ಅನುತ್ಪಾದಕ ಆಸ್ತಿ ತಡೆಗೆ ಆರ್.ಬಿ.ಐನಿಂದ ಕಠಿಣ ಕ್ರಮ
ಮುಂಬೈ,
ಡಿ 28, ಸಾಲ ವಸೂಲಾತಿಯನ್ನು ತ್ವರಿತಗೊಳಿಸಿ ಅನುತ್ಪಾದಕ ಆಸ್ತಿಗೆ ತಡೆ ಹಾಕುವ ಮತ್ತು ಆರ್ಥಿಕ ಸಮಸ್ಯೆಗಳಿಗೆ
ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ 5 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಾಲ ಪಡೆದಿರುವವರ ವಿವರಗಳನ್ನು
ದೊಡ್ಡ ಸಾಲಗಳ ಮಾಹಿತಿಯ ಕೇಂದ್ರೀಯ ಭಂಡಾರ-ಸಿಆರ್ಐಎಲ್ಸಿಗೆ ಸಲ್ಲಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್
ಸೂಚಿಸಿದೆ.ಆರ್.ಬಿ.ಐ ದೊಡ್ಡ ಸಹಕಾರಿ ಬ್ಯಾಂಕುಗಳು, ವಾಣಿಜ್ಯ ಬ್ಯಾಂಕುಗಳು, ಭಾರತೀಯ ಹಣಕಾಸು ಸಂಸ್ಥೆಗಳು
ಮತ್ತು ಕೆಲವು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಿಗಾಗಿ ಆರ್ಬಿಐ ಸಿಆರ್ಐಎಲ್ಸಿ ಸೃಷ್ಟಿಸಿದೆ.
ಆ ಮೂಲಕ ಆರ್ಥಿಕ ಸಂಕಷ್ಟಗಳನ್ನು ಮುಂಚಿತವಾಗಿಯೇ ಗುರುತಿಸಿ ಅವುಗಳ ಮೇಲೆ ನಿಗಾವಹಿಸಿ, ಅಂತಹ ಸಾಲಗಳ
ವಸೂಲಿ ವ್ಯವಸ್ಥೆಯನ್ನು ಬಲವರ್ಧನೆಗೊಳಿಸುವುದು ಇದರ ಉದ್ದೇಶವಾಗಿದೆ.ಆರ್,ಬಿ.ಐ ಇತ್ತೀಚೆಗೆ ತನ್ನ
ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ ಆರ್ಬಿಐ, ೫೦೦ ಕೋಟಿ ರೂಪಾಯಿ ಮತ್ತು ಅದಕ್ಕೂಅಧಿಕ ಅಸ್ತಿ
ಹೊಂದಿರುವ ಬ್ಯಾಂಕುಗಳನ್ನು ಸಿಆರ್ಐಎಲ್ಸಿ ವ್ಯಾಪ್ತಿಗೆ ತರಲಾಗುವುದು ಎಂದು ಪ್ರಕಟಿಸಿತ್ತು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 