ರೋಟರಿ ಕ್ಲಬ್ ಸದಸ್ಯರಿಂದ ರೇಲ್ವೆ ನಿಲ್ದಾಣಕ್ಕೆ ಸ್ಟೀಲ್ ವ್ಹೀಲ್ ಚೆರ್ ಕೊಡುಗೆ
Steel wheel chair donated to railway station by Rotary Club members
ಕಾರವಾರ 12: ಕೊಂಕಣ ರೇಲ್ವೆ ನಿಲ್ದಾಣದಲ್ಲಿ ವಿಕಲಚೇತನ ವ್ಯಕ್ತಿಗಳಿಗೆ ಅನುಕೂಲವಾಗಲೆಂದು ಕಾರವಾರ ರೋಟರಿ ಕ್ಲಬ್ ಸದಸ್ಯರು ತಮ್ಮ ಸ್ವಂತ ದೇಣಿಗೆ ಮುಖಾಂತರ ಒಂದು ಸ್ಟೀಲ್ ವ್ಹೀಲ್ ಚೇರ್ನ್ನು ಹಸ್ತಾಂತರಿಸಿದರು.
ವ್ಹೀಲ್ ಚೇರ್ ಸ್ವೀಕರಿಸಿದ ಕೊಂಕಣ ರೇಲ್ವೆ ಪ್ರಾದೇಶಿಕ ವಿತ್ತೀಯ ಅಧಿಕಾರಿ ಚಿತ್ತರಂಜನ್ ಜೈಸವಾಲ ಕಾರವಾರ ರೋಟರಿ ಕ್ಲಬ್ ಸದಸ್ಯರ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು
ಕಾರವಾರ ರೋಟರಿ ಕ್ಲಬ್ ಅಧ್ಯಕ್ಷ ಎಮ್. ಪಿ. ಕಾಮತ ಮಾತನಾಡಿ ರೋಟರಿ ಸಂಸ್ಥೆಯ ಸದಸ್ಯರು ಹಲವಾರು ಸಮುದಾಯ ಸೇವೆಯಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದು ರೇಲ್ವೆ ನಿಲ್ದಾಣಕ್ಕೆ ನೀಡಿದ ವ್ಹೀಲ್ ಚೇರ್ ಕೊಡುಗೆ ಒಂದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೋಂಕಣ ರೇಲ್ವೆ ಇಲಾಖೆಯ ಅಧಿಕಾರಿಗಳಾದ ವಿತ್ತೀಯ ಅಧಿಕಾರಿ, ಉಪೇಂದ್ರ, ಹಿರಿಯ ಸ್ಟೇಷನ್ ಮಾಸ್ಟರ್, ಉದಯ ಸಾರಂಗ, ಕಂಪ್ಯೂಟರ್ ಸಿಸ್ಟೆಮ್ ಎನಾಲಿಸ್ಟ ಗೀರೀಶ ಜುಮ್ನಲ್ಕರ್, ಹಿರಿಯ ವಿಭಾಗೀಯ ಅಭಿಯಂತ ಕುಮಾರಸ್ವಾಮಿ, ರೆಲ್ವೇ ಅಧಿಕಾರಿ ಅನಿಲ ತಳೇಕರ ಹಾಗು ಇತರರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಕೋಷಾಧ್ಯಕ್ಷ ಗುರು ಹೆಗ್ಡೆ, ನಾಗರಾಜ ಜೋಷಿ, ಪ್ರಸನ್ನಾ ತೆಂಡೂಲ್ಕರ್, ಅಮರನಾಥ ಶೆಟ್ಟಿ, ಮೋಹನ ನಾಯ್ಕ, ಪಾಂಡುರಂಗ್ ಎಸ್ ನಾಯ್ಕ, ಮುರಲಿ ಗೋವೇಕರ್, ವಿನೋದ್ ಕೊಠಾರ್ಕರ್, ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 