ನಾಯಕ ಸುಭೇದಾರ ದಿ ಬಸವರಾಜ ಕಾಡಪ್ಪಾ ಚೌಗಲಾ ಪುತ್ಥಳಿ ಅನಾವರಣ
Statue of Nayaka Subhedar Basavaraja Kadappa Chowgala unveiled
ಹುಕ್ಕೇರಿ 26: ತಾಲೂಕಿನ ಯರಗಟ್ಟಿ ಗ್ರಾಮದಲ್ಲಿ ಭಾರತಾಂಬೆಯ ಹೆಮ್ಮೆಯ ಯೋಧರಾದ ನಾಯಕ ಸುಭೇದಾರ ದಿ. ಬಸವರಾಜ ಕಾಡಪ್ಪಾ ಚೌಗಲಾ ಅವರ ಪುತ್ಥಳಿ ಅನಾವರಣ ಸಮಾರಂಭ ಭಾವಪೂರ್ಣವಾಗಿ ಜರುಗಿತು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು 31-01-2025 ರಂದು ಹುತಾತ್ಮರಾಗಿದ್ದು, ಅವರ ಸ್ಮರಣಾರ್ಥವಾಗಿ ಗ್ರಾಮದಲ್ಲಿ ಪುತ್ಥಳಿ ನಿರ್ಮಿಸಲಾಗಿದೆ.ಹುಕ್ಕೇರಿ ಅವುಜಿಕರ ಮಠದ ಅಭಿನವ ಮಂಜುನಾಥ ಮಹಾರಾಜರು ಮಾತನಾಡಿ, ಜಾತಿ-ಮತ ಭೇದವಿಲ್ಲದೆ ಎಲ್ಲರಲ್ಲೂ ಸಮಾನತೆ ಕಾಣುವ ಯೋಧ ಮತ್ತು ರೈತ ದೇಶದ ಕಣ್ಣು ಎಂದರು.
ಹುತಾತ್ಮ ಬಸವರಾಜ ಚೌಗಲಾ ಅವರು ದೇಶ ಸೇವೆಯ ಮೂಲಕ ತಮ್ಮ ಜೀವನವನ್ನು ಸಾರ್ಥಕಗೊಳಿಸಿದ್ದಾರೆ ಎಂದು ಹೇಳಿದರು.ದಿವ್ಯ ಸಾನಿಧ್ಯ ವಹಿಸಿದ್ದ ಸುರಗೀಶ್ವರ ಸಂಸ್ಥಾನ ಮಠದ ಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಇಂತಹ ಪುತ್ಥಳಿ ನಿರ್ಮಾಣವು ಇತರರಿಗೆ ಪ್ರೇರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕರಾದ ವಿನಯಗೌಡ ಪಾಟೀಲ, ಪೃಥ್ವಿ ಕತ್ತಿ ಸೇರಿದಂತೆ ಕುಟುಂಬ ಸದಸ್ಯರಾದ ಕಾಡಪ್ಪಾ ಬಸವಂತಪ್ಪಾ ಚೌಗಲಾ, ಕಾಶೀಬಾಯಿ, ರಾಜೇಶ್ವರಿ, ರವೀಂದ್ರ, ಸುಮಿತ್ರಾ, ಶಶಿಕಾಂತ ಚೌಗಲಾ ಉಪಸ್ಥಿತರಿದ್ದರು.
ಜೊತೆಗೆ ಹುಕ್ಕೇರಿ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಮಹಾದೇವ ಬನ್ನಕ್ಕಗೋಳ, ಉಪಾಧ್ಯಕ್ಷ ಪುಂಡಲೀಕ ಕೋಟಿನತೋಟ ಕೆಂಪಣ್ಣಾ ಚೌಗಲಾ ಮಾಜಿ ಸೈನಿಕರು ,ಶಶಿಕಾಂತ ಮನಸ ಮಾಜಿ ಸೈನಿಕರು, ಹಾಗೂ ಹುಕ್ಕೇರಿ ಹಾಲಿ ಮತ್ತು ಮಾಜಿ ಸೈನಿಕರು, ಬೆಳಗಾವಿ ಜಿಲ್ಲೆಯ ಮಾಜಿ ಸೈನಿಕರು, ಮತ್ತು ಗ್ರಾಮಸ್ಥರುಹಾಗೂ ಅನೇಕ ಮಾಜಿ ಸೈನಿಕರು, ಯರಗಟ್ಟಿ ಮತ್ತು ಇಂಗಳಿ ಗ್ರಾಮದ ಗಣ್ಯರು ಭಾಗವಹಿಸಿದ್ದರು.ಕಾರ್ಯಕ್ರಮವನ್ನು ಶಿವಾನಂದ ನೊಗನಿಹಾಳ ಸ್ವಾಗತಿಸಿದರು. ಕೆಂಪಣ್ಣಾ ಚೌಗಲಾ ಮಾಜಿ ಸೈನಿಕರುನಿರೂಪಣೆ ನಡೆಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 