖದಲ್ಲಿ ಶಾಸಕ ಅಭಯ ಪಾಟೀಲ ರವರು ಪರಿಹಾರ ಒದಗಿಸುವ ಮೂಲಕ ಜನರ ಮನ ಗೆದ್ದರು...! ಇನ್ನೂಳಿದ ಸಮಸ್ಯೆ ಕುರಿತಂತೆ ಸ್ವತಂ ಶಾಸಕರು, ಅಧಿಕಾರಿಗಳ ತಂಡ ಕಟ್ಟಿಕೊಂಡು ನಾಳೆಯಿಂದ ಬೆಳಿಗ್ಗೆ : 7:00 ಯಿಂದ ಸಂಬಂಧಿಸಿದ ಸಮಸ್ಯೆಗಳ ಸ್ಥಳೀಯ ಪರಿಶೀಲನೆ ಮಾಡುವ ಕಾರ್ಯ ಕೈಗೊಂಡಿದ್ದು, ಇದು ಕೂಡ ಜನಸಾಮಾನ್ಯರ ಮೆಚ್ಚುಗೆ ಸಂಗತಿ ಎನ್ನಬಹುದು..., ಈ ಹೊಸ ಪ್ರಯೋಗದ ಕುರಿತು ಇಡೀ ಕ್ಷೇತ್ರದ ಜನತೆ ಸಂತಸ ವ್ಯಕ್ತ ಪಡಿಸುವುದಲ್ಲದೇ ಶಾಸಕರ ಕಾರ್ಯ ವೈಖರಿ ಮನೆ ಮನೆ ಮಾತಾಗಿದೆ.
ಅಲ್ಲದೇ, ಶಾಸಕರು ಹೇಳುವಂತೆ, ಜನರ ಈ ಸಮಸ್ಯೆ ಗಳಿಗೆ ಸಂಪೂರ್ಣ ಪರಿಹಾರ ಸಿಕ್ಕಾಗ ಮಾತ್ರ, ಈ ಜನಸ್ಪಂದನ ಕಾರ್ಯಕ್ರಮ ಒಂದು ಅರ್ಥ ಪೂರ್ಣ ಕಾರ್ಯಕ್ರಮ, ಹಾಗಾಗಿ ಅಂದುಕೊಂಡಂತೆ, ಎಲ್ಲಾ ಇಲಾಖೆಗಳ ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿ ಜನರ ಸಹಭಾಗಿತ್ವದೊಂದಿಗೆ ಅವರ ಆಶೋತ್ತರಗಳನ್ನು ಈಡೇರಿಸುವತ್ತ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು!
ಈ ಮೊದಲನೆ ಹೆಜ್ಜೆಯ ಇಡೀ ಕ್ಷೇತ್ರದ ಸವರ್ಾಂಗೀಣ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿಮರ್ಾಣ ವಾಗಬೇಕು, ಒಟ್ಟಾರೆ, ಜನಸ್ಪಂದನ ಕಾರ್ಯಕ್ರಮ ಜನತೆಯ ಭಾವನೆ ಗಳ ಅವರ ಕಷ್ಟ, ನೋವುಗಳ ಪರಿಹಾರದ ಅನಾವರಣವಾಗಿ ಜರುಗುತ್ತಿರುವುದು ಖುಷಿ ತಂದಿದೆ.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 