ಜೂ.29ರಂದು ಮೂರ್ತಿ ಪ್ರತಿಷ್ಠಾಪನೆ: ಬೃಹತ್ ಬೈಕ್ ರಾ​‍್ಯಲಿ

ಜೂ.29ರಂದು ಮೂರ್ತಿ ಪ್ರತಿಷ್ಠಾಪನೆ: ಬೃಹತ್ ಬೈಕ್ ರಾ​‍್ಯಲಿ  Statue installation on June 29: Huge bike rally...

ತಾಳಿಕೋಟಿ 28: ಪಟ್ಟಣದ ಆರಾಧ್ಯ ದೈವ ಖಾಸ್ಗತೇಶ್ವರ ಮಠದ ಲಿಂಗೈಕ್ಯ ವಿರಕ್ತ ಮಹಾಸ್ವಾಮಿಗಳ ನೂತನ ಮೂರ್ತಿ ಪ್ರತಿಷ್ಠಾಪನೆ ನಿಮಿತ್ಯವಾಗಿ ಪಟ್ಟಣದಲ್ಲಿ ಬೃಹತ್ ಯುವ ಬೈಕ್ ರಾ​‍್ಯಲಿ ಜೂ.29ರಂದು ನಡೆಯಲಿದೆ.

ಪಟ್ಟಣದ ಮಿಣಜಗಿ ಕ್ರಾಸ್ ನಲ್ಲಿರುವ ಕೌಟಿಲ್ಯ ಅಕಾಡೆಮಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ಖಾಸ್ಗತೇಶ್ವರ ಮಠದ ಪರಮ ಭಕ್ತ ರಾಜಶೇಖರ ಸಜ್ಜನ ಇವರ ಕುಟುಂಬಸ್ಥರ ನೇತೃತ್ವದಲ್ಲಿ ನಿರ್ಮಾಣಗೊಂಡಿರುವ ಲಿಂಗೈಕ್ಯ ಪರಮ ಪೂಜ್ಯ ವಿರಕ್ತಮಹಾ ಸ್ವಾಮಿಗಳ 4ಅಡಿ ಎತ್ತರದ ಈ ಭವ್ಯ ಮೂರ್ತಿಯನ್ನು ಕೌಟಿಲ್ಯ ಅಕಾಡೆಮಿಯಿಂದ ಮೆರವಣಿಗೆಯ ಮೂಲಕ ತರಲಾಗುತ್ತಿದ್ದು ಇದರ ನಿಮಿತ್ಯವಾಗಿ ಇಂದು ಸಂಜೆ 4:30 ಘಂಟೆಗೆ ಪಟ್ಟಣದ ಬಸವೇಶ್ವರ ವೃತ್ತದಿಂದ ಖಾಸ್ಗತೇಶ್ವರ ಮಠದವರೆಗೆ ಬೈಕ್ ರಾ​‍್ಯಲಿ ಮೂಲಕ ತರಲು ನಿರ್ಧರಿಸಿದ್ದು ಇದರಲ್ಲಿ ಮಠದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಶ್ರೀಮಠದ ಸಿದ್ಧಲಿಂಗ ದೇವರು ತಿಳಿಸಿದ್ದಾರೆ.