ದಿನೇಶ ಗುಂಡುರಾವಗೆ ಸಮಿಕ್ಷಾ ವರದಿ ಸಲ್ಲಿಕೆ
ಕಾಗವಾಡ 04: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಗಿರುವ ಹಿನ್ನಡೆ ಕೇವಲ ಪಕ್ಷದಲ್ಲಿಯ ಭಿನ್ನಾಭಿಪ್ರಾಯೇ ಕಾರಣವೆಂದು ರಾಜ್ಯ ಸತ್ಯ ಶೋಧನಾ ಸಮೀತಿ ಸದಸ್ಯರು, ಹಾಗೂ ಮಾಜಿ ಇಂಧನ ಸಚಿವರು ವೀರಕುಮಾರ ಪಾಟೀಲ ಕಾಗವಾಡದಲ್ಲಿ ಹೇಳಿದರು.
ಬುಧವಾರ ರಂದು ಕಾಗವಾಡದಲ್ಲಿ ಕಾರ್ಯಕ್ರಮದ ನಿಮಿತ್ಯವಾಗಿ ಆಗಮಿಸಿದಾಗ ಪಕ್ಷದ ಚಟುವಟಿಕೆಗಳ ಬಗ್ಗೆ ಸತ್ಯ ಶೋಧನಾ ಸಮೀತಿ ಸದಸ್ಯರು, ರಾಜ್ಯದ ಕಾಂಗ್ರೆಸ್ ಪಕ್ಷದ ಆಧ್ಯಕ್ಷ ದಿನೇಶ ಗುಂಡುರಾವ ಇವರಿಗೆ ಸಮಿಕ್ಷಾ ವರದಿ ಸಲ್ಲಿಸಿದ್ದ ಬಗ್ಗೆ ಮಾಹಿತಿ ನೀಡಿದರು.
ಸತ್ಯ ಶೋಧನಾ ಸಮೀತಿಯ ಸದಸ್ಯರಾಗಿ ಮಾಜಿ ಸಚಿವ ರಾಯರೆಡ್ಡಿ, ಮಾಜಿ ಸಭಾಪತಿಗಳಾದ ವೀರಣ್ಣಾ ಮತ್ತಿಕಟ್ಟಿ, ಸುದರ್ಶನ ಇವರೊಂದಿಗೆ ನಾನು ಒಬ್ಬಸಮೀತಿಯ ಸದಸ್ಯನಾಗಿದ್ದೆ.
ದೇಶದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ 28 ಸ್ಥಾನಗಳ ಪೈಕಿ ಒಂದೇ ಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಸಾಧಿಸಿದೆ. ಈ ಬಗ್ಗೆ ಎಲ್ಲ ಎಂಪಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಪಕ್ಷದ ಕಾರ್ಯಕರ್ತರನ್ನು ಸಮಕ್ಷವಾಗಿ ಭೇಟಿನೀಡಿ ಚರ್ಚಿಸಿದಾಗ ಪಕ್ಷದ ಆಂತರಿಕ ಕಲಹೆ ಕಾರಣವೆಂದು ಗುರುತಿಸಲಾಗಿದೆ. ಪಕ್ಷದ ಹಿರಿಯರು ಶೀಘ್ರದಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಪಕ್ಷದ ಒಗ್ಗಟ್ಟಿಗಾಗಿ ಗ್ರಾಮಗಳ ಭೂತ ಮಟ್ಟಗಳಿಂದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗಟ್ಟಿಗೊಳಿಸುವ ಜವಾಬ್ದಾರಿ ಮುಖಂಡರು ಹೊಂದಿದ್ದಾರೆಯೆಂದು ಮಾಜಿ ಸಚಿವ ವೀರಕುಮಾರ ಪಾಟೀಲ ಹೇಳಿದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 