ಬೆಳಗಾವಿ 17: ಎಸ್.ಡಿ.ಇಂಚಲ ಹಾಗೂ ಉಳುವೀಶ ಹುಲೆಪ್ಪನವರಮಠ ರಾಜ್ಯಮಟ್ಟದ ಕಾವ್ಯಪ್ರಶಸ್ತಿ ಸಮಾರಂಭವು ದಿ. 19ರಂದು ಸಂಜೆ 4ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಲಿದೆ.
ಮುಖ್ಯ ಅತಿಥಿಗಳಾಗಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಆಗಮಿಸಲಿದ್ದು, ಹಂಪಿ ವಿವಿ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಸ್ಮಾರಕ ಉಪನ್ಯಾಸ ನೀಡಲಿದ್ದಾರೆ. ಸಾಹಿತಿ ಪ್ರಿ.ಬಿ.ಎಸ್.ಗವಿಮಠ, ಡಾ.ಬಸವರಾಜ ಜಗಜಂಪಿ, ಡಾ.ಸರಜೂ ಕಾಟ್ಕರ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ.ಗುರುದೇವಿ ಹುಲೆಪ್ಪನವರಮಠ ವಹಿಸಲಿದ್ದಾರೆ.
ಬಾಗಲಕೋಟೆ ಜಿಲ್ಲೆ, ಮುಧೋಳ ತಾಲೂಕಿನ ರನ್ನಬೆಳಗಲಿಯ ಸುರೇಶ ರಾಜಮಾನೆ ಅವರ ಕಾವ್ಯಕೃತಿ ‘ರಾಜಿಯಾಗದ ರಕ್ತದ ಕಣ’ ಕೃತಿಗೆ 2024ನೇ ಸಾಲಿನ ಕವಿ ಎಸ್.ಡಿ.ಇಂಚಲ ಕಾವ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ವಿಜಯಪುರ ಜಿಲ್ಲೆ ಸಿಂದಗಿಯ ಪ್ರೊ. ರಾ. ಶಿ. ವಾಡೇದ ಅವರ ಕಾವ್ಯಕೃತಿ ‘ಎತ್ತಿನ ಬಂಡಿ’ ಕೃತಿಗೆ ಕವಿ ಉಳವೀಶ ಹುಲೆಪ್ಪನವರಮಠ ಮಕ್ಕಳ ಕಾವ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪ್ರಧಾನ ಕಾರ್ಯದರ್ಶಿ ಡಾ.ಮಹೇಶ ಗುರನಗೌಡರ ಹಾಗೂ ಕೋಶಾಧ್ಯಕ್ಷೆ ವಿನಿತಾ ಹಂಚಿನಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.