ವಿದ್ಯಾರ್ಥಿ ಜೀವನವು ಬದುಕಿನ ಸುವರ್ಣಾವಧಿ : ಶಿಕ್ಷಕ ಸಾಹಿತಿ ಸಂತೋಷ ಬಂಡೆ
Student life is the golden age of life: Teacher and writer Santhosh Bande
ಕೊಲ್ಹಾರ 07 : ವಿದ್ಯಾರ್ಥಿ ಜೀವನವು ಭವಿಷ್ಯದ ಯಶಸ್ಸಿಗೆ ಭದ್ರ ಬುನಾದಿಯಾಗಿದ್ದು, ಈ ಹಂತದಲ್ಲಿ ಕಲಿಯುವ ಸದ್ಗುಣ, ಶಿಕ್ಷಣ, ಸಮಯ ಪರಿಪಾಲನೆಯು ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಿ, ಜೀವನದ ಸವಾಲುಗಳನ್ನು ಎದುರಿಸಲು ಸಿದ್ಧಗೊಳಿಸುತ್ತದೆ ಎಂದು ನಾಗಠಾಣದ ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು. ತಾಲೂಕಿನ ಮಸೂತಿ ಗ್ರಾಮದ ಗುರು ಸಂಗನಬಸವೇಶ್ವರ ವಜ್ರ ಮಹೋತ್ಸವ ಪ್ರೌಢ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡ ಹತ್ತನೇ ವರ್ಗದ ವಿದ್ಯಾರ್ಥಿಗಳ ಶುಭ ಕೋರುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನವು ಬದುಕಿನ ಸುವರ್ಣಾವಧಿ. ನಿಶ್ಚಿತಗುರಿ, ಅಚಲ ಶೃದ್ಧೆ, ಅವಿರತ ಪ್ರಯತ್ನ, ಸರಳವಾದ ಆಲೋಚನೆಗಳಿಂದ ಇಂದಿನ ಮಕ್ಕಳು ಸೃಜನಶೀಲ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ತಾಯಿ-ತಂದೆ-ಗುರುಗಳನ್ನು ಪ್ರೀತಿಯಿಂದ ಕಾಣುತ್ತಾ, ಅವರ ಮಾರ್ಗದರ್ಶನದಲ್ಲಿ ದೇಶದ ಶ್ರೇಷ್ಠ ವ್ಯಕ್ತಿಗಳಾಗಿ ರೂಪುಗೊಳ್ಳಿ ಎಂದರು. ಅಧ್ಯಯನದ ಅಭಿರುಚಿಯೊಂದಿಗೆ ಪ್ರತಿನಿತ್ಯ ಮಕ್ಕಳು ಜ್ಞಾನಾರ್ಜನೆಯಲ್ಲಿ ಹೊಸತನ ಹುಡುಕಿ, ಓದಿನಲ್ಲಿ ನವೋತ್ಸಾಹ ತುಂಬಿಕೊಂಡು ಅಪಾರಜ್ಞಾನ ಸಂಪಾದಿಸಿ, ಶ್ರೇಷ್ಠ ಸಾಧನೆಯೊಂದಿಗೆ ಸಮಾಜದ ಋಣಭಾರ ತೀರಿಸುವಂತಾಗಬೇಕು. ಇಚ್ಚಾಶಕ್ತಿ, ದೃಢ ಪ್ರಯತ್ನದಿಂದ ಯಶಸ್ಸು ಪಡೆಯಬೇಕು. ಹೊಸ ಪದ, ವಾಕ್ಯ ರಚನೆ, ವ್ಯಾಕರಣ, ಬರವಣಿಗೆ ಶೈಲಿ ಸುಧಾರಣೆಗೆ ಮತ್ತು ಅಲ್ಪ ಸಮಯದಲ್ಲಿ ಜಾಗತಿಕ ವಿದ್ಯಮಾನ ಅರಿಯಲು, ದಿನಪತ್ರಿಕೆಗಳ ಓದಿನ ಹವ್ಯಾಸ ಪ್ರತಿ ವಿದ್ಯಾರ್ಥಿಗೆ ಅತ್ಯಗತ್ಯ ಎಂದು ಹೇಳಿದರು.
ಜ್ಞಾನಾರ್ಜನೆ ವಿದ್ಯಾರ್ಥಿಗಳ ಮುಖ್ಯ ಗುರಿ. ಕೇವಲ ಪರೀಕ್ಷೆಗಾಗಿ ಓದದೆ, ಜ್ಞಾನಕ್ಕಾಗಿ ಶಿಸ್ತು, ಶ್ರದ್ಧೆಯಿಂದ ಓದಬೇಕು. ಸಮಯ ವ್ಯರ್ಥ ಮಾಡದೆ, ವಿದ್ಯೆಯ ಮಹತ್ವ ಅರಿತು, ಕಠಿಣ ಪರಿಶ್ರಮದಿಂದ ಜ್ಞಾನ ಸಂಪಾದಿಸುವತ್ತ ಮನಸ್ಸನ್ನು ಕೇಂದ್ರೀಕರಿಸಬೇಕು. ಮಕ್ಕಳು ಶಾಲೆಯ ಬೌದ್ಧಿಕ ಸಂಪತ್ತಾಗಿದ್ದು, ಅವರು ಶಾಲೆಯ ಕೀರ್ತಿ ಪತಾಕೆ ಎತ್ತಿ ಹಿಡಿಯುವ ಆಧಾರಸ್ತಂಭಗಳಾಗಬೇಕು ಎಂದು ತಿಳಿಸಿದರು. ಪ್ರೌಢಶಾಲೆಯ ಅಧ್ಯಕ್ಷ ಸಿ.ಪಿ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಸ್ತು, ತಾಳ್ಮೆ, ಸಂಯಮ, ಗುರಿ ಬಹಳ ಮುಖ್ಯ. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಜೀವನದ ಮೌಲ್ಯ-ಸಂಸ್ಕಾರಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಈ ವೇಳೆ ವ್ಹಿ ವ್ಹಿ ಸಂಘದ ಸದಸ್ಯ ಬಿ.ಎ. ಪಾಟೀಲ, ರಾಮಣ್ಣ ಯರಂತಲಿ, ಬೋರಮ್ಮ ಬಿಸ್ಟಗೊಂಡ, ಮುಖ್ಯ ಶಿಕ್ಷಕ ಎಚ್.ಆರ್. ರಾಠೋಡ, ದೈಹಿಕ ಶಿಕ್ಷಕ ಎಂ.ಜಿ. ಪಾಟೀಲ, ಜಗದೀಶ ಸಾಲಳ್ಳಿ, ಎಸ್.ಐ. ಬಿರಾದಾರ, ಸಿ.ಎ. ಗೂಗಿಹಾಳ ಸೇರಿದಂತೆ ಶಾಲೆಯ ಶಿಕ್ಷಕ ಸಿಬ್ಬಂದಿ, ಮಕ್ಕಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಕ್ಕೆ ಆಯ್ಕೆಯಾದ ವೈಷ್ಣವಿ ಬಂಡಿವಡ್ಡರ, ಐಶ್ವರ್ಯ ಹಂಗರಗಿ ಹಾಗೂ ಎಸ್ಎಸ್ಎಲ್ಸಿ ಪರೀಕ್ಷಾ ಸಾಧಕರನ್ನು ಸನ್ಮಾನಿಸಲಾಯಿತು. ಶಿಕ್ಷಕ ಜಿ.ಎಸ್. ಗರಸಂಗಿ ಕಾರ್ಯಕ್ರಮ ನಿರ್ವಹಿಸಿದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 